ಚಿಕ್ಕಮಗಳೂರು: ಕೆಲವರು ಅರಾಜಕತೆ, ಸಂಘರ್ಷ ನಡೆಸುವ ಸಂಚು ರೂಪಿಸಿದ್ದಾರೆ. ಕೊಲ್ಲಾಪುರದಲ್ಲಿ ಕನ್ನಡ ಭಾವುಟ ಸುಟ್ಟರು ಅಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ. ಅಲ್ಲಿಯ ಸರ್ಕಾರ ಕಾಂಗ್ರೆಸ್ ಸರ್ಕಾರದ ಪಾಲುದಾರರದ್ದು ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದರು
ಅವರು ಬೆಳಗಾವಿಯಲ್ಲಿ ಎಂ.ಇ.ಎಸ್ ಕಾರ್ಯಕರ್ತರ ಪುಂಡಾಟ ಹಿನ್ನಲೆ, ಈ ಕುರಿತು ಹೇಳಿಕೆ ನೀಡಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿಯುವ ಕೆಲಸ ಮಾಡಿದ್ರು. ಇವ್ರ ಉದ್ದೇಶ ಸಂಘರ್ಷ ಆಗ್ಲಿ, ಕರ್ನಾಟಕ ಮಹಾರಾಷ್ಟ್ರ ಸಂಘರ್ಷ ಆಗ್ಲಿ ಅನ್ನೋ ಸಂಚು. ಅರಾಜಕತೆವಾದಿಗಳು ಸೃಷ್ಟಿ ಮಾಡಿರುವ ಸಾಧ್ಯತೆ ಇದೆ ಎಂದರು
ಅರಾಜಕತವಾದಿಗಳ ಕುಮ್ಮಕ್ಕಿಗೆ ಬಲಿಯಾಗದೆ ಶಾಂತಿ, ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡುತ್ತಿದ್ದು, ಮಹಾರಾಷ್ಟ್ರದಲ್ಲಿ ಲಕ್ಷಾಂತರ ಕನ್ನಡಿಗರಿದ್ದಾರೆ, ಕರ್ನಾಟಕದಲ್ಲಿ ಲಕ್ಷಾಂತರ ಸಂಖ್ಯೆ ಮರಾಠಿಗರಿದ್ದಾರೆ. ನಮ್ಮೆಲ್ಲರ ಭಾವನೆ ರಾಷ್ಟ್ರೀಯತೆ ಜೊತೆ ಹಾಸು ಹೊಕ್ಕಾಗಿದೆ ಎಂದರು. ರಾಷ್ಟ್ರೀಯ ಹಿತಶಕ್ತಿಗೆ ಧಕ್ಕೆ ತರಲು ಕೆಲವರು ಷಡ್ಯಂತರ ನಡೆಸ್ತಾರೆ. ಆ ಷಡ್ಯಂತರಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು,
ದತ್ತ ಮಾಲಾಧಾರಿಗಳನ್ನ ಕುಡುಕರೆಂಬಂತೆ ಬಣ್ಣಿಸಿದ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಿ.ಟಿ.ರವಿ ಕಿಡಿ ಕಾರಿದ್ದು, ಅವರು ಬಳಸಿರುವ ಭಾಷೆ ಗೌರವ ತರುವಂತದ್ದಲ್ಲ, ಅದನ್ನ ಖಂಡಿಸುತ್ತೇನೆ. ಆ ಸರ್ಕ್ಯೂಲರ್ ಹಿಂಪಡೆಯುವಂತೆ ಆಗ್ರಹಿಸುತ್ತೇನೆ ಎಂದು ಹೇಳಿದರು.
ಅವಹೇಳನ ಮಾಡುವ ರೀತಿ ಚಿತ್ರಿಸಿದ್ದಾರೆ, ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದು, ಅವರು ಹೇಳಿರುವ ರೀತಿ ಅವರಿಗೆ ಇರುವ ತಪ್ಪು ಕಲ್ಪನೆ ತೋರಿಸುತ್ತೆ. ಅವಹೇಳನ, ಅಪಮಾನ ಮಾಡುವ ರೀತಿ ಹೊರ ಸರ್ಕ್ಯೂರ್ ಹೊರಡಿಸಿದ್ದಾರೆ ಎಂದು
ಹೇಳಿದರು.
Discussion about this post