ಚಿಕ್ಕಮಗಳೂರು: ರೈತರ ಬದುಕು ಹಸನಾಗಿ ಲಾಭದಾಯಕವಾಗಬೇಕೆಂದರೆ ಸಮಗ್ರ ಕೃಷಿಯ ಕಡೆಗೆ ರೈತರು ಬರಬೇಕೆಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಹಾಗೂ ವಿಕ ಸೂಪರ್ಸ್ಟಾರ್ ಜಿಲ್ಲಾ ಪ್ರಶಸ್ತಿ ವಿಜೇತ ಕುನ್ನಾಳು ಕುಮಾರಸ್ವಾಮಿ ಹೇಳಿದರು.
ಸಖರಾಯಪಟ್ಟಣ ಸಮೀಪದ ಲಕ್ಕಮನಹಳ್ಳಿ ತಾಲ್ಲೂಕು ಕೃಷಿಕ ಸಮಾಜ ಚಿಕ್ಕಮಗಳುರು ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ ಹಾಗೂ ಕೃಷಿ ಪರಿಕರಗಳ ಮಾರಾಟಗಾರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ , ಮಾಜಿ ಪ್ರಧಾನಿ ಚರಣಸಿಂಗ್ ರೈತಪರವಾಗಿ ಹೋರಾಟ ಮಾಡಿ ಗೇಣಿ ಪದ್ಧತಿಯನ್ನು ಹತ್ತಿಕ್ಕಿ ರೈತರ ಧ್ವನಿಯಾಗಿದ್ದರು . ಅವರ ಜಯಂತಿಯನ್ನು ರೈತ ದಿನಚರಣೆಯಗಿ ಆಚರಿಸುತ್ತಿರುವುದು ಸಂತಸದ ವಿಚಾರ.
ರೈತ ಸಮುದಾಯಕ್ಕೆ ಜಾತಿ ಬಡವಬಲ್ಲಿದ ಎಂಬ ಬೇಧವಿಲ್ಲ. ಆದರೆ ರೈತ . ಆದರೆ ರೈತ ಮಾತ್ರ ಆರ್ಥಿಕವಾಗಿ ಹಿಂದುಳಿದು ಸಂಕಷ್ಟದಲ್ಲಿದ್ದಾರೆ. ಇದಕ್ಕೆ ಕಾರಣ ಸರಕಾರವು ಬೆಳೆಗಳ ಬೆಂಬಲ ಬೆಲೆಯನ್ನು ಘೋಷಿಸುತ್ತಿಲ್ಲ. ಇದಕ್ಕೆ ಕೃಷಿ ನೀತಿ ಪೂರಕವಾಗಿಲ್ಲ. ನಮ್ಮ ರೈತರೂ ಹಲವಾರು ಬೆಳೆಗಳನ್ನು ಬೆಳೆಯದೆ ಒಂದೇ ಬೆಳೆಗೆ ಜೋತು ಬಿದ್ದು ಆದಾಯದಲ್ಲಿ ಹಿಂದೆ ಬಿದ್ದಿದ್ದಾರೆ. ಇನ್ನಾದರೂ ರೈತರು ಸಮಗ್ರ ಬೆಳೆ ಬೆಳೆಯಲು ಮುಂದಾಗಬೇಕು ಎಂದರು.
ಹಾಪ್ಕಾಮ್ಸ್ ನಿರ್ದೇಶಕ ಹಾಗೂ ಜಿಪಂ.ಮಾಜಿ ಅಧ್ಯಕ್ಷ ಎ ಎನ್ ಮಹೇಶ್ ಮಾತನಾಡಿ, ರೈತರು ಮತ್ತು ಸೈನಿಕರು ದೇಶದ ಬೆನ್ನೆಲುಬಾಗಿದ್ದಾರೆ. ಸರಿಯಾದ ರೀತಿಯಲ್ಲಿ ವೈಜ್ಞಾನಿಕವಾಗಿ ಕೃಷಿಯಲ್ಲಿ ತೊಡಗಿಕೊಳ್ಳಬೇಕು. ಭೂಮಿಯ ಫಲವತ್ತತ್ತೆಯನ್ನು ಕಾಯ್ದುಕೊಂಡು ಸರಕಾರ ಸಾಲ ಮನ್ನ ಮಾಡಲಿ ಎಂದು ಕಾಯದೆ ತಮ್ಮ ಕೆಲಸಗಳನ್ನು ತಾವು ಮಾಡುತ್ತ ಕಾಯಕ ಮಾಡಿದರೆ ಯಶಸ್ಸು ಸಾಧ್ಯ ಎಂದರು.
ಪ್ರಗತಿಪರ ರೈತ ಚಂದ್ರಶೇಖರ್ನಾರಾಣಾಪುರ ಮಾತನಾಡಿ ,ಹಿಂದೆ ಇದ್ದ ಹಳ್ಳಿಗಳು ನಿರ್ಮಾಣವಾಗಬೇಕು. ಮೂಲವನ್ನು ಮರೆಯುತ್ತಿದ್ದೇವೆ. ಡಾ.ಸ್ವಾಮಿನಾಥನ್ ವರದಿ ಜಾರಿಗೊಳ್ಳಬೇಕು. ಆಗ ಮಾತ್ರ ಬೆಳೆಗಳ ಬೆಲೆ ನಿಗಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ರೈತರು ಒಗ್ಗಟ್ಟಾಗಿ ಹೋರಾಟ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಪಂ. ಅಧ್ಯಕ್ಷೆ ರತ್ನಮ್ಮ ವಹಿಸಿ ಮಾತನಾಡಿದರು. ಸಮಾರಂಭವನ್ನು ಹಿರಿಯ ರೈತ ಜಯಣ್ಣ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಸಿದ್ದೇಗೌಡ, ವಿಜ್ಞಾನಿ ಡಾ.ಕೃಷ್ಣಮೂರ್ತಿ , ಗ್ರಾಪಂ.ಸದಸ್ಯರಾದ ಹರೀಶ್, ಚಂದ್ರಶೇಖರ್, ಕಾಟೇಗೌಡ, ಲತಾ, ಯಶೋಧಮ್ಮ, ,ಕೃಷಿ ಅಕಾರಿಗಳಾದ ಸುರೇಶ್, ಅರ್ಪಿತ , ವೆಂಕಟೇಶ್ ಹಾಗೂ ರೈತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃಷಿಗೆ ಸಂಭದಿಸಿದ ಸಲಕರಣೆಗಳನ್ನು ವಸ್ತು ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೃಷಿ ಅಧಿಕಾರಿ ಸುಜಾತ ಸ್ವಾಗತಿಸಿ, ಎನ್.ಕೆ.ಬೀರಪ್ಪ ವಂದಿಸಿದರು.
Farmer’s Day
Discussion about this post