ಚಿಕ್ಕಮಗಳೂರು: ದೇಶದಲ್ಲಿ ಕಾಂಗ್ರೆಸ್ ಪಕ್ಷ ಸುಡುವ ಮನೆ ಇದ್ದಂತೆ, ಇಲ್ಲಿ ದೀನ ದಲಿತರ ಅಭಿವೃದ್ಧಿಯಾಗಲ್ಲ ಎಂದು ಅಂಬೇಡ್ಕರ್ ಅಭಿಪ್ರಾಯಿಸಿದ್ದರು ಎಂದು ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ಹೇಳಿದರು.
ನಗರದ ವಾರ್ಡ್ನಂಬರ್ ೩೩ ರ ಅಭ್ಯರ್ಥಿ ಕೆ.ನರಸಿಂಹಮೂರ್ತಿ ಪರವಾಗಿ ರಾಮನಹಳ್ಳಿಯಲ್ಲಿ ಮತಯಾಚನೆ ವೇಳೆ ಮಾತನಾಡಿದ ಅವರು ದೇಶದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಕಾಲ ಆಡಳಿತ ನಡೆಸಿದೆ. ಆದರೆ ದೇಶದ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಒಂದು ಮಾದರಿಯಲ್ಲಿ ಸುಡುವ ಪಕ್ಷವಿದ್ದಂತೆ ಎಂದು ಅಂಬೇಡ್ಕರ್ ಅಂದಿನ ದಿನದಲ್ಲಿಯೇ ತಮ್ಮ ಅಭಿಪ್ರಾಯ ಮಂಡಿಸಿದ್ದರು. ಇಲ್ಲಿ ದೀನ ದಲಿತರ ಅಭಿವೃದ್ಧೀಯಾಗಲ್ಲ ಎಂದು ದೂಷಿಸಿದರು.
ಕ್ಷೇತ್ರದಲ್ಲಿ ಶಾಸಕ ಸಿ.ಟಿ. ರವಿ ಅವರು ರಸ್ತೆ, ಚರಂಡಿ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಉತ್ತಮ ನಾಯಕತ್ವ ಗುಣ ಹೊಂದಿರುವ ಬಿಜೆಪಿ ಸಂಘಟನೆ ಮೂಲಕ ಶಕ್ತಿಯಾಗಿ ಹೊರಹೊಮ್ಮಿರುವ ಅವರು ನಿಮಗೆಲ್ಲ ಶಾಸಕರಾದರೆ ನಮಗೆ ನಾಯಕರಿದ್ದಂತೆ, ನಗರವನ್ನು ಸುಂದರ ಹಾಗೂ ಸ್ವಚ್ಚ ನಗರವನ್ನಾಗಿಸುವಲ್ಲಿ ಶಾಸಕರ ಪರಿಶ್ರಮವಿದೆ. ಈ ಹಿಂದಿನ ಅವಧಿಯಲ್ಲಿ ನಗರ ಹೇಗಿತ್ತು, ಇದೀಗ ಹೇಗೆಲ್ಲ ಅಭಿವೃದ್ಧಿಯಾಗಿದೆ ಎಂಬುದನ್ನು ನೀವುಗಳೇ ಅವಲೋಕನ ಮಾಡಿಕೊಳ್ಳುವಂತೆ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಸ್ಥಳೀಯ ನಗರಸಭೆಯಲ್ಲಿಯೂ ಬಿಜೆಪಿ ಹೆಚ್ಚು ಸ್ಥಾನ ಪಡೆದು ಅಧಿಕಾರಕ್ಕೆ ಬಂದಲ್ಲಿ ಮತ್ತಷ್ಡು ಶಕ್ತಿ ತುಂಬಲಿದ್ದು ಹೆಚ್ಚು ಅನುದಾನ ತರುವ ಮೂಲಕ ನಗರದ ಅಭಿವೃದ್ಧಿಪಡಿಸಬಹುದು, ಆ ನಿಟ್ಟಿನಲ್ಲಿ ನಗರದ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಗೆಲ್ಲಿಸುವಂತೆ ಮನವಿ ಮಾಡಿದರು.
