ನವದೆಹಲಿ: ಪೆಗಾಸಸ್ ಸಾಫ್ಟ್ವೇರ್ ಮೂಲಕ ವಿವಿಧ ವಲಯದ ಗಣ್ಯರ ಮೊಬೈಲ್ ಫೋನ್ ಮೇಲೆ ನಿಗಾ ಇರಿಸಿದ್ದ ಆಪಾದನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎಂ.ಬಿ.ಲೋಕುರ್ ನೇತೃತ್ವದ ನ್ಯಾಯಾಂಗ ಆಯೋಗದ ಮುಂದಿರುವ ಎಲ್ಲ ಪ್ರಕ್ರಿಯೆಗಳಿಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆ ನೀಡಿದೆ.
ಪೆಗಾಸಸ್ ಬೇಹುಗಾರಿಕೆ ಕುರಿತಂತೆ ಸುಪ್ರೀಂಕೋರ್ಟ್ ತನಿಖೆಗೆ ಸಮಿತಿ ರಚಿಸಿರುವಾಗ ಪಶ್ಚಿಮ ಬಂಗಾಳದ ಸರ್ಕಾರ ತನಿಖಾ ಆಯೋಗ ರಚಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿ ಗ್ಲೋಬಲ್ ವಿಲೇಜ್ ಫೌಂಡೇಷನ್ ಎಂಬ ಸ್ವಯಂ ಸೇವಾ ಸಂಸ್ಥೆ ಅರ್ಜಿಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂತಿರ್ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ, ನಿವೃತ್ತ ನ್ಯಾ.ಲೋಕುರ್ ಆಯೋಗವನ್ನೂ ಪ್ರತಿವಾದಿಯನ್ನಾಗಿ ಪರಿಗಣಿಸಿ ನೋಟಿಸ್ ಜಾರಿ ಮಾಡಿದೆ.
ಕಳೆದ ಸಾರಿಯೇ ವಿಚಾರಣೆ ನಿಲ್ಲಿಸಲಾಗಿದೆ ಎಂದು ನೀವು (ಪಶ್ಚಿಮ ಬಂಗಾಳದ ಪರ ವಕೀಲರು) ಹೇಳಿದ್ದಿರಿ ಆದರೆ, ಆಯೋಗ ಮತ್ತೆ ವಿಚಾರಣೆ ನಡೆಸುತ್ತಿದೆ ಏನಿದು? ಎಂದು ನ್ಯಾಯಪೀಠ ಹಿರಿಯ ವಕೀಲ ಎ.ಎಂ.ಸಿಂಘ್ವಿಯನ್ನು ಪ್ರಶ್ನಿಸಿ ಈ ತಡೆಯಾಜ್ಞೆ ನೀಡಿದೆ.
ಪೆಗಾಸಸ್ ಸಾಫ್ಟ್ವೇರ್ ಬೇಹುಗಾರಿಕೆಯ ಕುರಿತಂತದೆ ಕಳೆದ ಜುಲೈ 27ರಂದು ಪಶ್ಚಿಮ ಬಂಗಾಳ ಸರ್ಕಾರ ನ್ಯಾಯಮೂರ್ತಿ ಲೋಕುರ್ ನೇತೃತ್ವದಲ್ಲಿ ಇಬ್ಬರು ಸದಸ್ಯರ ತನಿಖಾ ಆಯೋಗವನ್ನು ರಚಿಸಿತ್ತು.
Pegasus probe: SC stays proceedings before Bengal panel
ಇದನ್ನು ಓದಿ: ನೀಟ್ ಪದವಿ ಪ್ರವೇಶ ಪರೀಕ್ಷೆ- 2021 ರದ್ದುಗೊಳಿಸಿ ಹೊಸ ಪರೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ಗೆ ಅರ್ಜಿ
ಇದನ್ನೂ ಓದಿ: ಸೇನೆಯ 39 ಮಹಿಳಾ ಅಧಿಕಾರಿಗಳು ಪೂರ್ಣಾವಧಿ ನೇಮಕದ ಸೇವಾ ಸ್ಥಿತಿ ಖಾತರಿಗೆ ಸೂಚನೆ
Discussion about this post