• Home
  • About Us
  • Contact Us
  • Terms of Use
  • Privacy Policy
Friday, August 8, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
Shri News
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

Headache: ತಲೆ ನೋವು ನಿವಾರಿಸಬಲ್ಲ ಆಹಾರಗಳು

Shri News Desk by Shri News Desk
Oct 28, 2021, 10:34 am IST
in ಆರೋಗ್ಯ
Share on FacebookShare on TwitterTelegram

ಮೈಗ್ರೇನ್ ಮತ್ತು ತಲೆನೋವುಗಳನ್ನು ಪ್ರಚೋದಿಸುವಂತಹ ಆಹಾರಗಳ ಬಗ್ಗೆ ನಾವು ಎಲ್ಲವನ್ನೂ ಕೇಳಿದ್ದೇವೆ. ಅದರ ಜತೆಗೆ ತಲೆನೋವನ್ನು ನಿವಾರಿಸಲು ಸಹಾಯ ಮಾಡುವ ಆಹಾರಗಳು ಇವೆ ಎಂಬುದು ಗೊತ್ತೇ? ನಿಮ್ಮ ದೈನಂದಿನ ಆಹಾರದ ಭಾಗವಾಗಿ ನೀವು ಇವುಗಳನ್ನು ಸೇವಿಸಿದರೆ ನಿಜಕ್ಕೂ ಪರಿಣಾಮಕಾರಿಯಾಗಿರುತ್ತದೆ.

ತಲೆ ನೋವು; ಅದು ಯಾವಾಗ ಬಂದು ಒಕ್ಕರಿಸತ್ತೆ ಎಂದು ಹೇಳಲಾಗುವುದಿಲ್ಲ. ಬಂದ ಮೇಲೆ ದಿನವಿಡಿ ಕಾಡುವ, ಕೆಲವೊಮ್ಮೆ ದೀರ್ಘಕಾಲದವರೆಗೆ ಕಾಡುತ್ತಲೇ ಇರುವ ಬರಲು ಕಾರಣ ಒಂದೇ ಇರಬೇಕಿಲ್ಲ. ಒತ್ತಡ , ಕೆಲಸ ಜಾಸ್ತಿಯಾದರೆ, ಸರಿಯಾಗಿ ಆಹಾರ ಸೇವಿಸದಿದ್ದರೆ, ನಿದ್ರಾ ಹೀನತೆ- ಹೀಗೆ ಹಲವಾರು ಕಾರಣಕ್ಕೆ ಸಹಿಸಲಾರದಷ್ಟು ತಲೆ ನೋವು ಬಂದುಬಿಡುತ್ತೆ. ಆಗ ನೀವು ಮಾತ್ರೆ ನುಂಗಿ ಬಿಡುತ್ತೀರ. ಆದರೆ ಹೀಗೆ ತಲೆ ನೋವು ಬಂದಾಗೆಲ್ಲ ಮಾತ್ರ ಸೇವಿಸುವುದು ನಿಜಕ್ಕೂ ಒಳ್ಳೆಯದಲ್ಲ. ಅದು ರೂಢಿಯಾಗಿ ಬಿಡುತ್ತದೆ. ಅದರ ಜತೆಗೆ ಪೇನ್ ಕಿಲ್ಲರ್ ನುಂಗಿ ಬಿಡುತ್ತೀರ. ಆದರೆ ನೋವು ನಿವಾರಕ ಮಾತ್ರೆಯನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದಲ್ಲ ಎಂಬುವುದು ನಿಮಗೆ ತಿಳಿದಿರಬಹುದು.
ಮೈಗ್ರೇನ್ ಮತ್ತು ತಲೆನೋವುಗಳನ್ನು ಪ್ರಚೋದಿಸುವಂತಹ ಆಹಾರಗಳ ಬಗ್ಗೆ ನಾವು ಎಲ್ಲವನ್ನೂ ಕೇಳಿದ್ದೇವೆ. ಅದರ ಜತೆಗೆ ತಲೆನೋವನ್ನು ನಿವಾರಿಸಲು ಸಹಾಯ ಮಾಡುವ ಆಹಾರಗಳು ಇವೆ ಎಂಬುದು ಗೊತ್ತೇ? ನಿಮ್ಮ ದೈನಂದಿನ ಆಹಾರದ ಭಾಗವಾಗಿ ನೀವು ಇವುಗಳನ್ನು ಸೇವಿಸಿದರೆ ನಿಜಕ್ಕೂ ಪರಿಣಾಮಕಾರಿಯಾಗಿರುತ್ತದೆ.

