ಮಲೆನಾಡು ಎಲ್ಲಾ ಹವಾಮಾನಕ್ಕೆ ಹೊಂದಿಕೊಂಡು ಒಂದಷ್ಟು ಪ್ರವಾಸಿಗರ ಕೈ ಬೀಸಿ ಕರೆಯುವ ಸ್ವಚ್ಛಂದ ಹಸಿರಿನ ಮಧ್ಯ , ಪ್ರಾಣಿ ಪಕ್ಷಿಗಳ ಸಂಕುಲವನ್ನೆ ತನ್ನ ಒಡಲಿನಲ್ಲಿ ಅಡಗಿಸಿಕೊಂಡ ಸುಂದರ ತಾಣ.. ಮಳೆಗಾಲದಲ್ಲಿ ಕಣ್ಣುಹಾಯಿಸಿದಷ್ಟು ಹಸಿರು ವರ್ಣದ ಲೇಪನ ತೊಡಿಸಿದಂತೆ ಕಂಡು, ಚಳಿಗಾಲದಲ್ಲಿ ಮೈ ನಡುಕ ಹುಟ್ಟಿಸುವ ಮಧ್ಯಾಹ್ನದ ಬೇಸಿಗೆಗೆ ಮೈ ಒಡ್ಡುವ ನಡುಕ.
ವಾತಾವರಣಕ್ಕೆ ಹೊಂದಿಕೊಂಡಂತೆ ಮಲೆನಾಡ ರೈತರು ಬೆಳೆ ಬೆಳೆಯುತ್ತ ನಿತ್ಯ ಜೀವನಕ್ಕೆ ಹೊಂದಿಕೊಂಡು ಜೀವನದ ಬಂಡಿ ಸಾಗಿಸುತ್ತ ಬಂದಿದ್ದಾರೆ. ಆದರೆ ಹಲವು ಕೆಲ ತಿಂಗಳಲ್ಲಿ ಸುರಿಯುತ್ತಿರುವ ಮಳೆ ರೈತರ ಜೀವನ ಮತ್ತು ರೈತರ ಕನಸುಗಳು ಮಳೆನೀರಿನಲ್ಲಿ ಎರ್ರಾಬಿರ್ರಿ ಕೊಚ್ಚಿ ಹೋಗುತ್ತಿರುವುದು ಮಾತ್ರ ಸುಳ್ಳಲ್ಲ. ಅಕಾಲಿಕ ಮಳೆ, ಮಲೆನಾಡಿಗರ ಪ್ರಮುಖ ಬೆಳೆಯಾದ ಅಡಿಕೆ, ಕಾಫಿ,ಭತ್ತ, ಮೆಣಸು ಈ ಅಕಾಲ ಮಳೆಯಿಂದಾಗಿ ಬಿಡುವಿಲ್ಲದ ಮಳೆಗೆ ನೆಲ ಸೇರುತ್ತಿದೆ..
