ತಿರುವನಂತಪುರ: ಕೇರಳದಲ್ಲಿ ರಾಜಕೀಯ ದ್ವೇಷದ ಹಿಂಸಾಚಾರ ಮುಂದುವರಿದಿದ್ದು, ಆಲಪ್ಪುಳದಲ್ಲಿ ಇಬ್ಬರು ಮುಖಂಡರನ್ನು ಕೆಲವು ತಾಸುಗಳ ಅಂತರದಲ್ಲಿ ಹತ್ಯೆ ಮಾಡಲಾಗಿದೆ. ಬಿಜೆಪಿ ಮತ್ತು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್ಡಿಪಿಐ) ತಲಾ ಒಬ್ಬರು ನಾಯಕರು ಹತ್ಯೆಯಾದ ದುರ್ದೈವಿಗಳಾಗಿದ್ದು, ಈ ಕೊಲೆಯ ನಂತರ ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಆಗಿದೆ. ಜಿಲ್ಲೆಯಲ್ಲಿ ಗುಂಪುಗೂಡದಂತೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹತ್ಯೆಯನ್ನು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್. ಶಾನ್ ಶನಿವಾರ ಸಂಜೆ ದ್ವಿಚಕ್ರ ಮೋಟಾರು ವಾಹನದಲ್ಲಿ ಬರುತ್ತಿದ್ದಾಗ ಕಾರಿನಲ್ಲಿ ಬಂದ ಗುಂಪು ಅವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದೆ. ಬಿಜೆಪಿಯ ಮಾತೃ ಸಂಸ್ಥೆಯಾದ ಆರ್ಎಸ್ಎಸ್ನ ಗುಂಪೇ ಈ ಕೃತ್ಯ ಎಸಗಿದೆ ಎಂದು ಎಸ್ಡಿಪಿಐ ದೂರಿದೆ.
ಬಿಜೆಪಿಯ ಒಬಿಸಿ ಮೋರ್ಚಾದ ಅಧ್ಯಕ್ಷ ರೆಂಜಿತ್ ಶ್ರೀನಿವಾಸನ್ ಅವರನ್ನು ಅವರ ಮನೆಯಲ್ಲೇ ಅಪರಿಚಿತರು ಭಾನುವಾರ ಮುಂಜಾನೆ ಹತ್ಯೆಗೈದಿದ್ದಾರೆ. ಈ ಎರಡೂ ಪ್ರಕರಣಗಳ ತನಿಖೆ ನಡೆಯುತ್ತಿದೆ.
ಈ ಜೋಡಿ ಕೊಲೆಗಳು ಅತ್ಯಂತ ಹೇಯ ಮತ್ತು ಅಮಾನವೀಯ ಹಿಂಸಾಚಾರ. ಇಂಥ ಚಟುವಟಿಕೆಗಳು ರಾಜ್ಯದಲ್ಲಿ ಅಪಾಯಕಾರಿ ಸನ್ನಿವೇಶ ಸೃಷ್ಟಿಸುತ್ತವೆ. ಪೊಲೀಸರು ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರಿಗೆ ತಕ್ಕಶಾಸ್ತಿ ಆಗಲಿದೆ. ಸಾಮಾಜಕೂಡ ಇಂಥ ಅಪರಾಧಿಗಳನ್ನು ಪ್ರತ್ಯೇಕವಾಗಿ ಇರಿಸುತ್ತದೆ ಎಂದು ಸಿಎಂ ಪಿಣರಾಯಿ ವಿಜಯನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
Tension In Kerala’s Alappuzha After Two Political Murders
ಇದನ್ನು ಓದಿ: ಪತ್ನಿ ಮೇಲೆ ನಾಗರಹಾವು ಬಿಟ್ಟು ಹತ್ಯೆಗೈದ ಪತಿಗೆ ಜೈಲು
ಇದನ್ನೂ ಓದಿ: ಮಾಧ್ಯಮಗಳ – ಪತ್ರಕರ್ತರ ಮೇಲೆ ದಾಳಿಗಳು
Discussion about this post