ಚಿಕ್ಕಮಗಳೂರು: ನನ್ನನ್ನು ಆಯ್ಕೆ ಮಾಡಿದ ಕನ್ನಡದ ಮನಸುಗಳಿಗೆ ಚ್ಯುತಿ ಬಾರದಂತೆ, ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೊಣೆಗಾರಿಕೆ, ಅತ್ಯಂತ ಪ್ರಾಮಾಣಿಕತೆಯಿಂದ ಕನ್ನಡದ ಕೆಲಸವನ್ನು ನಿರಂತರವಾಗಿ ಮಾಡಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜೇತ ಸೂರಿ ಶ್ರೀನಿವಾಸ್ ಹೇಳಿದರು.
ಜಿಲ್ಲೆಯಲ್ಲಿ ಅತ್ಯಂತ ನ್ಯಾಯಯುತ, ಹಾಗೂ ಆರೋಗ್ಯಯುತವಾಗಿ ಚುನಾವಣೆ ನಡೆದಿದ್ದು. ಈ ಗೆಲುವು ಸಾಂಕೇತಿಕವಷ್ಟೆ ಇದು ಕನ್ನಡದ ಗೆಲವುದು, ನನ್ನನ್ನು ಆಯ್ಕೆ ಮಾಡಿದ ಎಲ್ಲರಿಗೂ ಅಭಾರಿ. ಆಯ್ಕೆ ಮಾಡಿದ ಕನ್ನಡದ ಮನಸುಗಳಿಗೆ ಯಾವುದೇ ಚ್ಯುತಿ ಬಾರದಂತೆ ಹೊಣೆಗಾರಿಕೆ, ಪ್ರಾಮಾಣಿಕತೆಯಿಂದ ಕ್ರಿಯಾಶೀಲನಾಗಿ ಕೆಲಸ ಮಾಡುವುದಾಗಿ ಪ್ರತಿಕಾಗೋಷ್ಟಿಯಲ್ಲಿ ತಿಳಿಸಿದರು.
ಕನ್ನಡದ ಕಾಯಕ ಮಾಡುವವರನ್ನು ಜಿಲ್ಲೆ ಮತ್ತೊಮ್ಮೆ ಸಾಕ್ಷಿಕರೀಸಿದೆ. ಕನ್ನಡ ಸಾಹಿತಿಗಳು, ಚಿಂತಕರ ಸೇರಿದಂತೆ ಎಲ್ಲರ ಸಲಹೆ, ಮಾರ್ಗದರ್ಶನ, ಅಭಿಪ್ರಾಯ ಪಡೆದು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು ಎಂದರು.
ತಾಲ್ಲೂಕು ಹೋಬಳಿ ಸಮಿತಿ ಜತೆಗೆ ಗ್ರಾಮಪಂಚಾಯಿತಿ ಮಟ್ಟದಲ್ಲಿ ಕನ್ನಡ ಕಾಯಕ ಸಮಿತಿ ರಚನೆಗೆ ಆಧ್ಯತೆ ನೀಡಲಾಗುವುದು. ಸಮರ್ಥ ಜಿಲ್ಲಾ ಕಾರ್ಯಕಾರಿ ಸಮಿತಿಗೆ ರಚನೆ ಮಾಡಲಾಗುವುದು, ವಿದ್ಯಾರ್ಥಿ ಘಟಕ, ಮಹಿಳಾ ಘಟಕ, ಕಾರ್ಮಿಕ ಘಟಕವನ್ನು ರಚಿಸುವ ಆಲೋಚನೆ ಇದೆ ಎಂದು ತಿಳಿಸಿದರು.
ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸಾಹಿತಿಗಳ ಸಹಕಾರ ಪಡೆದು ಕನ್ನಡ ಕಾರ್ಯ ನಿರ್ವಹಣೆಯಲ್ಲಿ ಸಮನ್ವತೆ ಸಾಧನೆಗೆ ಆದ್ಯತೆ ನೀಡಲಾಗುವುದು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವ ಸಮ್ಮತ ಪ್ರಯತ್ನ ಮಾಡಲಾಗುವುದು, ವ್ಯಕ್ತಿ ಪ್ರತಿಷ್ಟೆಗೆ ಅವಕಾಶ ನೀಡದೆ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು ಬದ್ದನಾಗಿದ್ದೇನೆ ಎಂದರು. ಈ ಸಂದರ್ಭದಲ್ಲಿ ಚಟ್ನಳ್ಳಿ ಮಹೇಶ್, ವೆಂಕಟೇಶ್, ಪ್ರಕಾಶ್, ಸುರೇಶ್, ನಂಜುಂಡಪ್ಪ, ಪವನ್, ಪ್ರಭು, ಜೇಮ್ಸ್ ಮತ್ತಿತರರು ಇದ್ದರು.
ಇದನ್ನೂ ಓದಿ:
Discussion about this post