ಇದನ್ನೂ ಓದಿ: Continuous rainfall in Tirupati: ತಿರುಪತಿಯಲ್ಲಿ ನಿರಂತರ ಮಳೆ- ಮನೆಯಿಂದ ಆಚೆ ಬರದಂತೆ ಸೂಚನೆ
ಮಲೆನಾಡು ಮಳೆನಾಡು ಎಂದು ಪ್ರಸಿದ್ಧಿ ಹೊಂದಿರುವುದು ನಿಜ ಆದರೆ ದೇಶದ ಬೆನ್ನೆಲುಬು ಆಗಿರುವ ರೈತನ ಜೀವನವನ್ನೇ ಅಲುಗಾಡಿಸುತ್ತಿರುವುದು ಮಾತ್ರ ವಿಪರ್ಯಾಸ. ಅಡಿಕೆ ಈಗ ರೈತರ ಕಣ ಸೇರಬೇಕಾಗಿದ್ದು ಕೆಂಪಾಗಿ ಮರದಲ್ಲೆ ಕೊಳೆತ ಸ್ಥಿತಿ ತಲುಪಿದೆ. ಇತ್ತ ಒಣಗಿಸಲು ಬಿಸಿಲು ಇಲ್ಲದೆ ಮೋಡಗಳ ನಡುವೆ ಸಿಕ್ಕು ಅಡಿಕೆ ಬಣ್ಣ ಕಳೆದುಕೊಂಡು ರೈತರ ಮುಖದಲ್ಲಿ ಹುರುಪು ಕಣ್ಮರೆಯಾಗಿದೆ. ಯಾವ ಮಳೆಗೆ ಪ್ರಾರ್ಥನೆ ಮಾಡಿ ನೆಲವನ್ನು ಉತ್ತು ಬಿತ್ತು ಬೆಳೆದ ಭತ್ತ ತೆನೆ ಬಾಗಿ ರೈತನ ಕಣ ಸೇರುವ ಮೊದಲೆ, ಅಕಾಲಿಕ ಮಳೆಗೆ ಸಿಕ್ಕಿ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಸಿದೆ..
ಇದನ್ನೂ ಓದಿ: 19 NOV ( ನಿತ್ಯ ಭವಿಷ್ಯ)
ನಾವು ಮಲೆನಾಡು ಸ್ವರ್ಗ, ಪ್ರೇಕ್ಷಣೀಯ ಸ್ಥಳ ನೋಡಿ , ಅಪರೂಪಕ್ಕೆ ಬಂದು, ಮಳೆಯಲ್ಲಿ ಮಿಂದು ಎದ್ದು ಹೋಗುವ ಅದೆಷ್ಟೋ ಮಂದಿಗೆ ಮಲೆನಾಡಿನ ಬದುಕು ಮತ್ತು ಜೀವನದ ಬಗ್ಗೆ ಹೇಳುವಷ್ಟು ನೋಡುವಷ್ಟು ಸೊಗಸಾದ ಜೀವನವಲ್ಲ ಎಂಬುದು ತಿಳಿಯುವ ಮಟ್ಟಿಗೆ ವಿಪರ್ಯಾಸವಾಗಿದೆ.ಸರ್ಕಾರ ಇನ್ನಾದರೂ ರೈತರ ಕಡೆ ಗಮನ ಹರಿಸಿ ಅವರ ಸ್ವಾವಲಂಬನೆಯ ಬದುಕಿಗೆ ಇನ್ನಷ್ಟು ಪ್ರೋತ್ಸಾಹ ಕೊಡುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿರುವುದೇ
ಉತ್ತಮ ಎನ್ನುವುದೇ ಪ್ರತಿಯೊಬ್ಬ ರೈತರ ಕೂಗು.ಇದಕ್ಕೆ ಉತ್ತರಿಸುವುದು ಯಾರು ಮತ್ತು ಮಲೆನಾಡಿನ ಪ್ರತಿಯೊಬ್ಬರ ಗತಿ ಮುಂದೇನು ಎನ್ನುವುದೇ ಪ್ರಶ್ನೆಯಾಗಿ ಉಳಿದಿದೆ.