ದೇಶದಲ್ಲಿ ವಿರೋಧಪಕ್ಷಗಳು ಇವೆ ಎಂಬುದು ನನಗೆ ಅನುಮಾನ ಮೂಡಿಸುತ್ತದೆ, ಕೇವಲ ಚುನಾವಣೆಯಲ್ಲಿ ಮಾತ್ರವೇ ಜನರ ಮುಂದೆ ನಾವು ಇದ್ದೇವೆ ಎಂದು ತೋರಿಸಿಕೊಳ್ಳಲು ಬರುತ್ತವೆ ವಿನಃ ಇತರೆ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವುದಿಲ್ಲ ಅಂತಹ ಪಕ್ಷಗಳ ಅಗತ್ಯತೆ ನಮಗೆಲ್ಲ ಇದೆಯಾ ಎಂದು ಪ್ರಶ್ನಿಸಿದರು.
ಬಿಜೆಪಿ ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿ ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ೩೫ ಸ್ಥಾನಗಳಲ್ಲಿ ಬಿಜೆಪಿ ೨೫ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ನಗರಸಭೆ ಅಧಿಕಾರದ ಚುಕ್ಕಾಣಿಯನ್ನು ಬಿಜೆಪಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆಯನ್ನು ಅಭಿವೃದ್ಧಿಪಡಿಸಿ, ಸರ್ಕಾರದ ಯೋಜನೆಗಳನ್ನು ಸಮಗ್ರವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನಗರದ ಅಭ್ಯರ್ಥಿಗಳು ಬಿಜೆಪಿಗೆ ಮತ ನೀಡಬೇಕು, ೩೩ ನೇ ವಾರ್ಡ್ ಅಭ್ಯರ್ಥಿ ನರಸಿಂಹಮೂರ್ತಿ ಹಲವು ವರ್ಷಗಳಿಂದ ಪಕ್ಷದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಅವರನ್ನು ಅತಿಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸುವಂತೆ ವಿನಂತಿಸಿಕೊಂಡರು.
ಅಭ್ಯರ್ಥಿ ನರಸಿಂಹಮೂರ್ತಿ ಮಾತನಾಡಿ ಬಿಜೆಪಿ ಪಕ್ಷದಲ್ಲಿದ್ದು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದೇನೆ. ಈ ಬಾರಿಯಲ್ಲಿ ಬಿಜೆಪಿಯ ೩೩ ವಾರ್ಡ್ಗೆ ಒಮ್ಮತದ ಅಭ್ಯರ್ಥಿಯಾಗಿ ಪಕ್ಷ ನನ್ನನ್ನು ಆಯ್ಕೆ ಮಾಡಿದ್ದು ನಗರದ ಅಭಿವೃದ್ಧಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರದ ಸವಲತ್ತುಗಳನ್ನು ಜನತೆಗೆ ಮುಟ್ಟಿಸಲು ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮಾಡುವಂತೆ ಕೇಳಿಕೊಂಡರು.
ಈ ಸಂದರ್ಭದಲ್ಲಿ ಎಸ್.ಸಿ.ಮೊರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್, ಜಿಲ್ಲಾ ಉಪಾಧ್ಯಕ್ಷ ದೀಪಕ್ದೊಡ್ಡಯ್ಯ, ಜಿ.ಪಂ. ಮಾಜಿ ಸದಸ್ಯ ಜೆ.ಡಿ.ಲೋಕೇಶ್, ಕಾರ್ಯಕಾರಣಿ ಸದಸ್ಯ ಲಕ್ಷ್ಮಣ್ನಾಯ್ಕ್, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸುಧೀರ್, ಮಂಜು ಸೇರಿದಂತೆ ಅನೇಕರು ಇದ್ದರು.
Congress burning house
Discussion about this post