ರಜನಿಕಾಂತ್ ಅವರ ಬಹುನಿರೀಕ್ಷಿತ ಅನ್ನಾಥೆ ಚಿತ್ರ ತೆರೆಗೆ ಬರುತ್ತಿದೆ. ಬುಧವಾರ ಚಿತ್ರದ ಟ್ರೇಲರ್ ಬಿಡುಗಡೆಗೊಂಡು ರಜನಿಕಾಂತರ ಆಕ್ಷನ್-ಮ್ಯಾನರಿಸಂ ಅಭಿಮಾನಿಗಳಲ್ಲಿ ರೋಮಾಂಚನ ಉಂಟು ಮಾಡಿದೆ. ಟ್ರೇಲರ್ ಬಿಡುಗಡೆ ಗೊಂಡ ಕೆಲವೇ ಗಂಟೆಗಳಲ್ಲಿ ರಜನಿಕಾಂತ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ಅನ್ನಾಥೆ ಅಂದರೆ ದೊಡ್ಡಣ್ಣ ಅನ್ನುವ ಅರ್ಥವಿದೆ. ಹೀಗಾಗಿ, ಇದೊಂದು ಫ್ಯಾಮಿಲಿ ಸೆಂಟಿಮೆಂಟ್ ಚಿತ್ರ ಅಂತ ಊಹಿಸಬಹುದು. ಚಿತ್ರದ ನಾಯಕ ಕುಟುಂಬದ, ಸಹೋದರರ ರಕ್ಷಣೆ ನಿಲ್ಲುವ ಸಿನಿಮಾಗಳು 1980-90ರಲ್ಲಿ ಬಹಳಷ್ಟು ಬಂದಿವೆ. ಅಂಥದೇ ನೆರಳಿರುವ ಸಿನಿಮಾ ಅನ್ನಾಥೆ. ಆದರೆ, ರಜನಿ ಕಾಂತರ ಭಿನ್ನಾವಿಭಿನ್ನ ಮ್ಯಾನರಿಸಂಗಳ, ಫೈಟ್ ಗಳು ಚಿತ್ರಕ್ಕೆ ಸೇರಿರುವುದರಿಂದ ಅದರ ಖದರೇ ಬೇರೆಯಾಗಿ ಕಾಣುತ್ತಿದೆ.
ಚಿತ್ರದ ನಾಯಕ ಕಾಲಯನ್ (ರಜನಿಕಾಂತ್) ಇಡೀ ಕುಟುಂಬವನ್ನು ಪ್ರೀತಿಸುತ್ತಾನೆ. ಹಳ್ಳಿಗರು ಅವನನ್ನು ಪ್ರೀತಿಸುತ್ತಾರೆ. ಅಣ್ಣ ಸಹೋದರಿ (ಕೀರ್ತಿ ಸುರೇಶ್) ಸಂತೋಷಕ್ಕೆ ಏನು ಬೇಕಾದರು ಮಾಡಲು ಸಿದ್ಧ. ಆದರೆ,ಸಹೋದರಿ ಮದುವೆ ನಂತರ ಮನೆಬಿಟ್ಟು ಹೋದ ಮೇಲೆ, ಕಾಲಯನ್ ಕುಟುಂಬದವರ ಜೊತೆ ಸಾಮಾನ್ಯ ಜೀವನ ನಡೆಸುತ್ತಿರುತ್ತಾನೆ. ಒಂದು ದಿನ ವಿಲನ್ (ಜಗಪತಿ ಬಾಬು) ಎಂಟ್ರಿ ಆಗುತ್ತದೆ. ಆಮೇಲೆ ಏನಾಗುತ್ತದೆ ಅನ್ನೋದು ಚಿತ್ರದ ಹೂರಣ. ಅನ್ನಾಥೆಯನ್ನು ಶಿವ ನಿರ್ದೇಶಸುತ್ತಿದ್ದರೆ, ಕಲಾನಿಧಿ ಮಾರನ್ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: Heart attack: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತ
ಇದನ್ನೂ ಓದಿ: ಭದ್ರತಾ ಪಡೆಯ ಗುಂಡಿಗೆ ಹೈಬ್ರಿಡ್ ಭಯೋತ್ಪಾದಕ ಸಾವು
Rajanikanth back on Annaatthe As Family Revenger
Discussion about this post