ಚಂಡೀಗಡ: ಅಮೃತಸರದ ಸ್ವರ್ಣ ಮಂದಿರದಲ್ಲಿ ಗುಂಪು ಹಲ್ಲೆ ನಡೆದ ಕೆಲವೇ ಗಂಟೆಯೊಳಗೆ ಇಂಥದ್ದೇ ಇನ್ನೊಂದು ಘಟನೆ ಕಪುರ್ತಲಾ ಜಿಲ್ಲೆಯಲ್ಲಿ ನಿಜಾಮ್ಪುರ್ನಲ್ಲಿ ನಡೆದಿದ್ದು, ಇದರಲ್ಲೂ ಓರ್ವ ವ್ಯಕ್ತಿ ಮರಣಿಸಿದ್ದಾನೆ.
ನಿಜಾಮ್ಪುರ್ ಗುರುದ್ವಾರದಲ್ಲಿ ನಿಶಾನ್ ಸಾಹಿಬ್ಗೆ (ಸಿಖ್ಖರ ಧರ್ಮ ಧ್ವಜ) ಅಗೌರವ ತೋರಿದ ಎಂದು ಆಪಾದಿಸಿ ವ್ಯಕ್ತಿಯ ಮೇಲೆ ಗುಂಪೊಂದು ಭಾನುವಾರ ಮುಂಜಾನೆ 4 ಗಂಟೆಯ ಸುಮಾರಿಗೆೆ ಹಲ್ಲೆ ಮಾಡಿದೆ. ಗುರುದ್ವಾರದ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಳಿಕೋರರು ಕತ್ತಿಗಳನ್ನು ಹಿಡಿದಿರುವ ದೃಶ್ಯ ದಾಖಲಾಗಿದೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಪೊಲೀಸರು ವಶಪಡೆದರು. ಆದರೆ, ಪೊಲೀಸರೊಂದಿಗೆ ಜಗಳ ತೆಗೆದ ಗುಂಪು, ಆತನನ್ನು ತಮ್ಮ ಎದುರಿಗೆ ವಿಚಾರಣೆ ನಡೆಸಬೇಕು ಎಂದು ಪಟ್ಟು ಹಿಡಿದಿತ್ತು. ನಂತರ ಹಲ್ಲೆಗೊಳಗಾದ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಅಮೃತಸರದ ಸ್ವರ್ಣ ಮಂದಿರಕ್ಕೆ ಶನಿವಾರ ಸಂಜೆ ಪ್ರಾರ್ಥನೆಯ ಸಮಯದಲ್ಲಿ ಭೇಟಿ ನೀಡಿದ್ದ ಉತ್ತರ ಪ್ರದೇಶದ ಯುವಕ ಪವಿತ್ರ ಗುರುಗ್ರಂಥ ಸಾಹಿಬ್ ಇರಿಸಿದ್ದ ಸ್ಥಳದ ಸುತ್ತಲೂ ಹಾಕಿರುವ ಚಿನ್ನದ ಕಂಬಿಗಳನ್ನು (ರೈಲಿಂಗ್) ದಾಟಿ ಗ್ರಂಥದ ಮುಂದೆ ಇರಿಸಿದ್ದ ಖಡ್ಗವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ ಎಂದು ಆರೋಪಿಸಿ ಆತನ ಮೇಲೆ ಗುಂಪು ಹಲ್ಲೆ ನಡೆಸಿತ್ತು. ಇದರಿಂದ ಆತ ಅಸುನೀಗಿದ. ಪಂಜಾಬ್ ಚುನಾವಣೆಗೆ ಕೆಲವು ತಿಂಗಳು ಇರುವಾಗ ಶಾಂತಿ & ಸೌಹಾರ್ದವನ್ನು ಕದಡುವ ಇಂಥ ಟನೆ ನಡೆಯುತ್ತಿರುವುದಕ್ಕೆ ರಾಜಕೀಯ ನಾಯಕರಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು. ಸ್ವರ್ಣ ಮಂದಿರದ ಗರ್ಭಗೃಹ ಮತ್ತು ಮಂದಿರದ ಆಚೆ ನಡೆದ ಹಲ್ಲೆ ಬಗ್ಗೆ ತನಿಖೆ ನಡೆಸಬೇಕೆಂಬ ಆಗ್ರಹವೂ ಕೇಳಿಬಂದಿದೆ.
ತನಿಖೆಗೆ ಎಸ್ಐಟಿ ರಚನೆ:
ಈ ಮಧ್ಯೆ, ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ, ಅಮೃತಸರದಲ್ಲಿ ನಡೆದ ಗುಂಪು ಹಲ್ಲೆ ಟನೆಯ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದ್ದಾರೆ. ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಇದರ ನೇತೃತ್ವವ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸ್ವರ್ಣ ಮಂದಿರದಲ್ಲಿ ನಡೆದ ಟನೆ ದುರದೃಷ್ಟಕರ. ಈ ಬಗ್ಗೆ ಎಸ್ಐಟಿ ಎರಡು ದಿನದಲ್ಲಿ ವರದಿ ಸಲ್ಲಿಸಲಿದೆ ಎಂದು ಉಪಮುಖ್ಯಮಂತ್ರಿ ಸುಖ್ಜಿಂದರ್ ಸಿಂಗ್ ರಾಂಧವ ತಿಳಿಸಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ಸಂಶೋಧನೆಯಲ್ಲಿ ಪ್ರಖ್ಯಾತರಾದ ಕಮಲಾ ರಣದಿವೆಗೆ ಗೂಗಲ್ ಡೂಡಲ್ ಗೌರವ
(Amritsar Punjab another person killed)
Discussion about this post