ತಲೆನೋವು ತೊಡೆದುಹಾಕಲು 9 ಸಲಹೆಗಳು
ತಲೆನೋವಿಗೆ ಸಾಮಾನ್ಯ ಆಹಾರ ಪ್ರಚೋದಕಗಳು ಇಲ್ಲಿವೆ: ಬಾಳೆ ಹಣ್ಣು, ಬೀನ್ಸ್, ಚಾಕೊಲೇಟ್, ಸಂಸ್ಕೃರಿತ ಡೈರಿ ಉತ್ಪನ್ನಗಳು, ಚೀಸ್, ಟೊಮೆಟೊಗಳು ಮತ್ತು ಈರುಳ್ಳಿಗಳು. ಆಲ್ಕೊಹಾಲ್ ಕೂಡಾ ತಲೆ ನೋವಿಗೆ ಕಾರಣವಾಗಬಹುದು.

ಫೈಬರ್+ ಪ್ರೊಟೀನ್‌ಯುಕ್ತ ಆಹಾರ
ಉಪವಾಸ ಮತ್ತು ಊಟವನ್ನು ತಪ್ಪಿಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ತಲೆ ನೋವು ಬರುತ್ತದೆ. ಹೀಗಾಗಿ ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿರುವ ಆಹಾರ ಸೇವಿಸುವುದು ಒಳ್ಳೆಯದು. ನೀವು ಸೇವಿಸುವ ಆಹಾರ ಆಮ್ಲಜನಕ ಮತ್ತು ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಆ ಶಕ್ತಿಯು ಖಾಲಿಯಾದ ನಂತರ, ನಿಮ್ಮ ಮೆದುಳಿಗೆ ಆಹಾರ ಬೇಕಾಗುತ್ತದೆ. ಅಗತ್ಯ ಪೋಷಕಾಂಶಗಳ ಕೊರತೆ ಎದೆಗುಂದಿಸುವ ನೋವನ್ನು ಉಂಟುಮಾಡಬಹುದು.

ಏನು ಮಾಡಬೇಕು: ಪ್ರತಿ ಮೂರು ನಾಲ್ಕು ಗಂಟೆಗಳವರೆಗೆ ಸ್ವಲ್ಪ ಸ್ವಲ್ಪ ಆಹಾರ ಸೇವಿಸುತ್ತೀರಿ.

ವಿಟಾಮಿನ್ ಇ

ವಿಟಮಿನ್ ಇ ಈಸ್ಟ್ರೊಜೆನ್ ಮಟ್ಟವನ್ನು ಸ್ಥಿರಗೊಳಿಸುತ್ತದೆ, ಅವಧಿಗೆ ಸಂಬಂಧಿಸಿದ ಮೈಗ್ರೇನ್‌ಗಳನ್ನು ನಿವಾರಿಸುತ್ತದೆ.

