ಚಿಕ್ಕಮಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಮುಕ್ತ ಮತದಾನ ನಡೆದಿಲ್ಲ.ಕೆಲವು ಉಲ್ಲಂಘನೆ ಪ್ರಕರಣಗಳ ವಿರುದ್ಧ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲಹೀಗಾಗಿ ಫಲಿತಾಂಶದ ವಿರುದ್ಧ ಕಾನೂನುಹೋರಾಟದ ಚಿಂತನೆ ಇದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಜಾತಂತ್ರ ವ್ಯವಸ್ಥೆ ವಿರುದ್ಧವಾಗಿ ಇಲ್ಲಿ ಚುನಾವಣೆ ನಡೆಸಿದ್ದಾರೆ.ಅಂತವರ ವಿರುದ್ಧ ಜಿಲ್ಲಾಕಾರಿಗೆ ದೂರು ನೀಡಿದ್ದರೂ ಪ್ರಯೋಜನ ಆಗಿಲ್ಲ.ತಾಲೂಕಿನ ಹುಯ್ಯಗೆರೆ ಬೂತ್ ಸಂಖ್ಯೆ ೭ ರಲ್ಲಿ ನಕಲಿ ಬ್ಯಾಲೆಟ್ ಪತ್ತೆಯಾಗಿದೆ.ಕಡೂರು ತಾಲೂಕು ಹುಳಿಗೆರೆ ಬೂತ್ನಲ್ಲಿ ನಕಲಿ ಬ್ಯಾಲೆಟ್ ಬಂದಿದೆ. ಆಡಳಿತ ಪಕ್ಷದವರು ಮತದಾರರನ್ನು ಕೂಡಿಡುವ ಕೆಲಸ ಮಾಡಿದ್ದಾರೆ. ಮುಕ್ತ ಮತದಾನಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ಕಾನೂನು ಹೋರಾಟಕ್ಕೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಎ.ವಿ.ಗಾಯತ್ರಿಶಾಂತೇಗೌಡ ಅವರು ಪ್ರತಿರ್ಸ್ಪಗೆ ಪೈಪೋಟಿ ನೀಡಿದ್ದಾರೆ. ಗ್ರಾಮಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಅಭ್ಯರ್ಥಿಗೆ ಮತ ನೀಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅದೇರೀತಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸಮಾಡಿದ್ದು ಸಿಪಿಐ, ಬಿಎಸ್ಪಿ, ಜೆಡಿಎಸ್ ಕೂಡ ಬೆಂಬಲಿಸಿವೆ ಅವರಿಗೂ ಅಭಿನಂದನೆ ಸಲ್ಲಿಸುವೆ ಎಂದರು.
ವಿಧಾನಪರಿಷತ್ತಿನಲ್ಲಿ ನಮ್ಮ ಅಭ್ಯರ್ಥಿಗೆ ಅತಿ ಹೆಚ್ಚು ಮತ ಬಂದಿರವುದು ಮುಂದಿನ ನಗರಸಭೆ ಚುನಾವಣೆಗೆ ಮತ್ತಷ್ಟು ಬಲ ಹೆಚ್ಚಿಸಿದೆ. ನಗರಸಭೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಭ್ರಷ್ಟ ವ್ಯವಸ್ಥೆ ಇತ್ತು.ಸಂಚಾರ ಅವ್ಯವಸ್ಥೆ, ಗುಂಡಿಮಯ ರಸ್ತೆ ಒಟ್ಟಾರೆ ನಗರದಲ್ಲಿ ಕಲುಷಿತ ವಾತಾವರಣ ಇದೆ. ಬಿಜೆಪಿ ಆಡಳಿತಕ್ಕೆ ಜನ ಬೇಸತ್ತಿದ್ದು ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಾನಂದಸ್ವಾಮಿ, ಹಿರೇಮಗಳೂರು ಪುಟ್ಟಸ್ವಾಮಿ ಗೋಷ್ಠಿಯಲ್ಲಿದ್ದರು.
Legal battle
Discussion about this post