ಚಿಕ್ಕಮಗಳೂರು: ಮಲೆನಾಡು ಇತ್ತೀಚೆಗೆ ತನ್ನ ಸ್ತಬ್ಧತೆ ಮತ್ತು ನೀರವತೆಯನ್ನು ಕಳೆದುಕೊಳ್ಳುತ್ತಿದೆ. ಮಲೆನಾಡಿನ ದಟ್ಟ ಕಾಡುಗಳಲ್ಲೂ ವಿವಿಧರೀತಿ ಮನರಂಜನಾ ಚಟುವಟಿಕೆಗಳು ಆರಂಭವಾಗಿ ವನ್ಯಪ್ರಾಣಿಗಳ ನಿರಾತಂಕ ಬದುಕಿಗೆ ಅಡಚಣೆ ಉಂಟಾಗುತ್ತಿದೆ ಎಂದು ಪರಿಸರ ಸಂಘಟನೆಗಳು ಆರೋಪಿಸಿದೆ.
ಭದ್ರಾ ವೈಲ್ಡ್ಲೈಫ್ಕನ್ಸರ್ವೇಷನ್ಟ್ರಸ್ಟ್ ಮುಖ್ಯಸ್ಥರು, ಡಿ.ವಿ.ಗಿರೀಶ್, ವೈಲ್ಡ್ ಕ್ಯಾಟ್-ಸಿ. ಮುಖ್ಯಸ್ಥ, ಶ್ರೀದೇವ್ ಹುಲಿಕೆರೆ, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ್ ಈ ಬಗ್ಗೆ ಹೇಳಿಕೆ ನೀಡಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳ ಕೆಲವು ಆಸಕ್ತ ಯುವಕರ ಗುಂಪುಗಳು ಕಾಡಿನಲ್ಲಿ ಮೆರಾಥಾನ್ ಸ್ಪರ್ಧೆಏರ್ಪಡಿಸುವುದು, ಅಲ್ಲಿರುವಗುಡ್ಡ ಹಾಗೂ ಸರ್ಪ ಸುತ್ತಿನ ಕಠಿಣ ಹಾದಿಗಳನ್ನು ಬಳಸಿಕೊಂಡು ವಾಹನ ಓಡಿಸುವ ಆಫ್ರೋಡ್ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಯುವಕರನ್ನು ಸೆಳೆಯಲು ಮುಂದಾಗುತ್ತಿವೆ ಎಂದಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಶಿಶಿಲ-ಭೈರಾಪುರ ಸುತ್ತಲ ಏರುತಿಟ್ಟಿನಕಾಡು ಹಾದಿಗಳಲ್ಲಿ ಬೆಂಗಳೂರಿನ ಸಂಸ್ಥೆಯೊಂದು ಶನಿವಾರ ಮಲೆನಾಡು ಅಲ್ಟ್ರಾ ಮೆರಾಥಾನ್ ಎಂದು ಹೆಸರಿಸಿ ೩೦೦ ರಿಂದ ೫೦೦ ಮಂದಿಗೆ ಓಟದ ಸ್ಪರ್ಧೆಯನ್ನು ಏರ್ಪಡಿಸಿತ್ತು. ಆದರೆ ಪರಿಸರಾಸಕ್ತರ ಹಾಗೂ ಸ್ಥಳೀಯರ ವಿರೋಧದಿಂದ ಅರಣ್ಯ ಇಲಾಖೆಗೆ ಸೇರಿದ ಪ್ರದೇಶಗಳಲ್ಲಿ ಈ ಸ್ಪರ್ಧೆ ನಡೆಸದಿರಲುಒತ್ತಡ ಬಂದ ಹಿನ್ನೆಲೆಯಲ್ಲಿಅರಣ್ಯ ಇಲಾಖೆ ಅಧಿಕಾರಿಗಳು ಶಿಶಿಲ ಗುಡ್ಡ ಸೇರಿದಂತೆ ಬಾಳೂರು ಅರಣ್ಯ, ಎತ್ತಿನ ಭುಜ ಸುತ್ತಲಲ್ಲಿ ತಮ್ಮ ಇಲಾಖೆಗೆ ಸೇರಿದಅರಣ್ಯ ಪ್ರದೇಶದಲ್ಲಿಅನುಮತಿ ನೀಡಲಿಲ್ಲ ಎಂದು ಹೇಳಿದ್ದಾರೆ.