ಏನು ಮಾಡಬೇಕು: ಎಳ್ಳಿನ ಬೀಜಗಳನ್ನು ತಿನ್ನಿರಿ. ವಿಟಮಿನ್ ಇ ಜೊತೆಗೆ, ಎಳ್ಳು ಕೂಡ ಎಲ್-ಆರ್ಜಿನೈನ್ ಭರಿತವಾಗಿರುತ್ತದೆ. ಇದು ಒತ್ತಡದ ತಲೆನೋವು ಮತ್ತು ಮೈಗ್ರೇನ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬಿಟರೂಟ್ ಮತ್ತುಬಿಟರೂಟ್ ರಸ ಸಹ ಉತ್ತಮ.
ಹೈ ಮೆಗ್ನಿಷಿಯಂ + ಕೊಬ್ಬು

ಮೆಗ್ನಿಷಿಯಂ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ಮೆದುಳಿನಲ್ಲಿ ಮೈಗ್ರೇನ್-ಪ್ರಚೋದಿಸುವ ವಿದ್ಯುತ್ ಸಂಕೇತಗಳನ್ನು ಉತ್ಪತ್ತಿ ಮಾಡುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ಕೊಬ್ಬು ರಕ್ತದೊತ್ತಡವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ.

ಏನು ಮಾಡಬೇಕು: ಮೆಗ್ನಿಷಿಯಂ ಭರಿತ ಆಹಾರಗಳಾದ ಮೀನು, ಬೀನ್ಸ್ ಮತ್ತು ಗಾಢ ಹಸಿರು, ಎಲೆಗಳ ತರಕಾರಿಗಳು ಮತ್ತು ಕುಂಬಳಕಾಯಿ ಬೀಜಗಳನ್ನು ಸೇವಿಸಿ.

ಮೆಗ್ನಿಷಿಯಂ ವರ್ಧಕ ಆಹಾರಗಳಾದ ಸೂಪ್, ಸಲಾಡ್ ಸೇವಿಸಿ.

ಕೆಫೀನ್

ಕೆಲವರು ವಾರಾಂತ್ಯದಲ್ಲಿ ತಲೆ ನೋವನ್ನು ಅನುಭವಿಸುತ್ತಾರೆ. ಇದಕ್ಕೆ ಕಾರಣ ವಾರದ 5 ದಿನ ಕಚೇರಿಗಳಗಲ್ಲಿ ಪದೇ ಪದೇ ಟೀ, ಕಾಫಿ ಕುಡಿಯುವ ಚಟ. ಉಳಿದ 2 ದಿನ ಎಂದಿನಂತೆ ಕಾಫಿ, ಟೀ ಕುಡಿಯದಿರುವುದರಿಂದ ಅಂತವರಿಗೆ ತಲೆ ನೋವು ಒಕ್ಕರಿಸಿಕೊಳ್ಳುತ್ತದೆ.

ಕೆಫೀನ್ ತಲೆ ನೋವಿಗೆ ಕಾರಣವೂ ಆಗಬಲ್ಲದು, ಮದ್ದು ಆಗಬಲ್ಲದು.

ಏನು ಮಾಡಬೇಕು: ಹೀಗಾಗಿ ನಿಮ್ಮ ಆಹಾರದಲ್ಲಿ ಕೆಫೀನ್‌ನ್ನು ನಿಧಾನವಾಗಿ ತಗ್ಗಿಸುತ್ತ ಬನ್ನಿ. ದಿನಕ್ಕೆ ಒಂದು ಅಥವಾ ಎರಡು ಸಲ ಮಾತ್ರ ಸೇವಿಸುವ ರೂಢಿ ಬೆಳೆಸಿಕೊಳ್ಳಿ.

ಒಮೆಗಾ 3

ಈ ಅದ್ಭುತ ಪೌಷ್ಟಿಕಾಂಶವು ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುವಲ್ಲಿ ರಾಮ ಬಾಣ. ರಕ್ತದೊತ್ತಡ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ .

