ಬೆಳ್ತಂಗಡಿ: ಇನ್ನೂ ಆಟ, ಪಾಠದಲ್ಲಿ ಮಗ್ನನಾಗಿ ಭವಿಷ್ಯದ ಕಲ್ಪನೆಯಲ್ಲಿ ಕನಸು ಕಟ್ಟುತ್ತಿರುವ 8 ನೇ ತರಗತಿಯ ಬಾಲಕನೋರ್ವ ಕಾಲಿನ ಎಲುಬು ಕ್ಯಾನ್ಸರ್ನಿಂದ ನೋವು ಅನುಭವಿಸುತ್ತಿದ್ದು, ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಪೋಷಕರು ಕಣ್ಣೀರು ಸುರಿಸುತ್ತಿದ್ದಾರೆ. ಮುಂದೇನು ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಇದು ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಅಶ್ವಥನಗರ ನಿವಾಸಿ ಸುರೇಶ್ ಚೌಟ ಮತ್ತು ಭಾರತಿ ದಂಪತಿಗಳ ಪುತ್ರ ಸುಪ್ರಿತ್ ಎಸ್. ಚೌಟ ಎಂಬ ಬಾಲಕನಿಗೇ ಸಹಾಯಹಸ್ತ ಬೇಕಿದೆ.
ಗೇರುಕಟ್ಟೆಯ ಕೊರಂಜ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 8 ನೇ ತರಗತಿಯಲ್ಲಿ ಕಲಿಯುತ್ತಿರುವ ಸುಪ್ರಿತ್ ಎಲ್ಲಾ ಮಕ್ಕಳಂತೆ ಆಟ, ಪಾಠಗಳಲ್ಲಿ ಚುರುಕಾಗಿದ್ದು, ಕ್ಯಾನ್ಸರ್ ಎಂಬ ಮಾರಿ ಈತನ ಭವಿಷ್ಯಕ್ಕೆ ಮುಳುವಾಗಿದೆ. ಲಾಕ್ ಡೌನ್ ಮುಗಿದು ಶಾಲೆಗೆ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದಂತೆ ಕಾಲಿನ ನೋವು ಕಾಡತೊಡಗಿದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಕಾಲಿನಲ್ಲಿ ಎಲುಬಿನ ಕ್ಯಾನ್ಸರ್ ಪತ್ತೆಯಾಗಿದೆ. ವಿಷಯ ತಿಳಿದ ಪೋಷಕರು ಕಂಗಾಲಾಗಿದ್ದಾರೆ. ಈಗಾಗಲೇ ಪ್ರಾಥಮಿಕ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಇನ್ನು ಮುಂದಿನ ಚಿಕಿತ್ಸೆಗಳು, ಶಸ್ತ್ರ ಚಿಕಿತ್ಸೆ ಹಾಗೂ ನಂತರ ಚಿಕಿತ್ಸೆಗಳಿಗಾಗಿ ಅಂದಾಜು 13 ಲಕ್ಷ ದಷ್ಟು ವೆಚ್ಚ ತಗುಲಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಕೇವಲ 5 ಸೆನ್ಸ್ ಜಾಗದಲ್ಲಿ ಮನೆ ಮಾಡಿಕೊಂಡು, ಮಂಗಳೂರಿನ ಹೊಟೇಲ್ ಕಾರ್ಮಿಕನಾಗಿರುವ ಸುರೇಶ್ ಚೌಟ ದಂಪತಿಗೆ ಇಬ್ಬರು ಮಕ್ಕಳು. ಹಿರಿಯಾಕೆ ಕಾಲೇಜು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಜೀವನ ನಿರ್ವಹಣೆಯೇ ಒಂದು ಸವಾಲು ಆಗಿದೆ. ಇದರ ನಡುವೆ ಮಗನ ಆರೋಗ್ಯ ಕಂಗೆಡುವಂತೆ ಮಾಡಿದೆ. ತಾಯಿ ಬೀಡಿ ಕಟ್ಟಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸುಪ್ರೀತ್ ನ ಪ್ರಾಥಮಿಕ ಚಿಕಿತ್ಸೆ ನಡೆಯುತ್ತಿದ್ದು, ಈಗಾಗಲೇ ಒಂದು ಲಕ್ಷದಷ್ಟು ಹಣ ಖರ್ಚಾಗಿದೆ. ಲಾಕ್ ಡೌನ್ ನಂತರ ಸರಿಯಾಗಿ ಕೆಲಸವಿಲ್ಲದೆ ಒತ್ತಡದಲ್ಲಿದ್ದ ಸುರೇಶ್ ಚೌಟ ಅವರು ಮಗನ ಚಿಕಿತ್ಸೆಗೆ ಮೊತ್ತ ಹೊಂದಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ಸುಪ್ರೀತ್ ನ ಭವಿಷ್ಯದ ದೃಷ್ಟಿಯಿಂದ ಇನ್ನು 20 ದಿನದೊಳಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ.
ಸುಪ್ರಿತ್ ಮತ್ತೆ ಶಾಲೆಗೆ ಹೋಗಿ ಮೊದಲಿನಂತಾಗಬೇಕಾದರೆ ಸಮಾಜದ ಸಹೃದಯಿ ದಾನಿಗಳ ಸಹಕಾರ ಬೇಕಾಗಿದೆ. ದಾನಿಗಳು ತಮ್ಮ ಕೈಲಾದ ಸಹಕಾರವನ್ನು ನೀಡಿದರೆ ಮಗನಿಗೆ ಚಿಕಿತ್ಸೆ ನೀಡಬಹುದೇನೋ ಎಂಬ ಭರವಸೆಯಲ್ಲಿ ಪೋಷಕರಿದ್ದಾರೆ.
ಸಹೃದಯಿ ದಾನಿಗಳು ಕೆನರಾ ಬ್ಯಾಂಕ್ ಕಳಿಯ ಶಾಖೆಯ ಸುಪ್ರಿತ್ ಅವರ ಖಾತೆ ಹಣವನ್ನು ಹಾಕಿ ಸಹಕರಿಸಬಹುದಾಗಿದೆ. ಸಹಾಯಹಸ್ತ ನೀಡಲು ಬಯಸುವ ದಾನಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು
ಸುಪ್ರಿತ್ ಎಸ್ ಚೌಟ ಕೆನರಾ ಬ್ಯಾಂಕ್ ಕಳಿಯ ಶಾಖೆ
ಖಾತೆ ನಂ 02142200054492
IFSC code CNRB0010214
ಅಥವಾ phone pay no. 8088639616 ಈ ಸಂಖ್ಯೆಗೆ ಕಳುಹಿಸಬಹುದು
ಬರಹ ಕೃಪೆ: ರಾಜೇಶ್ ಮಾಡಡ್ಕ
ಇದನ್ನೂ ಓದಿ: ಮೊಗೆದಷ್ಟೂ ಅರಿವು, ತಿಳಿದಷ್ಟು ಬೆರಗು: ಪೂರ್ಣ ಚಂದ್ರ ತೇಜಸ್ವಿ ಸೊಬಗು !
Discussion about this post