Uttar Pradesh News: ಉತ್ತರಪ್ರದೇಶದ ಹಾಪುರದ ಅಶೋಕ್ ನಗರದಲ್ಲಿ ಮದುವೆ ಸಮಾರಂಭ ನಡೆದಿದ್ದು, ವಧು ವರ ಮತ್ತು ಅವರ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇನ್ನೇನು ಗಟ್ಟಿಮೇಳ ಮೊಳಗೆ ವರ ವಧುವಿಗೆ ತಾಳಿ ಕಟ್ಟಿ, ವೈವಾಹಿಕ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ ಒಂದು ಎಡವಟ್ಟು ಮಾಡಿದ್ದಾನೆ. ತಕ್ಷಣ ಮದುವೆ ಮಂಟರ ರಣಾಂಗಣವಾಗಿ ಮಾರ್ಪಟ್ಟಿದ್ದು, ವರನಿಗೆ ಗೂಸಾ ಕೊಟ್ಟಿದ್ದಾರೆ.
ಹಾಗಾದ್ರೆ ವರ ಮಾಡಿದ ಅಂಥ ತಪ್ಪೇನಾದರೂ ಏನು ಅಂದ್ರೆ, ಆತ ವಧುವಿಗೆ ತಾಳಿ ಕಟ್ಟುವ ಮುಂಚೆಯೇ, ಆಕೆಗೆ ಚುಂಬಿಸಿದ್ದಾನೆ. ಆಕೆಯನ್ನು ತಾನೆಷ್ಟು ಪ್ರೀತಿಸುತ್ತೇನೆ.
ಕೊನೆಗೂ ಆಕೆಯೊಂದಿಗೆ ವಿವಾಹವಾಗುತ್ತಿದ್ದೇನೆ ಅನ್ನುವ ಖುಷಿಯಲ್ಲಿ ವರ ಎಲ್ಲರೆದುರು ವಧುವಿಗೆ ಚುಂಬಿಸಿದ್ದು, ವಧುವಿನ ಮನೆಯವರು ರೊಚ್ಚಿಗೇಳುವಂತೆ ಮಾಡಿದೆ.
ತಕ್ಷಣ ವರನ ಕಡೆಯಲು ಕೈಯಲ್ಲಿ ತರಹೇವಾರಿ ಬಡಿಗೆ ಹಿಡಿದು, ಸ್ಟೇಜ್ ಮೇಲೆ ಹತ್ತಿ ವರನಿಗೂ, ವರನ ಕಡೆಯವರಿಗೂ ಹೊಡೆದಿದ್ದಾರೆ. ಘಟನೆಯಲ್ಲಿ ವರ ಮತ್ತು ವರನ ತಂದೆ ಸೇರಿ 6 ಜನ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ವಧು ವರನ ಕಡೆಯರೂ ಸೇರಿ 7 ಮಂದಿಯನ್ನು ಬಂಧಿಸಿದ್ದಾರೆ.
ವಧುವಿನ ತಂದೆ ತನ್ನ ಎರಡು ಮಕ್ಕಳ ಮದುವೆಯನ್ನು ಒಟ್ಟಿಗೆ ಮಾಡಿದ್ದಾರೆ. ಒಂದು ಮಗಳ ಮದುವೆ ಸುಗಮವಾಗಿ ಆಗಿದ್ದರೆ, ಎರಡನೇಯ ಮಗಳ ಮದುವೆ ಈ ರೀತಿ ಜಗಳದಲ್ಲಿ ಮುಕ್ತಾಯವಾಗಿದೆ.
ವರ ಒತ್ತಾಯಪೂರ್ವಕವಾಗಿಯೇ ವಧುವಿಗೆ ಮುತ್ತು ಕೊಟ್ಟಿದ್ದಾನೆಂದು ವಧುವಿನ ಕಡೆಯವರು ಆರೋಪಿಸಿದ್ದಾರೆ. ಒಟ್ಟಾರೆಯಾಗಿ ಪ್ರಥಮ ಚುಂಬನಂ ದಂತಭಗ್ನಂ ಅನ್ನೋ ರೀತಿ ವಧು ಮತ್ತು ವರನ ಸ್ಥಿತಿಯಾಗಿದೆ.
Health Tips: ಡ್ರೈಫ್ರೂಟ್ಸ್ ಸೇವನೆಯಿಂದ ಏನು ಲಾಭ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
Discussion about this post