ಅನುಮತಿ ನಿರಾಕರಿಸಿದಾಕ್ಷಣ ಪ್ರಾಯೋಜಕರು ಅರಣ್ಯಕ್ಕೆ ಸೇರಿದ ಪ್ರದೇಶ ಹೊರತುಪಡಿಸಿ ಉಳಿದ ಕಾನನದೊಳಗೆ ಸ್ಪರ್ಧೆಗಳನ್ನು ನಡೆಸಿದರು. ಈ ಸ್ಪರ್ಧೆಗೆ ಕೆಲವು ಪಂಚಾಯ್ತಿಗಳು ಅನುಮತಿ ನೀಡಿದ್ದು, ಅನುಮತಿ ನೀಡುವಾಗ ವನ್ಯಪ್ರಾಣಿಗಳಿಗೆ ಅರಣ್ಯ ಮತ್ತುಕಂದಾಯ ಇಲಾಖೆಗೆ ಸೇರಿದ ಭೂಮಿಯಾವುದೆಂದು ವಿಂಗಡಿಸಲುಬರುವುದಿಲ್ಲ ಎಂಬ ಕನಿಷ್ಠ ತಿಳುವಳಿಕೆಯ ಬಗ್ಗೆ ಜಾಣಮರೆವನ್ನು ಅನುಸರಿಸಿತು ಎಂದು ತಿಳಿಸಿದ್ದಾರೆ.
ಒಮ್ಮೆಗೆ ನೂರಾರು ಮಂದಿ ೧೪ ಗಂಟೆಗಳ ಕಾಲ ವನ್ಯಪ್ರಾಣಿಗಳು ಓಡಾಡುವ ಕಾಡಿನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಈ ರೀತಿಒಮ್ಮೆಗೆ ಕಾಡಿನೊಳಗೆ ತಿರುಗಾಡಿದರೆಅದರ ಪರಿಣಾಮ ವನ್ಯ ಜೀವಿಗಳ ಮೇಲೆ ಯಾವರೀತಿ ಆಗಬಹುದುಎಂಬುದನ್ನು ಪ್ರಾಯೋಜಕರು ಆಲೋಚಿಸದೆ ಸ್ಪರ್ಧೆ ನಡೆಸುವ ಆತುರದಲ್ಲೇ ಇದ್ದರು ಎಂದು ಹೇಳಿದ್ದಾರೆ.
ತಮ್ಮ ಸ್ಪರ್ಧೆಯ ವಿವರಣಾ ಪತ್ರದಲ್ಲಿ ಪ್ರಾಯೋಜಕರು ಇದು ಲಾಭರಹಿತವಾದ ಸ್ಪರ್ಧೆಎಂದು ಹೇಳಿದ್ದರೂ ೫೦ ಕಿ.ಮೀ. ಓಟಕ್ಕೆ ಪ್ರತಿ ವ್ಯಕ್ತಿಗೆ ೩ ಸಾವಿರರೂ. ಹಾಗೂ ೮೦ ಕಿ.ಮೀ. ಓಟಕ್ಕೆ ೩,೫೦೦ ರೂ. ನೀಡಬೇಕೆಂದು ನಿಗದಿ ಮಾಡಿದ್ದು ಈ ಸ್ಪರ್ಧೆ ಆದಾಯ ಗಳಿಕೆಯ ಒಂದು ಮಾರ್ಗ ಎನ್ನುವುದನ್ನು ಖಚಿತಪಡಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಸ್ಪರ್ಧೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದು ಅವರುಗಳು ತಮ್ಮದೈಹಿಕ ಬಾಧೆಯನ್ನು ತೀರಿಸಿಕೊಳ್ಳಲು ಸ್ವತಃಯೋಚಿಸಬೇಕೆಂದು ಹೇಳಲಾಗಿದ್ದು, ಅದಕ್ಕೆ ಪೂರಕವಾಗಿ ಸ್ಪರ್ಧೆ ನಡೆಯುವ ಪ್ರದೇಶದಲ್ಲಿ ಬೇಕಾದಷ್ಟು ಜಲಮೂಲಗಳಿವೆ ಎಂಬ ಸೂಚನೆಯನ್ನು ವಿವರಣಾ ಪತ್ರದಲ್ಲಿ ನೀಡಲಾಗಿದೆ. ಇದು ಪ್ರಾಯೋಜಕರಿಗೆ ಕಾಡುಗಳ ಸೂಕ್ಷ್ಮತೆ ಹಾಗೂ ಮಹತ್ವದ ಬಗ್ಗೆ ಇರುವಉಪೇಕ್ಷೆಯನ್ನುತೋರಿಸುತ್ತದೆ ಎಂದಿದ್ದಾರೆ.
ಜಿಲ್ಲಾಡಳಿತ ಇನ್ನು ಮುಂದೆಗ್ರಾಮ ಪಂಚಾಯ್ತಿಗಳಿಗೂ ಸೂಚನೆ ನೀಡಿ ವನ್ಯಪ್ರಾಣಿಗಳ ಬಾಹುಳ್ಯವಿರುವ ಈ ಪ್ರದೇಶಗಳಲ್ಲಿ ಗೌಜು-ಗದ್ದಲ ಉಂಟು ಮಾಡುವ ಈ ರೀತಿಯ ಸ್ಪರ್ಧಾ ಚಟುವಟಿಕೆಗಳಿಗೆ ಆಸ್ಪದ ನೀಡಬಾರದೆಂದು ಒತ್ತಾಯಿಸುತ್ತೇವೆ ಎಂದಿದ್ದಾರೆ..
Non-forest activity hampers the carefree life of wild animals

























Discussion about this post