ಬೆಂಗಳೂರು: ಡೀಸೆಲ್ ಬೆಲೆ ಮೇಲಿನ ಕಡಿಮೆ ಮಾಡದಿದ್ದರೆ ಅಕ್ಟೋಬರ್ 24ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ನಡೆಸುವುದಾಗಿ ಲಾರಿ ಮಾಲೀಕರ ಸಂಘಗಳ ಒಕ್ಕೂಟ ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಡೀಸೆಲೆ ಬೆಲೆ ಏರಿಕೆಯು ಲಾರಿ ಮಾಲೀಕರು ಮತ್ತು ಕಾರ್ಮಿಕರ ಬದುಕಿನ ಮೇಲೆ ಪರಿಣಾಮ ಬೀರಿದೆ. ಡೀಸೆಲ್ ಬೆಲೆ ನಿಯಂತ್ರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಜರುಗಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಂದು ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ ಎಚ್ಚರಿಸಿದ್ದಾರೆ.
ಡೀಸೆಲ್ ಮೇಲೆ ರಾಜ್ಯ ಸರ್ಕಾರ ಹೇರಿರುವ ಮೌಲ್ಯವರ್ಧಿತ ತೆರಿಗೆ (Value Added Tax – VAT) ಕಡಿಮೆ ಮಾಡಬೇಕು. ಇಲ್ಲದಿದ್ದರೆ ಮುಷ್ಕರ ಅನಿವಾರ್ಯವಾಗುತ್ತದೆ. ಲಾರಿಗಳ ಜೊತೆಗ ಇತರ ಸರಕು ಸಾಗಣೆ ವಾಹನಗಳ ಮಾಲೀಕರು ಮುಷ್ಕರಕ್ಕೆ ಕೈಜೋಡಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಸರಕು ಸಾಗಣೆ ಸ್ಥಗಿತಗೊಂಡರೆ ಜನಜೀವನ ಮತ್ತು ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಆರ್ಥಿಕತೆಯೇ ಕುಸಿಯುತ್ತದೆ. ನಂತರದ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿ ಎಂದು ಮತ್ತೋರ್ವ ಲಾರಿ ಮಾಲೀಕರು ತಿಳಿಸಿದ್ದಾರೆ.
ಹಾನಗಲ್ ಉಪ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆಯಷ್ಟೇ (ಅ.17) ಡೀಸೆಲ್ ಬೆಲೆ ಇಳಿಸುವ ಕುರಿತು ಸುಳಿವು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಈ ಕುರಿತು ಸರ್ಕಾರ ಈವರೆಗೂ ತನ್ನ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.
Lorry Owners of Karnataka Threatnes Strike Demands Diesel Rate Cut
ಇದನ್ನೂ ಓದಿ: ಟಾಟಾ ಪಂಚ್ ಎಸ್ಯುವಿ ಇಂದು ಮಾರುಕಟ್ಟೆಗೆ: ಬೆಲೆ ಎಷ್ಟು?
ಇದನ್ನೂ ಓದಿ: Save Electricity: ವಿದ್ಯುತ್ ಉಳಿತಾಯಕ್ಕೆ, ಯುಪಿಎಸ್ ದೀರ್ಘ ಬಾಳಿಕೆಗೆ ಹೀಗೆ ಮಾಡಿ
Discussion about this post