ಚಿಕ್ಕಮಗಳೂರು: ಯುವ ಸಮೂಹ ಬೇಧಬಾವ ಬಿಟ್ಟು ಪರರಲ್ಲಿ ದೇವರನ್ನು ಕಂಡಾಗ ಹೃದಯದಲ್ಲಿ ಒಳ್ಳೆ ಮೌಲ್ಯಗಳು ಬೆಳೆಯುತ್ತದೆ ಎಂದು ಕ್ರೈಸ್ತ ದೇವಾಲಯಗಳ ಧರ್ಮಾಧ್ಯಕ್ಷ ಡಾ.ಅಂತೋಣಿಸ್ವಾಮಿ ಹೇಳಿದರು. ಶಾಸಕ ಸಿ.ಟಿ.ರವಿ ಬಿಷಪ್ ಹೌಸ್ನಲ್ಲಿ ಶುಭಾಷಯ ಕೋರಿದ ನಂತರ ಮಾತನಾಡಿದರು.
ಯುವಕರು ಭವಿಷ್ಯದ ನಾಯಕರಾಗಿ ಬೆಳೆಯುವಂತವರು ಪ್ರೀತಿ ಸೌಹರ್ಧ, ಕ್ಷಮೆ ಮೈಗೂಡಿಸಿಕೊಂಡು ಒಳ್ಳೆ ಮೌಲ್ಯಗಳನ್ನು ಬೆಳೆಸಿಕೊಂಡಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ. ಕ್ರಿಸ್ತ ಜಯಂತಿ ಹಾಗೂ ಹೊಸ ವರ್ಷದ ಶುಭಾಷಯ ಕೋರಲು ರವಿ ಯವರು ಪ್ರತಿವರ್ಷ ಆಗಮಿಸುವುದು ಸೌಹಾರ್ಧ ಹಾಗೂ ಸಾಮರಸ್ಯದ ಬೆಳವಣಿಗೆ ಎಂದರು.
ಶಾಸಕ ಸಿ.ಟಿ.ರವಿ ಮಾತನಾಡಿ, ಪ್ರತಿವರ್ಷದಂತೆ ಕ್ರಿಸ್ಮಸ್ ಮತ್ತು ಹೊಸವರ್ಷದ ಶುಭಾಷಯ ಕೋರಿ ಧರ್ಮ ಗುರುಗಳ ಆಶೀರ್ವಾದ ಪಡೆಯುವುದು ಪ್ರತಿತಿ ಅದರಂತೆ ಹತ್ತಾರು ವರ್ಷದಿಂದ ಈ ಪದ್ದತಿ ರೂಡಿಸಿಕೊಂಡಿದ್ದೇನೆ. ಮನುಷ್ಯನ ಆಸೆಗೆ ಮಿತಿ ಇಲ್ಲಾ ಚಿಕ್ಕವಯಸ್ಸಿನಲ್ಲಿ ಸೈಕಲ್ ಸಿಕ್ಕಿದರೆ ಸಾಕು ಅದೇ ಜೀವನದ ಸ್ವರ್ಗ ಅನಿಸುತ್ತದೆ, ನಂತರ ಬೈಕ್, ಕಾರು ಹೀಗೆ ಆಸೆ ಬೆಳೆಯುತ್ತದೆ ಅದಕ್ಕೆ ಕೊನೆಯ ಇಲ್ಲಾ ಎಂದಾಗ ನೆರೆದಿದ್ದವರು ನಮ್ಮಲ್ಲರ ಆಸೆ ತಾವು ಮುಖ್ಯಮಂತ್ರಿಯಾಗ ಬೇಕೆಂಬುದು ಎಂದರು.
ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ ನನ್ನ ಇತಿಮಿತಿಯಲ್ಲಿ ಜನಸಾಮಾನ್ಯರಿಗೆ ಸ್ಪಂದಿಸುತ್ತೇನೆ ಆದರೆ ಹೀಗೆ ಆಗಬೇಕೆಂದು ಚಿಂತೆ ಮಾಡುವುದಿಲ್ಲ ಎಂದರು. ಸಂತ ಜೋಸೇಫರ ಪ್ರಧಾನ ದೇವಾಲಯ, ಬೇಲೂರು ರಸ್ತೆ ಸಂತ ಆಂದ್ರೇಯನ ದೇವಾಲಯ, ವಿಜಯಪುರ ಪವಿತ್ರ ಕುಟುಂಬ ದೇವಾಲಯ , ಹೋಲಿಕ್ರಾಸ್ ಆಸ್ಪತ್ರೆಗಳಿಗೆ ತೆರಳಿ ಧರ್ಮಗುರುಗಳಿಗೆ ಶುಭಕೋರಿದರು.
ಗುರುಗಳಾದ -.ವಿಜಯ್ಕುಮಾರ್, -.ಸಂತೋಷ್, -.ಟೋನಿವೆಲ್ಲಂಗಣಿ, -.ಅಂತೋಣಿ ಪಿಂಟೋ, -.ವಿನಯ್ಕುಮಾರ್, -.ರೆಸ್ಕೀನಾ, ಸಗಾಯ್ದಾಸ್, ರೋನಿ, ಸಂಜು, ಸತ್ಯರಾಜ್, ಡೆನ್ನಿ, ಸ್ಟೀವನ್, ಎಡ್ವಿನ್, ಜೋಸೆ-, ಸ್ಟೆಲ್ಲಾ, ಗೀತಾ ಇದ್ದರು.
Good wishes
Discussion about this post