ಇದನ್ನೂ ಓದಿ: Farm Laws: ವಿವಾದಿತ ಕೃಷಿಕಾಯ್ದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ
ಮಲೆನಾಡಿನಲ್ಲಿ ಕೇವಲ ಮಳೆಯಿಂದ ಮಾತ್ರ ಹಾನಿ ಆಗಿದೆಯ? ಅಂತ ಕೇಳಿದರೆ ಖಂಡಿತವಾಗಿ ಇಲ್ಲ ಹವಾಮಾನ ವೈಪರೀತ್ಯ ಒಂದು ಕಡೆ ಆದರೆ ಕಳೆದ ಹಲವು ವರ್ಷಗಳಿಂದ ಅಡಕೆಗೆ ಹಳದಿ ರೋಗ, ಬೇರು ಹುಳುಗಳ ಕಾಟ, ಸುಳಿಕೊಳೆಯುವ ರೋಗ, ಇನ್ನಿತರ ಹಲವು ಸಂಕಷ್ಟಗಳು ರೈತರ ಜೀವನಕ್ಕೆ ಸವಾಲಾಗಿಯೇ ಉಳಿದಿವೆ. ಸಾವಯವ ಕೃಷಿ ಪದ್ದತಿ ಅಳವಡಿಕೆ ಕಮ್ಮಿ ಆಗಿ, ಕೆಮಿಕಲ್ ಬಳಕೆಯು ಇದಕ್ಕೆ ಪ್ರಮುಖ ಕಾರಣವಾ ಏನು ಅಂತ ಹುಡಕಬೇಕಿದೆ.
ಇದನ್ನೂ ಓದಿ: Farm Laws: ವಿವಾದಿತ ಕೃಷಿಕಾಯ್ದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ
ಕಾಫಿ ಮತ್ತು ಮೆಣಸು ರೈತರ ವರದಾನ ಅಂದುಕೊಂಡವರು ಅದೆಷ್ಟೋ ಮಂದಿ ಕಾಫಿಗೆ ಬೋರರ್ ಹಾಗೂ ಮೆಣಸಿಗೆ ಹಳದಿ ಎಲೆ ಕಾಯಿಲೆ ಬಂದು ನಿದ್ದೆ ಕೆಡಿಸಿದೆ.ಕಾಫಿ ಬೆಳೆಯುವ ಸಮಾನ್ಯ ರೈತನ ಆದಾಯಕ್ಕಿಂತ ತೋಟದ ಕೆಲಸ ಮಾಡುವ ಕೂಲಿಕಾರ್ಮಿಕರ ಸಂಬಳ ಮತ್ತು ಅವರು ಮಾಡುವ ಕೆಲಸದ ಸಮಯ ಎರಡೂ ಆದಾಯಕ್ಕಿಂತ ಖರ್ಚೇ ಹೆಚ್ಚಾಗಿ ನಷ್ಟವೇ ಜಾಸ್ತಿಯಾಗಿ ಬಿಟ್ಟಿದೆ..
ರೈತ ಕರ್ಮಯೋಗಿ ಭೂಮಿಪುತ್ರ , ಬೆವರ ಹನಿ ಹರಿಸಿ ಭೂಮಿ ಸೋಕಿಸಿ ದುಡಿವ ಅವನು ಯಾರಿಂದಲೂ ಅಪೇಕ್ಷೆ ಪಟ್ಟವನು ಅಲ್ಲ. ಆದರೆ ರೈತರಿಗೆ ಹವಾಮಾನ ವೈಪರೀತ್ಯ ಒಂದು ಕಡೆ ಆದರೆ ಬೆಳೆದ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಕೆಲವು ರೋಗಗಳು ಇನ್ನೊಂದೆಡೆ, ಅದರ ಮಧ್ಯೆ ಜೀವ ಸಂಕುಲವನ್ನು ಉಳಿಸುವ ನಿಟ್ಟಿನಲ್ಲಿ ಮಲೆನಾಡಿಗೆ ಸೆಕ್ಷನ್ 4, ಹುಲಿಯೋಜನೆ, ಕಸ್ತೂರಿ ರಂಗನ್ ವರದಿ ಇವೆಲ್ಲವೂ ರೈತನ ನಿದ್ದೆ ಗೆಡಿಸಿರುವುದು ಸುಳ್ಳಲ್ಲ. ನಾವು ಯಾವ ರೈತನನ್ನು ಬೆನ್ನೆಲುಬು ಎಂದು ಬೀಗುವ ನಾವು ಅವನ ಜೀವನ ಮತ್ತು ನಿತ್ಯಕಾಯಕದ ಭೂಮಿ ಉಳಿಸಲು ಪ್ರಯತ್ನ ಮಾಡುವುದು ಉತ್ತಮ ಅಲ್ವ.
