Vijayapura News: ಕೋರ್ತಿ ಕೋಲ್ಹಾರ್ ಬ್ರಿಜ್ ನಿರ್ಮಾಣ ಮಾಡಿದ್ದು ನಾನು. ಆದರೆ ಶಿವಾನಂದ ಪಾಟೀಲ್ ಅದರ ಕ್ರೆಡಿಟ್ ತೆಗೆದುಕ“ಳ್ಳಲು ಯತ್ನಿಸುತ್ತಿದ್ದಾನೆ. ಚರ್ಚೆಗೆ ಬನ್ನಿ, ನೀವು ಮಾಡಿದ್ದು ಅಂತಾ ಸಾಬೀತು ಮಾಡಿದರೆ, ನಾನು ತಲೆಗೆ ಗುಂಡು ಹೊಡೆದುಕೋಳ್ಳುತ್ತೇನೆ. ನಾನು ಮಾಡಿದ್ದು ಅಂತಾ ಸಾಬೀತು ಮಾಡಿದರೆ, ನೀನು ತಲೆಗೆ ಗುಂಡು ಹೊಡೆದುಕೋಳ್ಳಬೇಕು ಎಂದು ಮಾಜಿ ಸಚಿವ ಬೆಳ್ಳುಬ್ಬಿ , ಸಚಿವ ಶಿವಾನಂದ ಪಾಟೀಲ್ ಗೆ ಸವಾಲ್ ಹಾಕಿದ್ದಾರೆ.
ಬಸವನಬಾಗೇವಾಡಿ ತಾಲೂಕಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಬಹಿರಂಗವಾಗಿ ಚರ್ಚೆಯಾಗಲಿ. ಪೆಂಡಲ್ ಸಹ ನಾನೇ ಹಾಕುತ್ತೇನೆ. ಶಿವಾನಂದ್ ಪಾಟೀಲ್ ಚರ್ಚೆಗೆ ಬಂದ್ರೆ ಸಾಕು. ಇದು ಬೇಜವಾಬ್ದಾರಿ ಹೇಳಿಕೆ ಅಲ್ಲ. ನಾನೂ ಚರ್ಚೆಗೆ ಬರುತ್ತೇನೆ. ಅವರೂ ಚರ್ಚೆಗೆ ಬರಲಿ. ಕೋರ್ತಿ ಕೋಲ್ಹಾರ್ ಬ್ರಿಜ್ ನಿರ್ಮಾಣ ಮಾಡಿದ್ದು ಅವರೇ ಅಂತ ಸಾಬೀತು ಮಾಡಿದ್ರೆ, ನಾನು ಅಲ್ಲೇ ಗುಂಡು ಹೊಡೆದುಕೋಳ್ಳುತ್ತೇನೆ. ಸಾಬೀತಾಗಲಿಲ್ಲವೆಂದಲ್ಲಿ ಅವರು ಗುಂಡು ಹೊಡೆದುಕೊಳ್ಳಬೇಕು ಎಂದು ಬೆಳ್ಳುಬ್ಬಿ ಸವಾಲ್ ಹಾಕಿದ್ದಾರೆ.
ವಿಜಯಪುರ ಜಿಲ್ಲೆಯ ಕೋರ್ತಿ ಕೋಲ್ಹಾರ್ ಬ್ರಿಜ್ ನಿರ್ಮಾಣ, ನೀರಾವರಿ ಯೋಜನೆ ಅನುಷ್ಠಾನ, ಹೊಸ ತಾಲೂಕುಗಳ ರಚನೆ, ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿ ಹಲವು ಯೋಜನೆಗಳು ನನ್ನ ಹೋರಾಟದ ಫಲ. ನಾನು ಬಸವನಬಾಗೇವಾಡಿ ಶಾಸಕನಾಗಿದ್ದಾಗ ಎಲ್ಲಾ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇನೆ. ಇದರಲ್ಲಿ ಸಚಿವ ಶಿವಾನಂದ್ ಅವರ ಪಾತ್ರ ಎಳ್ಳಿನಷ್’’ು ಇಲ್ಲವೆಂದು ಬೆಳ್ಳುಬ್ಬಿ ಕಿಡಿಕಾರಿದ್ದಾರೆ.
Discussion about this post