ಚಿಕ್ಕಮಗಳೂರು: ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಭಾವನಾತ್ಮಕತೆ ಹಾಗೂ ಬದುಕಿನ ರಾಜಕಾರಣ ಎಂಬ ಸಿದ್ಧಾಂತಗಳ ನಡುವೆ ನಡೆಯಲಿದ್ದು ವೈಯಕ್ತಿಕ ನಿಂದನೆಗೆ ಅವಕಾಶ ಕೊಡದೆ ಸರ್ಕಾರದ ಸಾಧನೆ-ವೈಫಲ್ಯಗಳ ಮೂಲಕ ಚುನಾವಣೆ ಎದುರಿಸುವಂತಾಗಲಿ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಬಿ.ಎಲ್.ಶಂಕರ್ ಹೇಳಿದರು.
ಇದನ್ನೂ ಓದಿ: ‘Omykron’ vaccine: ’ ಓಮಿಕ್ರಾನ್’’ ಲಸಿಕೆ ನೀಡುವ ನೆಪದಲ್ಲಿ ವೈದ್ಯರ ಸೋಗಿನ ತಂಡ ಮನೆಯನ್ನೇ ದೋಚಿದ್ರು..!
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಿದ್ದ ಕೃಷಿ ಮಸೂದೆಗಳನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಯಾವುದೇ ಚರ್ಚೆಗೆ ಅವಕಾಶ ನೀಡದೆ ನಡಾವಳಿ, ಸಂಪ್ರದಾಯಕ್ಕೆ ವಿರುದ್ದವಾಗಿ ಸದ್ದುಗದ್ದಲದ ನಡುವೆಯೇ ಏಕಾಏಕಿಯಾಗಿ ವಾಪಸ್ ಪಡೆದಿದೆ. ಈ ರೀತಿಯ ಚರ್ಚೆಗೆ ಹಿಂಜರಿತ ತೋರಿರುವುದು ಸೋಲು ಒಪ್ಪಿಕೊಂಡಂತೆ, ದೇಶದ ಜನಶಕ್ತಿಯ ಎದುರು ಯಾವುದೇ ರಾಜಕೀಯ ಶಕ್ತಿಯಾದರೂ ತಲೆಬಾಗಲೇಬೇಕು ಎಂಬುದಕ್ಕೆ ಉತ್ತಮ ನಿದರ್ಶನ ಎಂದರು.
ಇದನ್ನೂ ಓದಿ: Radhe Shyam Teaser: ವಿಭಿನ್ನ ಸಂಗೀತದ ಹಿತವಾದ ಸವಾರಿ ಆಗಲಿದೆ ರಾಧೆ ಶ್ಯಾಮ್!
ದೆಹಲಿಯ ಗಡಿಯಲ್ಲಿ ಕಳೆದ ಒಂದು ವರ್ಷದಿಂದ ರೈತರು ಚಳುವಳಿ ಕೈಗೊಂಡರು ಸರ್ಕಾರ ಸ್ಪಂದಿಸಲಿಲ್ಲ ಸುಮಾರು ೭೦೦ ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣ ಕಳೆದುಕೊಂಡರು. ಆಕ್ರಮಣಕಾರಿ, ಭಾವನಾತ್ಮಕವಾಗಿ ದೇಶದ ಆಡಳಿತ ನಡೆಸುತಿದ್ದ ಪ್ರಧಾನಿಮಂತ್ರಿಗಳು ಇದೀಗ ರೈತ ಹೋರಾಟಕ್ಕೆ ಮಣಿದು ಕಾಯ್ದೆಗಳನ್ನು ವಾಪಸ್ ಪಡೆಯುವ ಮೂಲಕ ರಕ್ಷಣಾತ್ಮಕ ಆಡವಾಡಲು ಪ್ರಾರಂಭಿಸಿದ್ದಾರೆ ಇದು ಜನಪ್ರಿಯತೆಯ ಅಂತ್ಯದ ಆರಂಭ ಎಂದು ಟೀಕಿಸಿದರು.
ಇದನ್ನೂ ಓದಿ: Radhe Shyam Teaser: ವಿಭಿನ್ನ ಸಂಗೀತದ ಹಿತವಾದ ಸವಾರಿ ಆಗಲಿದೆ ರಾಧೆ ಶ್ಯಾಮ್!