ಅಕಾಲಿಕ ಮಳೆ ಬೆಳೆದ ರೈತನ ಕಣಜ ತುಂಬಲಾಗುತ್ತಿಲ್ಲ. ಮಾಡಿರುವ ಸಾಲದ ಹೊರೆ ತಿರಿಸಲು ಅಸಾಧ್ಯ.. ಹಿಡಿದ ನೇಗಿಲ ಮೇಲೆ ತನ್ನ ನಂಬಿಕೆಗಳನ್ನು ಇಟ್ಟು ಹೊರಟ ರೈತನಿಗೆ ಇದೆಂತ ಅಗ್ನಿ ಪರೀಕ್ಷೆ ,ಉಳುವ ಭೂಮಿಯನ್ನು ಬಿಟ್ಟು ಪಟ್ಟಣದ ಕಡೆ ವಲಸೆ ಹೋಗಲು ಪ್ರಮುಖ ಕಾರಣವೂ ಕೂಡಾ ಇದೇ ಇರಬಹುದಾ ? ಎಲ್ಲವೂ ಸದ್ಯಕ್ಕೆ ಪ್ರಶ್ನೆಯೇ?
ದಿನ ನಿತ್ಯದ ಬದುಕಿನಲ್ಲಿ ಒಂದಲ್ಲ ಒಂದು ಕಷ್ಟಗಳನ್ನು ಎದುರಿಸಲೇ ಬೇಕು ಆದರೆ ಮಳೆಯ ನಡುವೆ ಬದುಕು ಕೊಚ್ಚಿ ಹೋದರೆ ಮತ್ತೆ ರೂಪಿಸುವುದು ಹೇಗೆ ಅನ್ನುವುದು ಕಷ್ಟಸಾಧ್ಯವಾದ ಮಾತು.
ಸರ್ಕಾರದ ಸಾಂತ್ವನದ ಮಾತುಗಳು ರೈತರ ಕಣ್ಣೀರು ಒರೆಸಬಹುದೆ ಹೊರತು ಹಸಿದ ಹೊಟ್ಟೆಗೆ ಆಸರೆಯಾಗುತ್ತದಾ . ವಲಸೆ ಹೊರಟ ಈಗಿನ ಯುವ ಪೀಳಿಗೆಯನ್ನು ಕೃಷಿಯತ್ತ ಸೆಳೆಯುವುದು ಸಾಧ್ಯವಾ, ಹೀಗೆಯೇ ಆದರೆ ಮುಂದೆ ಒಂದು ದಿನ ಕೃಷಿ ಕಣ್ಮರೆಯಾಗುತ್ತದೆಯಾ ಎಲ್ಲವೂ ಯೋಚಿಸಬೇಕಾದ ವಿಷಯ. ಕೃಷಿ ರಂಗವನ್ನು ಹಾಗೂ ರೈತರನ್ನು ಪ್ರೋತ್ಸಾಹಿಸುವ ಕೆಲಸ ಸರ್ಕಾರ ಮಾಡಬೇಕಿದೆ. ಹವಾಮಾನಕ್ಕೆ ಹೊಂದಿಕೊಳ್ಳುವ ಕೃಷಿ ಮಾಡುವುದರ ಬಗ್ಗೆ ಸಪರ್ಪಕ ರೀತಿಯಲ್ಲಿ ರೈತರಿಗೆ ಮಾರ್ಗದರ್ಶನ ನೀಡುವುದು ಉತ್ತಮ..
✍️ಕಾರ್ತಿಕ್ ಕಾರ್ ಗದ್ದೆ
In the midst of the rain, the struggle of the farmer’s life in Malnad
Discussion about this post