ಚಿಕ್ಕಮಗಳೂರು: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎ.ಪೂರ್ಣೇಶ್ 4426 ಮತಗಳಿಸುವ ಮೂಲಕ 1156 ಮತಗಳ ಅಂತರದಲ್ಲಿ ನಿರ್ಧೆಶಕರಾಗಿ ಆಯ್ಕೆಯಾದರು.
ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಬುಧವಾರ ನಡೆದ ಮತ ಎಣಿಕೆಯಲ್ಲಿ ಚುನಾವಣಾಧಿಕಾರಿ ಲಕ್ಷ್ಮೀನಾರಾಯಣ್ ಆಯ್ಕೆಯನ್ನು ಘೋಷಿಸಿ ವಿಜೇತ ಅಭ್ಯರ್ಥಿ ಪೂರ್ಣೇಶ್ ಅವರಿಗೆ ಪ್ರಮಾಣ ಪತ್ರ ವಿತರಿಸಿದರು.
ಎಐಟಿ ಪಾಲಿಟೆಕ್ನಿಕ್ ಬ್ಲಾಕ್ನಲ್ಲಿ ಬೆಳಗ್ಗೆ 9 ಗಂಟೆಯಿಂದ 4 ಟೇಬಲ್ನಲ್ಲಿ 7 ಸುತ್ತು ಮತ ಎಣಿಕೆ ಮಾಡಲಾಯಿತು. ಎ.ಪೂರ್ಣೇಶ್ 4426 ಸಮೀಪ ಪ್ರತಿಸ್ಪಧಿ ಬಿ.ಎಲ್.ಸಂದೀಪ್ 2370, ನಾಗರಾಜ್ ಬ್ಯಾರವಳ್ಳಿ 1366, ಐಸಿ.ನವೀನ್ಕುಮಾರ್ 49, ಮತ ಪಡೆದಿದ್ದಾರೆ. 47 ಮತಗಳು ತಿರಸ್ಕೃತಗೊಂಡಿದೆ. ಜಿಲ್ಲೆಯ 13342 ಮತದಾರರಲ್ಲಿ 9158 ಮಂದಿ ಮತದಾನವಾಗಿತ್ತು.
ಚುನಾವಣೆಯನ್ನು ಪ್ರತಿಷ್ಟೆಯಾಗಿ ಸ್ವೀಕರಿಸಿದ್ದ ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ನಾನಾ ಕಸರತ್ತು ನಡೆಸಿದ್ದರು. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ನಾಗರಾಜ್ ಬ್ಯಾರವಳ್ಳಿ ಮತ್ತು ಪೂರ್ಣೇಶ್ ನಡುವೆ ನಡೆದ ಸ್ಪರ್ಧೆಯಲ್ಲಿ ನಾಗರಾಜ್ ಬ್ಯಾರವಳ್ಳಿ ಗೆಲುವು ಸಾಸಿಧಿದ್ದರು. ಪುನರಾಯ್ಕೆ ಬಯಸಿ ಇಬ್ಬರೂ ಚುನಾವಣಾ ಕಣದಲ್ಲಿದ್ದರು. ಜೊತೆಗೆ ಬಿ.ಎಲ್.ಸಂದೀಪ್ ಮತ್ತು ನವೀನ್ ಸ್ಪಧಿಸಿದ್ದರು.
A. Purnesh elected as director of The State Peasants Association
Discussion about this post