National News: ಚಿಪ್ಸ್ ಕದ್ದನೆಂದು ಆರೋಪಿಸಿ ಕೆಲವರು ಅಂಗಡಿ ಎದುರೇ ಬೈದು ನಿಂದಿಸಿದ ಕಾರಣ, 12 ವರ್ಷದ ಬಾಲಕ, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲ್ಕತ್ತಾದಲ್ಲಿ ನಡೆದಿದೆ.
7ನೇ ತರಗತಿಯ ವಿದ್ಯಾರ್ಥಿ ಕೃಷ್ಣೆಂದು ದಾಸ್ ಮೃತ ಬಾಲಕನಾಗಿದ್ದು, ಈತ ಅಂಗಡಿಯಿಂದ ಚಿಪ್ಸ್ ಕದ್ದನೆಂದು ಅಂಗಡಿಯಾತ ಬೈದಿದ್ದಾನೆ. ಇದರಿಂದ ಬೇಸರವಾದ ವಿದ್ಯಾರ್ಥಿ, ಡೆತ್ ನೋಟ್ ಬರೆದಿಟ್ಟು, ನಾನು ಚಿಪ್ಸ್ ಕದ್ದಿಲ್ಲಮ್ಮಾ ಎಂದು ಅದರಲ್ಲಿ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇವನ ಪೋಷಕರ ಪ್ರಕಾರ, ಶುಭಂಕರ್ ದೀಕ್ಷಿತ್ ಎಂಬ ಅಂಗಡಿಯವನ ಬಳಿ ಕೃಷ್ಣೆಂದು ಚಿಪ್ಸ್ ಖರೀದಿಸಲು ಹೋಗಿದ್ದ. ಕೃಷ್ಣೆಂದು ಎಷ್ಟು ಬಾರಿ ಕರೆದರೂ, ಅಂಗಡಿಯಾತ ಕಿವಿಗೊಡಲಿಲ್ಲ. ಹೀಗಾಗಿ ಮನೆಯ ಬಳಿಯ ಅಂಗಡಿಯಾದ್ದರಿಂದ, ದುಡ್ಡು ಮತ್ತೆ ಕೊಟ್ಟರಾಯಿತು ಎಂದು ಚಿಪ್ಸ್ ಪ್ಯಾಕ್ ತೆಗೆದುಕ“ಂಡು ಬಂದಿದ್ದಾನೆ.
ಆದರೆ ಕೆಲ ಸಮಯದಲ್ಲೇ ಅಂಗಡಿಯವರು ಕೃಷ್ಣೆಂದು ಹಿಂಬಾಲಿಸಿ ಬಂದು, ಆತನ ಕಪಾಳಕ್ಕೆ ಬಡಿದು, ಬೈದು, ಬಸ್ಕಿ ಹೊಡೆಸಿದ್ದಾನೆಂದು ಆರೋಪಿಸಿದ್ದಾರೆ. ಅಲ್ಲದೇ ಬಾಲಕನ ತಾಯಿಯನ್ನು ಸ್ಥಳಕ್ಕೆ ಕರೆಸಿ, ಬೈದಿದ್ದಾರೆನ್ನಲಾಗಿದೆ.
ಅಲ್ಲದೇ, ಕೃಷ್ಣೆಂದು ತಾನು ದುಡ್ಡು ನೀಡಬೇಕು ಎಂದಿದ್ದೆ. ಆದರೆ ಅಂಗಡಿಯಲ್ಲಿ ಯಾರೂ ಇರಲಿಲ್ಲವೆಂದು ಹೇಳಿದರೂ, ಆದನ್ನು ಕೇಳದೇ ಅಂಗಡಿಯಾತ ಗದರಿಸಿದ್ದ ಎನ್ನಲಾಗಿದೆ. ಅಲ್ಲದೇ, ಬಳಿಕ ಚಿಪ್ಸ್ ದುಡ್ಡು ನೀಡಲು ಹೋದರೂ, ಆತ ಅವಮಾನಿಸುತ್ತಲೇ ಇದ್ದ ಎನ್ನಲಾಗಿದೆ.
ಹೀಗಾಗಿ ಬೇಸರಗ“ಂಡ ಬಾಲಕ, ಮನೆಗೆ ಬಂದು ರೂಮಿಗೆ ಹೋಗಿ ಬಾಗಿಲು ಹಾಕಿಕೋಂಡಿದ್ದ. ಬಳಿಕ ನೋಡಿದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಅವನ ಪಕ್ಕದಲ್ಲೇ ಕೀಟ ನಾಶಕದ ಬಾಟಲಿ ಇತ್ತು. ವಿಷ ಕುಡಿದಿದ್ದು, ಆತನನ್ನು ಉಳಿಸಿಕೋಳ್ಳಲು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಸಾವನ್ನಪ್ಪಿದ್ದಾನೆ.
Discussion about this post