ಚಿಕ್ಕಮಗಳೂರು: ಡಿಸೆಂಬರ್ ೧೭ ರಿಂದ ೧೯ ರವರೆಗೆ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮದ ಸಂಬಂಧ ಸಂಕೀರ್ತನಾ ಯಾತ್ರೆ ಹಾಗೂ ಶೋಭಾಯಾತ್ರೆ ಮೆರವಣಿಗೆ ನಡೆಯಲಿದ್ದು, ಮೆರವಣಿಗೆ ಮಾರ್ಗದಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಮೆರವಣಿಗೆ ಸಾಗುವ ಸಂದರ್ಭದಲ್ಲಿ ಯಾವುದೇ ರೀತಿಯ ಅಡಚಣೆಗಳು ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ವಾಹನ ನಿಲುಗಡೆ ಮತ್ತು ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶಿಸಿದ್ದಾರೆ.
ಡಿಸೆಂಬರ್ ೧೭ ರಂದು ಬೆಳಿಗ್ಗೆ ೬ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ (ವಾಹನಗಳ ನಿಲುಗಡೆಗೆ ಮಾತ್ರ ನಿಷೇಧ) ಕೆ.ಎಂ.ರಸ್ತೆ (ಬೋಳರಾಮೇಶ್ವರ ದೇವಸ್ಥಾನದಿಂದ ತೊಗರಿಹಂಕಲ್ ಸರ್ಕಲ್ವರೆಗೆ), ಐ.ಜಿ.ರಸ್ತೆ (ತೊಗರಿಹಂಕಲ್ ಸರ್ಕಲ್ನಿಂದ ಶೃಂಗಾರ್ ಸರ್ಕಲ್) ಮತ್ತು ರತ್ನಗಿರಿ ರಸ್ತೆ (ಶೃಂಗಾರ್ ಸರ್ಕಲ್ನಿಂದ ಕಾಮಧೇನು ಗಣಪತಿ ದೇವಸ್ಥಾನದ ವರೆಗೆ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ. ಹಳೇ ಜೈಲು ಕಾಂಪೌಂಡ್ ಮತ್ತು ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಬದಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಡಿಸೆಂಬರ್ ೧೮ ರಂದು ಬೆಳಿಗ್ಗೆ ೬ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ಕಾಮದೇನು ಗಣಪತಿ ದೇವಸ್ಥಾನದಿಂದ ಜಾಲಿಫ್ರೆಂಡ್ ಸರ್ಕಲ್, ಜಾಲಿ ಫ್ರೆಂಡ್ ಸರ್ಕಲ್ ನಿಂದ ಕೆ.ಇ.ಬಿ ಈದ್ಗಾ ವರೆಗಿನ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ (ಕೆ.ಇ.ಬಿ ಈದ್ಗಾ ದಿಂದ ಹನುಮಂತಪ್ಪ ವೃತ್ತದವರೆಗೆ), ಎಂ.ಜಿ.ರಸ್ತೆ (ಹನುಮಂತಪ್ಪ ವೃತ್ತದಿಂದ ಆಜಾದ್ಪಾರ್ಕ್ವರೆಗೆ) ಮತ್ತು ಆಜಾದ್ ಪಾರ್ಕ್ ಸುತ್ತ ಮುತ್ತ ವಾಹನಗಳ ನಿಲುಗಡೆ ಮತ್ತು ಸಂಚಾರ ನಿಷೇಧಿಸಲಾಗಿದೆ. ಹಳೇ ಜೈಲು ಕಾಂಪೌಂಡ್ ಮತ್ತು ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಬದಲಿ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ.
ಡಿಸೆಂಬರ್ ೧೮ ರಂದು ಮಧ್ಯಾಹ್ನ ೧ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ಕಾಮದೇನು ಗಣಪತಿ ದೇವಸ್ಥಾನದಿಂದ ಜಾಲಿಫ್ರೆಂಡ್ ಸರ್ಕಲ್, ಜಾಲಿ ಫ್ರೆಂಡ್ ಸರ್ಕಲ್ ನಿಂದ ಕೆ.ಇ.ಬಿ ಈದ್ಗಾ ವರೆಗಿನ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ (ಕೆ.ಇ.ಬಿ ಈದ್ಗಾ ದಿಂದ ಹನುಮಂತಪ್ಪ ವೃತ್ತದವರೆಗೆ), ಎಂ.ಜಿ.ರಸ್ತೆ (ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ವರೆಗೆ) ಮತ್ತು ಆಜಾದ್ ಪಾರ್ಕ್ ಸುತ್ತ ಮುತ್ತ ವಾಹನಗಳ ನಿಲುಗಡೆ ಮತ್ತು ಸಂಚಾರ ನಿಷೇಧಿಸಲಾಗಿದೆ. ಮಲ್ಲಂದೂರು ರಸ್ತೆ, ಮಾರ್ಕೆಟ್ ರಸ್ತೆ, ಹೊಸಮನೆ ರಸ್ತೆ (ಎಸ್.ಪಿ ಕಚೇರಿ ಮುಂಭಾಗದ ರಸ್ತೆ, ಜಿಲ್ಲಾ ಆಟದ ಮೈದಾನ ಹಿಂಭಾಗದ ರಸ್ತೆ) ಬದಲಿ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ.
Traffic, parking ban in different parts of the city
Discussion about this post