ಚಿಕ್ಕಮಗಳೂರು : ಚುನಾಯಿತ ಪ್ರತಿನಿಧಿಗಳಿಲ್ಲದೆ, ಜತೆಗೆ ನಗರದಲ್ಲಿ ಸಕಾಲಕ್ಕೆ ಅಭಿವೃದ್ಧಿ ಕಾರ್ಯಗಳಾಗದೆ ಆಡಳಿತ ಯಂತ್ರ ಕುಸಿದಿದೆ ಎಂಬ ಅಪಖ್ಯಾತಿಗೆ ಒಳಗಾಗಿದ್ದ ಚಿಕ್ಕಮಗಳೂರು ನಗರಸಭೆಗೆ ಅಂತು ಕೊನೆಗೂ ಚುನಾವಣಾ ದಿನಾಂಕ ನಿಗಧಿಯಾಗಿದೆ.
ನಗರದ ೩೫ ವಾರ್ಡ್ಗಳಿಗೆ ಚುನಾವಣೆಗೆ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದು ಅಧಿಕೃತ ಅಧಿಸೂಚನೆ ಬಳಿಕ ಡಿ.೧೫ ರಿಂದ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಇನ್ನು ಉಮೇದುವಾರಿಕೆಗಳನ್ನು ಹಿಂಪಡೆಯಲು ಡಿ.೧೮ ಕೊನೆಯ ದಿನವಾಗಿದ್ದು, ಡಿ.೨೭ ರಂದು ಮತದಾನ ನಡೆಯಲಿದೆ.
ವಾರ್ಡ್ ಮೀಸಲಾತಿ ಪಟ್ಟಿ ಸಂಬAಧಿಸಿದAತೆ ಆಕ್ಷೇಪಣೆ ಸಲ್ಲಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಹಿನ್ನಲೆ ನಗರಸಭೆ ಚುನಾವಣೆಯನ್ನು ತಾತ್ಕಲಿಕವಾಗಿ ಮುಂದೂಡಲಾಗಿತ್ತು. ಆ ವೇಳೆ ಆಡಳಿತ ಪಕ್ಷದ ಮುಖಂಡರು ನಗರಸಭೆಯನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ಅಧಿಕಾರ ನಡೆಸುತ್ತಿದ್ದಾರೆ, ನಗರದಲ್ಲಿ ಅಭಿವೃದ್ಧಿ ಕಾರ್ಯಗಳಾಗದೇ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂಬ ಗಂಭೀರ ಆರೋಪಗಳು ಪ್ರತಿಪಕ್ಷಗಳಿಂದ ಕೇಳಿಬಂದಿದ್ದವು.
ಇದೀಗ ಸುಮಾರು ೨ವರ್ಷಗಳ ಕಾಲದ ಮುಂದೂಡಿದ್ದ ನಗರಸಭೆ ಚುನಾವಣೆಗೆ ಅಂತೂ ಕೊನೆಗೂ ದಿನಾಂಕ ನಿಗಧಿಯಾಗಿದ್ದು ಚುನಾವಣೆಗೆ ಸ್ಪರ್ಧಿಸಲು ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ಜತೆಗೆ ಪಕ್ಷೇತರರು ಸಿದ್ದತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ತಮ್ಮ ವಾರ್ಡ್ಗಳ ಮತದಾರರನ್ನು ಸೆಳೆಯಲು ದೊಡ್ಡ ಕಸರತ್ತು ಆರಂಭಿಸಿದ್ದಾರೆ.
ಮತ್ತೊAದೆಡೆ ಡಿಸೆಂಬರ್ ೧೦ ರಂದು ವಿಧಾನ ಪರಿಷತ್ ಚುನಾವಣೆ ಕೂಡ ನಡೆಯಲಿದ್ದು ವಿವಿಧ ಪಕ್ಷಗಳ ಸ್ಪರ್ಧಿಗಳು ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಆಡಳಿತ ಪಕ್ಷ ಬಿಜೆಪಿ, ಹಾಗೂ ಕಾಂಗ್ರೆಸ್ಗೆ ಇದು ಪ್ರತಿಷ್ಟೆಯ ಕದನವಾಗಿ ಮಾರ್ಪಾಡಲಾಗಲಿದೆ.

























Discussion about this post