ದೇಶದಲ್ಲಿ ಪ್ರತಿಪಕ್ಷಗಳು ಮಾಡಬೇಕಾದ ಕೆಲಸವನ್ನು ರೈತರು ಮಾಡಿದ್ದಾರೆ ಎಂದು ಸ್ಮರಿಸಿದ ಅವರು ಮುಂದಿನ ದಿನಗಳಲ್ಲಿ ರಾಜ್ಯ ಸೇರಿದಂತೆ ದೇಶಾದ್ಯಂತ ಬದಲಾವಣೆ ಗಾಳಿ ಬೀಸಲಿದೆ. ರೈತರ ಸದುದೇಶಕ್ಕಾಗಿ ಕಾಯ್ದೆ ಜಾರಿ ಮಾಡಿದ್ದ ಪ್ರಧಾನಿಗಳು ಕಾಯ್ದೆ ಹಿಂಪಡೆಯುವಾದ ಸ್ಪಷ್ಟನೆ ನೀಡದೆ ಅಧಿವೇಶನಕ್ಕೆ ಗೈರಾಗಿದ್ದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಇದನ್ನೂ ಓದಿ: Modi-Gowda Meet: ಹಾಸನಕ್ಕೆ ಐಐಟಿ ಬೇಕು – ಪ್ರಧಾನಿಗೆ ದೇವೇಗೌಡ ಡಿಮ್ಯಾಂಡ್
ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಬದುಕಿನ ರಾಜಕಾರಣ ಹಾಗೂ ಭಾವನಾತ್ಮಕ ರಾಜಕಾರಣ ಎಂಬ ಸಿದ್ಧಾಂತಗಳ ನಡುವೆ ನಡೆಯುತ್ತಿದ್ದು, ರಾಜಕೀಯ ನಾಯಕರು ವೈಯಕ್ತಿಕ ಟೀಕೆಗೆ ಅವಕಾಶ ನೀಡದೆ ಸರ್ಕಾರದ ಅವಧಿಯಲ್ಲಿ ತೋರಿದ ಸಾಧನೆ, ವೈಫಲ್ಯಗಳನ್ನು ಜನತೆಗೆ ಬಿತ್ತರಿಸುವ ಕೆಲಸವಾಗಲಿ. ಬಿಜೆಪಿ ತತ್ವ ಸಿದ್ದಾಂತ ವಿರೋಧಿಸುವವರ ಸಂಖ್ಯೆ ಹೆಚ್ಚಿದೆ ಆದರೆ ಬಿಜೆಪಿ ಗ್ರಾಮಪಂಚಾಯಿತಿ ಚುನಾವಣೆಗಳಲ್ಲಿ ಅತಿ ಹೆಚ್ಚು ಬೆಂಬಲಿ ಸದಸ್ಯರಿದ್ದಾರೆ ಎಂದು ಪ್ರಚಾರ ಮಾಡಿಕೊಳ್ಳುತ್ತಿದೆ ಇದು ವಾಸ್ತವಕ್ಕೆ ದೂರವಾದ ಮಾತು ಕಳೆದ ಬಾರಿ ಕಾಂಗ್ರೆಸ್ ೨೫ ರಲ್ಲಿ ೧೪ ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿತ್ತು. ಈ ಬಾರಿ ೨೦ ಸ್ಥಾನಗಳಲ್ಲಿ ೧೦ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಡಿಸೆಂಬರ್ ೩ ರಂದು ಮತದಾರರ ಸಮಾವೇಶಕ್ಕೆ ರಾಜ್ಯ ನಾಯಕರಾದ ಡಿ.ಕೆ.ಶಿವಕುಮಾರ್, ಹಾಗೂ ಸಿದ್ದರಾಮಯ್ಯ ಆಗಮಿಸಲಿದ್ದು ಪಕ್ಷದ ಸಂಘಟನೆ ಜತೆಗೆ ಒಗ್ಗಟ್ಟಿನ ಮೂಲಕ ಚುನಾವಣೆ ಎದುರಿಸಲಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ ಈ ಬಾರಿಯ ಪರಿಷತ್ ಚುನಾವಣೆಗೆ ಕಾಂಗ್ರೆಸ್ನಿಂದ ಒಮ್ಮತದ ಅಭ್ಯರ್ಥಿಯಾಗಿ ಗಾಯತ್ರಿ ಶಾಂತೇಗೌಡ ಅವರನ್ನು ಕಣಕ್ಕಿಳಿಸಿದ್ದು ಗೆಲುವು ನಿಶ್ಚಿತ. ಆ ನಿಟ್ಟಿನಲ್ಲಿ ಪಕ್ಷವನ್ನು ಬ್ಲಾಕ್ ಹಾಗೂ ಹೋಬಳಿ ಮಟ್ಟದಲ್ಲಿ ಮತದಾರರರನ್ನು ಭೇಟಿಯಾಗುವ ಮೂಲಕ ಸಂಘಟಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರಿನಲ್ಲಿ ಸಗೀರ್ ಅಹಮದ್ ನಾಯಕತ್ವದಲ್ಲಿ ಹಾಗೂ ಮೂಡಿಗೆರೆಯಲ್ಲಿ ಬಿ.ಎಲ್.ಶಂಕರ್, ಮೋಟಮ್ಮ, ಕಡೂರಿನಲ್ಲಿ ಕೆ.ಬಿ.ಮಲ್ಲಿಕಾರ್ಜುನ್, ಆನಂದ್, ಶೃಂಗೇರಿಯಲ್ಲಿ ರಾಜೇಗೌಡ, ಬಿ.ಎಂ ಸಂದೀಪ್, ತರೀಕೆರೆಯಲ್ಲಿ ಅಂಶುಮಂತ್, ಶಿವಾನಂದಸ್ವಾಮಿ, ಎಂ.ಎಲ್.ಮೂರ್ತಿ ನಾಯಕತ್ವದಲ್ಲಿ ಸಂಘಟನೆ ಮಾಡಲಾಗುತ್ತಿದೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಬೇರಿ ಬಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಗೀರ್ ಅಹಮದ್, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ವಕ್ತಾರರಾದ ಹಿರೇಮಗಳೂರು ಪುಟ್ಟಸ್ವಾಮಿ, ರೂಬೆನ್ ಮೊಸಸ್, ರವೀಶ್ ಕ್ಯಾತನಬೀಡು ಇದ್ದರು.
Legislative Council elections on ideologies
Discussion about this post