ಚಿಕ್ಕಮಗಳೂರು: ನಗರಸಭೆ ಅವ್ಯವಸ್ಥೆಯ ಆಗರವಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಜನತೆ ಬದಲಾವಣೆ ಬಯಸಿ ಕಾಂಗ್ರೆಸ್ ಪರವಾದ ಒಲವು ತೋರುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಹೇಳಿದರು.
ನಗರದಲ್ಲಿ ವಾರ್ಡ್ನಂಬರ್ ೧೦ ರ ಕಾಂಗ್ರೆಸ್ ಅಭ್ಯರ್ಥಿ ಹೇಮಾವತಿಸದಾಶಿವ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ನಗರದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದ್ದು, ಬಿಜೆಪಿ ದುರಾಳಿತ, ಭ್ರಷ್ಟಾಚಾರದಿಂದಾಗಿ ನಗರದ ಜನತೆ ಬೇಸತ್ತಿದ್ದಾರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚು ಸ್ಥಾನ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ೪೦ ಪರ್ಸೆಂಟ್ ಕಮಿಷನ್ ಸರ್ಕಾರವಾದರೆ. ಇಲ್ಲಿನ ನಗರಸಭೆ ೭೦ ಪರ್ಸೆಂಟ್ ಕಮಿಷನ್ ಮೂಲಕ ನಗರದ ಕಾಮಗಾರಿ ಕಳಪೆಯಿಂದ ಕೂಡಿದೆ. ನಗರಸಭೆ ಆಡಳಿತ ವೈಫಲ್ಯದಿಂದಾಗಿ ನರಕಸಭೆಯಾಗಿ ಮಾರ್ಪಟ್ಟಿದ್ದು ಜನನ, ಮರಣ ಪ್ರಮಾಣ ಪತ್ರ, ಕಟ್ಟಡ ಪರವಾನಗಿ, ಸೇರಿದಂತೆ ಯಾವುದೇ ಕಾರ್ಯಗಳಿಗೂ ನಗರಸಭೆ ಲಂಚ ಪಡೆಯುವ ಮೂಲಕ ಭ್ರಷ್ಟಾಚಾರದ ತಾಣವಾಗಿ ಮಾರ್ಪಟಿದೆ ಎಂದು ಆರೋಪಿಸಿದರು.
೧೦ ನೇ ವಾರ್ಡ್ನ ಅಭ್ಯರ್ಥಿ ಹೇಮಾವತಿಸದಾಶಿವ ಮಾತನಾಡಿ ನಗರವು ಹಲವು ವರ್ಷಗಳಿಂದ ಅಭಿವೃದ್ಧಿಯಾಗದೆ ಕುಂಠಿತವಾಗಿದೆ, ಮುಖ್ಯವಾಗಿ ನಗರಸಭೆ ಭ್ರಷ್ಟಾಚಾರದಿಂದ ಕೂಡಿದ್ದು ಸದಸ್ಯರಾಗಿ ಆಯ್ಕೆಯಾದಲ್ಲಿ ನಗರಸಭೆಯನ್ನು ಸಂಪೂರ್ಣವಾಗಿ ಭ್ರಷ್ಟಾಚಾರ ಮುಕ್ತವನ್ನಾಗಿಸಿ ಜನಸ್ನೇಹಿಯನ್ನಾಗಿಸುವ ಉದ್ದೇಶ ಹೊಂದಲಾಗಿದೆ. ಎಲ್ಲಾ ಸೇವೆಗಳ ಸಕಾದಲ್ಲಿ ಫಲಾನುಭವಿಗಳಿಗೆ ದೊರೆಯುವಂತೆ ಮಾಡಲಾಗುವುದು ಎಂದು ಆಶಯ ವ್ಯಕ್ತಪಡಿಸಿದರು.
Pro-Congress leaning
Discussion about this post