ಹೊಸದಿಲ್ಲಿ: ಸಿಡಿಎಸ್ ಜನರಲ್ ಬಿಪಿನ್ ರಾವತ್,ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಸಶಸ್ತ್ರ ಪಡೆಗಳ 12 ಸಿಬ್ಬಂದಿಗಳು ಮೃತಪಟ್ಟಿದ್ದ ಹೆಲಿಕಾಪ್ಟರ್ ಪತನ ಕುರಿತು ಭಾರತೀಯ ವಾಯುಪಡೆಯ ವಿಚಾರಣೆಯು ಹೆಚ್ಚುಕಡಿಮೆ ಪೂರ್ಣಗೊಂಡಿದ್ದು,ಶೀಘ್ರವೇ ವರದಿಯನ್ನು ಸಲ್ಲಿಸಲಾಗುವುದು ಎಂದು ಸೇನಾಮೂಲಗಳು ರವಿವಾರ ತಿಳಿಸಿವೆ.
ತನಿಖೆ ಅಥವಾ ತನಿಖಾ ವರದಿಯ ಕುರಿತು ವಾಯುಪಡೆ ಅಥವಾ ಸರಕಾರ ಈವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಗೋಚರತೆಯು ಕಡಿಮೆಯಾಗಿದ್ದು ಪತನಕ್ಕೆ ಕಾರಣವಾಗಿರಬಹುದು ಎಂದು ಮೂಲಗಳು ಸೂಚಿಸಿವೆ.
ಅಪಘಾತಕ್ಕೆ ಪೈಲಟ್ ತಪ್ಪು ಮೂಲ ಕಾರಣವಾಗಿತ್ತೇ ಅಥವಾ ಗುಡ್ಡಗಾಡು ಪ್ರದೇಶದಲ್ಲಿ ಮೋಡಗಳಲ್ಲಿ ಕಾರ್ಯಾಚರಣೆಯ ನಿಯಮಗಳನ್ನು ಉಲ್ಲಂಘಿಸಲಾಗಿತ್ತೇ ಎಂಬ ಬಗ್ಗೆಯೂ ಈವರೆಗೆ ಯಾವುದೇ ಹೇಳಿಕೆ ಅಥವಾ ವಿವರಣೆ ಹೊರಬಿದ್ದಿಲ್ಲ.
ಪ್ರತಿಕೂಲ ಹವಾಮಾನದಿಂದಾಗಿ ಪೈಲಟ್ಗೆ ದಿಕ್ಕು ತಪ್ಪಿರಬಹುದು ಮತ್ತು ಆಕಸ್ಮಿಕವಾಗಿ ಭೂಪ್ರದೇಶದತ್ತ ಹೆಲಿಕಾಪ್ಟರ್ನ್ನು ಹಾರಿಸಿರಬಹುದು ಎಂದು ಏರ್ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದ ತನಿಖಾ ಸಮಿತಿಯು ನಂಬಿದೆ ಎಂದು ಮೂಲಗಳು ತಿಳಿಸಿದವು.
ಹೆಲಿಕಾಪ್ಟರ್ ಪತನಕ್ಕೆ ಯಾವುದೇ ತಾಂತ್ರಿಕ ಅಥವಾ ಯಾಂತ್ರಿಕ ದೋಷಗಳು ಕಾರಣವಾಗಿರುವ ಸಾಧ್ಯತೆಯನ್ನು ತನಿಖೆಯು ತಳ್ಳಿಹಾಕಿದೆ ಎಂದೂ ಮೂಲಗಳು ಹೇಳಿದವು. ತನಿಖಾ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸಲು ವಾಯುಪಡೆಯ ಕಾನೂನು ವಿಭಾಗದ ಸಲಹೆಯನ್ನು ಪಡೆದುಕೊಳ್ಳುತ್ತಿದ್ದು,ಐದು ದಿನಗಳಲ್ಲಿ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರಿಗೆ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.
ಡಿ.8ರಂದು ಜ.ರಾವತ್ ಅವರು ವೆಲಿಂಗ್ಟನ್ಗೆ ಪ್ರಯಾಣಿಸುತ್ತಿದ್ದ ರಷ್ಯಾ ನಿರ್ಮಿತ ಎಂಐ-17ವಿ5 ಹೆಲಿಕಾಪ್ಟರ್ ತಮಿಳುನಾಡಿನ ಕೂನೂರು ಬಳಿ ಪತನಗೊಂಡಿತ್ತು.
Adverse weather possible cause
Discussion about this post