ಮೀರಠ್: ಹಾಕಿ ರಂಗದ ಧ್ರುವತಾರೆ, ಭಾರತದ ಹಾಕಿ ತಂಡದ ನಾಯಕ, ವೀರ ಸೇನಾನಿ ಮೇಜರ್ ಧ್ಯಾನ್ಚಂದ್ ಹೆಸರಿನ “ಮೇಜರ್ ಧ್ಯಾನಚಂದ್ ಕ್ರೀಡಾ ವಿಶ್ವವಿದ್ಯಾಲಯ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಮೀರಠ್ ಜಿಲ್ಲೆಯ ಸರ್ಧಾನ ಪಟ್ಟಣದಲ್ಲಿ ಭಾನುವಾರ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಹಾಕಿ ಮಾಂತ್ರಿಕನ ಹೆಸರಿನಲ್ಲಿ ಸ್ಥಾಪನೆಯಾಗುವ ಈ ವಿವಿ ಒಂದು ಸಾವಿರಕ್ಕೂ ಹೆಚ್ಚು ಕ್ರೀಡಾಳುಗಳನ್ನು ತಯಾರು ಮಾಡಿ ಕ್ರೀಡಾಲೋಕದಲ್ಲಿ ಭಾರತದ ಹೆಸರನ್ನು ಉಜ್ವಲಗೊಳಿಸಲಿ ಎಂದು ಆಶಿಸಿದರು.
ಉತ್ತರ ಪ್ರದೇಶದಲ್ಲಿ ಈ ಹಿಂದೆ ಆಡಳಿತದ ನಡೆಸಿದ ಸರ್ಕಾರಗಳ ಅವಧಿಯಲ್ಲಿ ಕ್ರಿಮಿನಲ್ಗಳದ್ದೇ ಆಟ ಆಗಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಂಥವರನ್ನು ಜೈಲಿಗಟ್ಟುವ ಆಟ ಆರಂಬಿಸಿದರು. ಆದ್ದರಿಂದ ರಾಜ್ಯ ಗೂಂಡಾರಾಜ್ನಿಂದ ಮುಕ್ತವಾಗಿದೆ ಎಂದರು.
ಕಳೆದ ಐದು ವರ್ಷದಲ್ಲಿ ಮೀರಠ್ನ ಚಿತ್ರಣ ಸಂರ್ಪೂಣ ಬದಲಾಗಿದೆ ಹೆಣ್ಮಮಕ್ಕಳು ಸಂಜೆ ಹೊತ್ತು ನಿರ್ಭೀತಿಯಿಂದ ಓಡಾಡುವಂತಾಗಿದೆ. ಇದಕ್ಕೆ ಬಿಜೆಪಿಯ ಆಡಳಿತ ಕಾರಣ ಸಿಎಂ ಯೋಗಿ ಕೈಗೊಂಡ ಕಾನೂನು ಸುವ್ಯವಸ್ಥೆಯ ಕಟ್ಟುನಿಟ್ಟಿನ ನಿಯಮ ಕಾರಣ ಎಂದರು.
ಧ್ಯಾನ್ಚಂದ್ ವಿವಿಯಲ್ಲಿ ಆಧುನಿಕ ಮತ್ತು ಪರಂಪರೆಯಲ್ಲಿ ಬೆಳದು ಬಂದ ಕ್ರೀಡೆಗಳನ್ನು ಅಭ್ಯಾಸ ಮಾಡಲು ಅವಕಾಶ ಇದೆ. ತಲಾ 540 ಪುರುಷರು ಮತ್ತು ಮಹಿಳಾ ವಿದ್ಯಾಥಿರ್ಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ತಲಾ 540 ಪುರುಷರು ಮತ್ತು ಮಹಿಳಾ ವಿದ್ಯಾಥಿರ್ಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.ಇದಕ್ಕೆ ಅಗತ್ಯವಾದ ಮೂಲಸೌಕರ್ಯಗಳು 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಲಿವೆ. ಸಿಂಥೆಟಿಕ್ ಹಾಕಿ ಮೈದಾನ, ುಟ್ಬಾಲ್, ಬ್ಯಾಸ್ಕೆಟ್ ಬಾಲ್, ವಾಲಿಬಾಲ್, ಹ್ಯಾಂಡ್ ಬ್ಯಾಲ್ ಮೈದಾನಗಳು, ಈಜುಕೊಳ, ಬಹೋಪಯೋಗಿ ಹಾಲ್, ಸೈಕಲ್ ಟ್ರಾಕ್, ಟೆನ್ನಿಸ್ ಲಾನ್ ಕೋರ್ಟ್, ಕಬಡ್ಡಿ ಕೋರ್ಟ್, ಜಿಮ್ಯಾಷಿಯಮ್ ಹಾಲ್, ಸಿಂಥೆರಿಕಟ್ ಅಥ್ಲೆಟಿಕ್ ಸ್ಟೇಡಿಯ ವಿವಿ ಆವರಣದಲ್ಲಿ ನಿರ್ಮಾಣ ಆಗಲಿವೆ. ಶೂಟಿಂಗ್, ಸ್ಕ್ವಾಷ್, ವೈಟ್ಲಿಫ್ಟಿಂಗ್, ಬಿಲ್ಲುಗಾರಿಗೆ ಸೇರಿ ಇನ್ನಿತರ ಒಳಾಂಗಣ ಕ್ರೀಡೆಗಳ ಸಂಕೀಣವೂ ಇರಲಿದೆ.
PM Modi lays foundation stone of Major Dhyan Chand Sports University in Meerut
ಇದನ್ನು ಓದಿ: ಪ್ರಧಾನಿ ಮೋದಿಯವರ ಹೊಸ ಕಾರು ಮರ್ಸಿಡಿಸ್ ಮೆಬೈಕ್!
ಇದನ್ನೂ ಓದಿ: Corridor inaugurated: ಪ್ರಧಾನಿ ನರೇಂದ್ರ ಮೋದಿಯಿಂದ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ
Discussion about this post