ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಜನಜೀವನ ಮತ್ತೆ ಮೊದಲಿನಂತಾಗುತ್ತಿದೆ. ಇದೀಗ ತಜ್ಞರು ಮೂರನೇ ಅಲೆಯ ಬಗ್ಗೆ ಮಾತನಾಡಿದ್ದು, ಸಮಾಧಾನದ ಅಂಶವೊಂದನ್ನು ಬಹಿರಂಗಪಡಿಸಿದ್ದಾರೆ.
ಮೂರನೇ ಅಲೆಯು ಎರಡನೇ ಅಲೆಯಷ್ಟು ಅಪಾಯಕಾರಿ ಇರುವುದಿಲ್ಲ. ಡಿಸೆಂಬರ್-ಫೆಬ್ರವರಿ ತಿಂಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಏರಿಕೆಯಾಗಬಹುದು ಆದರೆ ಅದು 2 ನೇ ಅಲೆಯಲ್ಲಿ ಇದ್ದಷ್ಟು ತೀವ್ರತೆ ಇರುವುದಿಲ್ಲ ಎಂದು ಹೇಳಿದ್ದಾರೆ.
ಆದರೆ ಕೋವಿಡ್ ಹರಡುವಿಕೆ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಮುನ್ನೆಚ್ಚರಿಕಾ ಕ್ರಮಗಳನ್ನಾಗಲೀ, ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳನ್ನಾಗಲೀ ಮರೆಯುವಂತಿಲ್ಲ. ಪ್ರತಿಯೊಬ್ಬರು ಜಾಗ್ರತರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಿರುವುದಕ್ಕಿಂತ ಹೆಚ್ಚು ವೇಗಗತಿಯಲ್ಲಿ ಹರಡುವ ಕೋವಿಡ್ ಹೊಸ ರೂಪಾಂತರಿಗಳು ಪತ್ತೆಯಾಗದಿದ್ದರೆ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕ್ರಮೇಣ ಕಡಿಮೆ ಆಗಲಿದೆ” ಎಂದು ನಿಪಾಟ್ ನ ಅಶೋಕ ವಿಶ್ವವಿದ್ಯಾಲಯದಲ್ಲಿನ ಭೌತಶಾಸ್ತ್ರ ಹಾಗೂ ಜೀವಶಾಸ್ತ್ರದ ವಿಭಾಗದ ಪ್ರೊಫೆಸರ್ ಗೌತಮ್ ಮೆನನ್ ಮಾಹಿತಿ ನೀಡಿದ್ದಾರೆ.
ಎರಡನೇ ಅಲೆಯು ಬಹುತೇಕ ಭಾರತೀಯರಿಗೆ ತಗುಲಿದ್ದು, ಈ ಸಮಯದಲ್ಲಿ ಲಸಿಕೆ ಅಭಿಯಾನದ ವೇಗವನ್ನು ಹೆಚ್ಚಿಸಲಾಗಿತ್ತು. ಲಸಿಕೆ ಪಡೆದವರಿಗೆ ಕೋವಿಡ್ ಸೋಂಕು ತಗುಲಿದ್ದರೂ ಸಹ ಅನೇಕ ಪ್ರಕರಣದಲ್ಲಿ ಐಸಿಯುಗೆ ದಾಖಲಾಗುವ ತುರ್ತು ಪರಿಸ್ಥಿತಿ, ಮತ್ತು ಸಾವಿನ ಭೀತಿಯಿಂದ ರಕ್ಷಣೆ ಸಿಕ್ಕಿದೆ ಎಂದು ಮೆನನ್ ಹೇಳಿದ್ದಾರೆ.
Covid case
Discussion about this post