ಚಿಕ್ಕಮಗಳೂರು: ನಿನ್ನೆ ರಾತ್ರಿ ಸುರಿದ ಭಾರೀ ವರ್ಷಧಾರೆಯಿಂದಾಗಿ ನಗರದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಅನಾಹುತಗಳಾಗಿವೆ.
ನಗರಸಭೆ ಪೌರಾಯುಕ್ತ ಬಸವರಾಜ್ ನೇತೃತ್ವದ ಸಿಬ್ಬಂದಿಗಳ ತಂಡ ನಗರದ ಹಲವು ವಾರ್ಡ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಮೇಶ್ವರ ನಗರದ ಬಡಾವಣೆಯ ಹಳ್ಳದ ರಾಮೇಶ್ವರ ದೇವಾಲಯ ಸಮೀಪದ ಸೇತುವೆ ಮೇಲೆ ರಾತ್ರಿ ೨ ಅಡಿಗೂ ಅಧಿಕ ನೀರು ಹರಿದು ದೇವಾಲಯದೊಳಗೆ ನೀರು ನುಗ್ಗಿದೆ. ಖಾಸಗಿ ಬಡಾವಣೆಯೊಂದಕ್ಕೆ ತಾತ್ಕಲಿಕವಾಗಿ ಅಕ್ರಮವಾಗಿ ನಿರ್ಮಿಸಿದ್ದ ಸೇತುವೆಯಿಂದಾಗಿ ರಸ್ತೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದ ಕಾರಣ ದೇವಾಲಯ ಹಾಗೂ ಮನೆಗಳಿಗೆ ನೀರು ನುಗ್ಗಿ ಈ ಅನಾಹುತ ಸಂಭವಿಸಿದೆ. ಈ ಸಂಬಂಧ ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನಲೆ ನಗರಸಭೆ ಕೂಡಲೇ ಕಾರ್ಯಪ್ರವೃತ್ತರಾಗಿ ತೆರೆವು ಮಾಡುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.
ಮಧುವನ ಲೇಔಟ್ ಮುಕ್ತ ವಿವಿ ಬಡಾವಣೆಯ ಕಟ್ಟಡಕ್ಕೆ ತೆರಳುವ ರಸ್ತೆ ಸೇತುವೆ ಕೆಲ ದಿನಗಳ ಹಿಂದೆ ಕೊಚ್ಚಿ ಹೋಗಿತ್ತು, ತಾತ್ಕಲಿಕವಾಗಿ ನಗರಸಭೆ ಸೇತುವೆ ನಿರ್ಮಿಸಿತ್ತು. ಆದೂ ಕೂಡ ಮಳೆಗೆ ಕೊಚ್ಚಿ ಹೋಗಿದೆ. ನಗರದಲ್ಲಿ ಹೆಚ್ಚು ಮಳೆಯ ಕಾರಣ ಯುಜಿಡಿ ಮ್ಯಾನ್ ಹೋಲ್ಗಳು ತುಂಬಿ ಉಕ್ಕಿ ಹರಿದಿವೆ. ಟಿಪ್ಪು ನಗರ, ಉಪ್ಪಳ್ಳಿ, ಶಂಕರಪುರ ಸೇರಿದಂತೆ ಹಲವೆಡೆ ಮನೆಗೆ ನೀರು ನುಗ್ಗಿದೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಗರಸಭೆ ಪ್ರತಿ ವಾರ್ಡ್ಗಳಿಗೆ ತಂಡವೊಂದನ್ನು ರಚಿಸಿದ್ದು ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ನಗರದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ಮಳೆ ಹೆಚ್ಚಾದ ಕಾರಣ ಹಲವು ಸಮಸ್ಯೆಗಳು ಉಂಟಾಗಿವೆ, ಯಾವುದೇ ವಾರ್ಡ್ಗಳಲ್ಲಿ ಸಮಸ್ಯೆಗಳು ಕಂಡು ಬಂದಲ್ಲಿ ಕೂಡಲೇ ನಗರಸಭೆ ದೂರವಾಣಿಗೆ ಮಾಹಿತಿ ನೀಡುವಂತೆ ವಿನಂತಿಸಿಕೊಂಡರು.
ಇದನ್ನೂ ಓದಿ:
DC-CEO meeting: ಮಳೆ ಹಾನಿ ಪರಿಶೀಲನೆಗಾಗಿ ಮುಖ್ಯಮಂತ್ರಿಗಳಿಂದ ಡಿಸಿ-ಸಿಇಒ ಸಭೆ
Rain storm: ಕರ್ನಾಟಕದಲ್ಲಿ ನವೆಂಬರ್ 23ರ ಬಳಿಕ ತಗ್ಗಲಿದೆ ಮಳೆ ಆರ್ಭಟ
Discussion about this post