Life Lessons: ನಾವು ಜೀವನದಲ್ಲಿ ಯಶಸ್ವಿಯಾಗಬೇಕು, ಉದ್ದಾರವಾಗಬೇಕು ಅಂದ್ರೆ ಹೇಗಿರಬೇಕು ಎಂಬ ಬಗ್ಗೆ ಭಗವದ್ಗೀತೆಯಲ್ಲಿ ಹೇಳಲಾಗಿದೆ. ಹಾಗಾಗಿಯೇ ಯಾರು ಭಗವದ್ಗೀತೆಯನ್ನು ಓದುತ್ತಾರೋ, ಯಾರು ಅದರಲ್ಲಿರುವ ತತ್ವಗಳನ್ನು ಪಾಲಿಸುತ್ತಾರೋ, ಅವರು ಜೀವನದಲ್ಲಿ ಯಶಸ್ವಿಯಾಗೋದು ಖಂಡಿತ ಅಂತಾ ಹೇಳಲಾಗುತ್ತದೆ. ಹಾಗಾಗಿ ನಾವು ಯಾವ 5 ಸೂತ್ರಗಳನ್ನು ಪಾಲಿಸಿದರೆ, ಜೀವನದಲ್ಲಿ ಯಶವಸ್ವಿಯಾಗಬಹದು ಅಂತಾ ತಿಳಿಯೋಣ ಬನ್ನಿ.
ಇಂದ್ರೀಯಗಳನ್ನು ನಿಯಂತ್ರಿಸಿ: ನಾವು ಯಾವುದೇ ವಿಷಯದಲ್ಲಿ ಯಶಸ್ವಿಯಾಗಬೇಕು ಅಂದ್ರೆ, ನಾವು ನಮ್ಮ ಇಂದ್ರಿಯಗಳನ್ನು ನಿಯಂತ್ರಿಸಬೇಕು. ನಾಲಿಗೆ, ಚರ್ಮ, ಕಣ್ಣು, ಕಿವಿ, ನಾಲಿಗೆ ಇವುಗಳನ್ನು ನಿಯಂತ್ರಿಸಬೇಕು. ಇದಕ್ಕಾಗಿ ನಾವು ರುಚಿ ರುಚಿ ಆಹಾರವನ್ನೇ ಅವಲಂಬಿಸುವುದು, ಹೊಸ ಹೊಸ ಉಡುಪುಗಳನ್ನೇ ಧರಿಸಬೇಕು ಎನ್ನುವುದು, ಹೀಗೆ ಪಂಚೇಂದ್ರಿಯಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿಯಂತ್ರಣದಲ್ಲಿರಿಸಿದರೆ ನಾವು ಉದ್ಧಾರವಾಗಬಹುದು.
ಮಾತು ಮಿತವಾಗಿರಲಿ, ಮಾತಿನಲ್ಲಿ ಹಿತವಿರಲಿ. ವಾಚಾಳಿ ಗುಣವಿರುವವರು, ಸಿಡುಕಿನಿಂದ ಮಾತನಾಡುವವರು, ಇನ್ನೋಬ್ಬರ ಮನಸ್ಸಿಗೆ ನೋವಾಗುವ ಹಾಗೆ ಮಾತನಾಡುವವರು, ಇನ್ನೋಬ್ಬರ ಬಗ್ಗೆ ಸದಾ ನಕಾರಾತ್ಮಕವಾಗಿ ಮಾತನಾಡುವವರು, ಇಂಥವರು ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ. ಯಾಕಂದ್ರೆ ಇವರ ಈ ಗುಣಗಳೇ, ಇವರನ್ನು ಉದ್ಧಾರವಾಗುವುದರಿಂದ ದೂರವಿಡುತ್ತದೆ. ಹಾಗಾಗಿಯೇ ಮಾತಿನಲ್ಲಿ, ನಡುವಳಿಕೆಯಲ್ಲಿ ಮಾಧುರ್ಯವಿರಬೇಕು, ಮಾತು ಮಿತವಾಗಿ, ಹಿತವಾಗಿ ಇರಬೇಕು ಅಂತಾ ಹೇಳೋದು.
ಧರ್ಮವನ್ನು ಪಾಲಿಸಿ: ನಾವು ನಮ್ಮ ಧರ್ಮವನ್ನು ಪಾಲಿಸಬೇಕು. ಯಾರು ಧರ್ಮ ಪಾಲನೆ ಮಾಡುತ್ತಾರೋ, ಅಂಥವರು ಜೀವನದಲ್ಲಿ ಸದಾ ಗೆಲ್ಲುತ್ತಾರೆ. ಯಾಕಂದ್ರೆ ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಹಾಗಾಗಿಯೇ ಧರ್ಮೋ ರಕ್ಷತಿ ರಕ್ಷಿತಃ ಅಂತಾ ಹೇಳುವುದು.
ಅಹಂಕಾರವನ್ನು ದೂರವಿರಿಸಿ: ಮನುಷ್ಯ ಎಷ್’’ೇ ಯಶಸ್ವಿಯಾಾದರೂ ಅವನು ಅಹಂಕಾಾರದಿಂದ ಮೆರೆಯುತ್ತಿದ್ದರೆ, ಅವನ ಯಶಸ್ಸು ನೆಲಕ್ಕುದುರಿ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಹಂಕಾರದಿಂದ ಮೆರೆಯುುತ್ತಿದ್ದ ಸೆಲೆಬ್ರಿ’’ಿಗಳು, ರಾಜಕಾರಣಿಗಳ ಸ“ಕ್ಕು ಮುರಿದಿರುವುದೇ ಇದಕ್ಕೆ ಸಾಕ್ಷಿ. ಹಾಗಾಗಿ ಅಹಂಕಾರವಿದ್ದರೆ, ಜೀವನದಲ್ಲೆಂದೂ ಉದ್ಧಾರವಾಗಲು ಸಾಧ್ಯವಿಲ್ಲ.
ಇನ್ನು ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರ ಇವನ್ನೆಲ್ಲ ತ್ಯಜಿಸಿದಾಗ ಮಾತ್ರ, ಮನುಷ್ಯ ಜೀವನದಲ್ಲಿ ಉದ್ಧಾರವಾಗಲು ಸಾಧ್ಯ.
Dhaka News: ಮರಣದಂಡನೆಗೆ ಗುರಿಯಾಗಿದ್ದ ಉಗ್ರನಿಗೆ ಬಾಂಗ್ಲಾ ಸುಪ್ರೀಂನಿಂದ ಖುಲಾಸೆ
Discussion about this post