ಏನು ಮಾಡಬೇಕು: ನಿಮ್ಮ ಆಹಾರದಲ್ಲಿ ಸಾಲ್ಮನ್ ಮತ್ತು ಬಂಗಡೆಯಂತಹ ಕೊಬ್ಬಿನ ಮೀನುಗಳನ್ನು ಸೇರಿಸಿ. ನೀವು ಸಸ್ಯಾಹಾರಿಯಾಗಿದ್ದರೆ ನಂತರ ಅಗಸೆ ಬೀಜ ಸೇವಿಸಿ

ವಿಟಾಮಿನ್ ಡಿ

ವಿಟಮಿನ್ ಡಿ ಕೊರತೆ ಇದ್ದರೆ ತಲೆ ನೋವು ಕಾಣಿಸಿಕೊಳ್ಳಬಹುದು. ಸೂರ್ಯನ ಬೆಳಕು ಕಡಿಮೆ ಇರುವ ದಿನಗಳು ವಿಟಾಮಿನ್ ಡಿ ಕೊರತೆಗೆ ಕಾರಣವಾಗಿ ತಲೆ ನೋವು ಬರಬಹುದು.

ಏನು ಮಾಡಬೇಕು: ನಿಮ್ಮ ಸ್ವಲ್ಪ ಸಮಯವನ್ನು ಎಳೆ ಬಿಸಿಲಲ್ಲಿ ಕಳೆಯಿರಿ.

ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ

ನಿರ್ಜಲೀಕರಣ ಸಹ ತಲೆನೋವು ಬರಲು ಪ್ರಮುಖ ಕಾರಣ. ನಮ್ಮ ಮೆದುಳಿನ 75% ನೀರಿನಿಂದ ತುಂಬಿರುತ್ತದೆ. ನಿರ್ಜಲೀಕರಣಗೊಂಡಾಗ ನೀರನ್ನು ಹಿಡಿದಿಡಲು ಮೆದುಳು ಹಿಸ್ಟಮಿನ್‌ಗಳನ್ನು ಉತ್ಪಾದಿಸುತ್ತದೆ. ಇದು ನೋವು ಮತ್ತು ಸಾಮಾನ್ಯ ಆಯಾಸಕ್ಕೆ ಕಾರಣವಾಗಬಹುದು.

ಏನು ಮಾಡಬೇಕು: ದಿನಕ್ಕೆ ಕನಿಷ್ಠ 7, 8 ಗ್ಲಾಸ್ ನೀರು ಕುಡಿಯಿರಿ . ತುಂಬಾ ನೀರು ಕುಡಿಯುವುದು ಇಷ್ಟವಾಗಲ್ಲವೆಂದರೆ ಹೆಚ್ಚಿನ ನೀರಿನಂಶವಿರುವ ಸವತೆಕಾಯಿ, ಕಲ್ಲಂಗಡಿಯಂತಹ ಹಣ್ಣುಗಳನ್ನು ಹೆಚ್ಚೆಚ್ಚು ಸೇವಿಸಿ.

ಶುಂಠಿ

ಶುಂಠಿ ಹಲವಾರು ಪೋಷಕಾಂಶಗಳನ್ನು ಹೊಂದಿದ್ದು ಮೈಗ್ರೇನ್ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಏನು ಮಾಡಬೇಕು: ಶುಂಠಿ ಚಹಾದೊಂದಿಗೆ ದಿನವನ್ನು ಪ್ರಾರಂಭಿಸಿ.

Tags: Headache
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

ನಿಮ್ಮ ದೃಷ್ಟಿ ತೀಕ್ಷ್ಣವಾಗಿರಬೇಕು, ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ

Beauty Tips: ಈ 6 ಸೌಂದರ್ಯ ಸಲಹೆ ಅನುಸರಿಸಿ, ನಿಮ್ಮ ಬ್ಯೂಟಿ ಹೆಚ್ಚಿಸಿ

Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ

Spiritual: 6 ಪುರಾಣ ಕಥೆಗಳು: ಗಂಗಾ ಸ್ನಾನ, ಭೃಗು ಋಷಿ ಶಾಪ, ಹನುಮನ ಗಧೆ ಹಲವು ವಿಷಯಗಳ ಬಗ್ಗೆ ಕಥೆ

ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..

Recipe: 10 ಬಗೆಯ ರುಚಿಯಾದ ಧಿಡೀರ್ ತಿಂಡಿಗಳ ರೆಸಿಪಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In