ಚಿಕ್ಕಮಗಳೂರು: ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆಯ ನಾಯಕತ್ವ ಹೊತ್ತಿದ್ದ ಪ್ರಮುಖರಲ್ಲಿ ಒಬ್ಬರಾಗಿದ್ದ ಹೊಸಗದ್ದೆ ಪ್ರಭಾ ತಮಿಳುನಾಡಿನ ವೆಲ್ಲೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾಳೆ. ಸುಮಾರು 2000 ರಿಂದ ಮಲೆನಾಡಿನ ನಕ್ಸಲ್ ಚಟುವಟಿಕೆಯ ರೂವಾರಿಯಾಗಿದ್ದ ಪ್ರಭಾ ,ಸಂಧ್ಯಾ ನೇತ್ರ ,ಮಧು ಹೀಗೆ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿದ್ದಳು.
1998 ರಲ್ಲಿ ಪಿಯುಸಿ ಓದುತ್ತಿದ್ದ ದಿನಗಳಲ್ಲಿ ಶಿವಮೊಗ್ಗದಲ್ಲಿ ಮಹಿಳಾ ಜಾಗೃತಿ ಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಈಕೆ ನಂತರ, ಶೃಂಗೇರಿಗೆ ಬಂದು ಪೂರ್ಣಾವಧಿ ಕಾರ್ಯಕರ್ತಳಾಗಿ ಅನೇಕ ಜನಪರ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದಳು ಬಳಿಕ ನಕ್ಸಲ್ ಚಟುವಟಿಕೆಗೆ ಆಕರ್ಷಿತಳಾಗಿ ಕಾಡಿಗೆ ಸೇರಿದ್ದ ಇವಳು ಹೊರಗೆ ಬರಲೇ ಇಲ್ಲ.
ಮಲೆನಾಡಿನ ಜಿಲ್ಲೆಗಳಲ್ಲಿ ಯಾವುದೇ ನಕ್ಸಲ್ ಚಟುವಟಿಕೆ ಕಾಣಿಸಿದರೂ ಈಕೆಯ ಹೆಸರು ಮೊದಲು ಕೇಳಿ ಬರುತ್ತಿತ್ತಲ್ಲದೆ ಈಕೆಯ ವಿರುದ್ಧ ಪ್ರಕರಣಗಳು ದಾಖಲಾಗುತ್ತಿದ್ದವು. ಈಕೆಯನ್ನು ಸುಳಿವು ಕೊಟ್ಟವರಿಗೆ 5ಲಕ್ಷ ರೂ ಬಹುಮಾನ ಕೊಡುವುದಾಗಿ ಸರ್ಕಾರ ಪ್ರಕಟಿಸಿತ್ತು. ಈ ಮಧ್ಯೆ 2010 ರಲ್ಲಿ ಹೊಸಗದ್ದೆ ಪ್ರಭಾ ಅನಾರೋಗ್ಯದಿಂದ ಮೃತಪಟ್ಟಿರುವುದಾಗಿಯೂ ಆಕೆಯ ಅಂತ್ಯಸಂಸ್ಕಾರ ನಡೆದಿದೆ ಎಂದು ಹೇಳಲಾಗುತ್ತಿದ್ದು ಪೊಲೀಸರೂ ಇದನ್ನು ದೃಢಪಡಿಸಿದ್ದರು.
ಆದರೆ ಇದನ್ನು ನಕ್ಸಲ್ ಮುಖಂಡರು ದೃಢಪಡಿಸಿರಲಿಲ್ಲ .ಮಲೆನಾಡಿನ ನಕ್ಸಲ್ ಪಡೆಯಲಿ ಪ್ರಮುಖ ಹುದ್ದೆಯಲ್ಲಿದ್ದ ಈಕೆ ಚಿಕ್ಕಮಗಳೂರು ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಟುವಟಿಕೆ ಕ್ಷೀಣಿಸುತ್ತಿದ್ದಂತೆ ತನ್ನ ಕಾರ್ಯಕ್ಷೇತ್ರವನ್ನು ತಮಿಳುನಾಡಿಗೆ ವಿಸ್ತರಿಸಿ ಕೊಂಡಿದ್ದಳು ಎಂದು ಹೇಳಲಾಗುತ್ತಿದೆ ಪ್ರಭಾ ಶರಣಾಗತಿಗೆ ಒಲವು ತೋರಿದ್ದು ಇತ್ತೀಚೆಗೆ ವಕೀಲರೊಬ್ಬರಲ್ಲಿ ತನ್ನ ಆಶಯವನ್ನು ಹೇಳಿಕೊಂಡಿದ್ದಳು ಎನ್ನಲಾಗಿದೆ.
ಇಂದು ತಮಿಳುನಾಡಿನ ವೆಲ್ಲೂರು ಪೊಲೀಸ್ ಮುಂದೆ ಈಕೆ ಶರಣಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೆ ಕೇರಳ ಪೊಲೀಸರು ನಕ್ಸಲ್ ಅಗ್ರನಾಯಕ ಬಿ.ಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿಯನ್ನು ಬಂಧಿಸಿದ್ದರು ಪ್ರಭಾ ಶರಣಾಗತಿ ಮೂಲಕ ಮಲೆನಾಡಿನ ಪ್ರಮುಖ ನಕ್ಸಲ್ ಕೊಂಡಿಯೊಂದು ಕಳಚಿದಂತಾಗಿದೆ .ಈಕೆಯ ಮೇಲೆ 45 ಕ್ಕೂ ಅಧಿಕ ಪ್ರಕರಣಗಳು ಇವೆ
Naxal leader Hosaveta Prabha surrenders
Discussion about this post