ಕೇಂದ್ರದ ಮಾಜಿ ಸಚಿವ 97 ವರ್ಷದ ಆರ್.ಎಲ್. ಜಾಲಪ್ಪ ಇಹಲೋಕ ತ್ಯಜಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯರಾಗಿದ್ದ ಅವರು, ಮೈಸೂರಿನಲ್ಲಿ ಬಿ.ಎ ಪದವೀ ವ್ಯಾಸಂಗ ಮಾಡಿದ್ದರು. ಜಾಲಪ್ಪನವರು 1980ರಿಂದ 83ರವರೆಗೆ ಕರ್ನಾಟಕ ವಿಧಾನ ಪರಿಷತ್ ಮೂಲಕ ಅಧಿಕೃತವಾಗಿ ಕಲಾಪವನ್ನು ಪ್ರವೇಶಿಸಿದ್ದರು.
ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ತಮ್ಮದೇ ಆದ ನಿಲುವುಗಳಿಂದ ಅವರು ಬಹು ಪ್ರಸಿದ್ಧರಾಗಿದ್ದರು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಜಾಲಪ್ಪನವರನ್ನು ಹಲವು ಕಾರಣಗಳಿಗಾಗಿ ಅಜರಾಮರಾಗಿದ್ದಾರೆ.
ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಅವರು 1983 ರಿಂದ 1996ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದರು. ನಂತರದ ದಿನಗಳಲ್ಲಿ ಅವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿಯು ಸೇವೆ ಸಲ್ಲಿಸುವ ಅವಕಾಶ ಪಡೆದುಕೊಂಡರು. 1983-84 ಮತ್ತು 1985-86 ರಲ್ಲಿ ಸಹಕಾರ ಸಚಿವರಾಗಿ, 1986-1987ರಲ್ಲಿ ಗೃಹ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಆನಂತರ ದಶಕದ ತರುವಾಯ ಅಂದರೆ, 1995-96ರಲ್ಲಿ ಕರ್ನಾಟಕದ ಕಂದಾಯ ಸಚಿವರಾಗಿಯೂ ಜಾಲಪ್ಪನವರು ಸೇವೆ ಸಲ್ಲಿಸಿದ್ದಾರೆ. 1996- 11 ನೇ ಲೋಕಸಭೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಆಯ್ಕೆಯಾದ ಅವರು, 1996-98 ಕೇಂದ್ರ ಜವಳಿ ಸಚಿವರಾಗಿ ಸೇವೆ ಸಲ್ಲಿಸಿದರಲ್ಲದೇ, 1998 ರಲ್ಲಿ 1999ರಲ್ಲಿ ಮತ್ತು 2004ರಲ್ಲಿಯೂ ಲೋಕಸಭೆಗೆ ಮತ್ತೆ ಚುನಾಯಿತರಾದರು. ಮುಂದುವರೆದು ಕೃಷಿ ಸಚಿವಾಲಯವೂ ಸೇರಿ ಹಲವು ಸಚಿವಾಲಯಗಳ ಸಲಹಾ ಸಮಿತಿಗಳಿಗೂ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಒಟ್ಟು ನಾಲ್ಕು ಬಾರಿ ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ವಿಧಾನಸಭೆಯ ಸದಸ್ಯರಾಗಿಯೂ ಮನೆಮಾತಾಗಿದ್ದರು. ಅಂದಹಾಗೆ ಜಾಲಪ್ಪನವರು ಪ್ರತಿನಿಧಿಸುತ್ತಿದ್ದ ಲೋಕಸಭಾ ಕ್ಷೇತ್ರ ಚಿಕ್ಕಬಳ್ಳಾಪುರವಾಗಿತ್ತು. ಅವರ ಪೂರ್ಣ ಹೆಸರು ಆರ್.ಲಕ್ಷ್ಮಿನಾರಾಯಣಪ್ಪ, ಪ್ರತಿನಿಧಿಸುತ್ತಿದ್ದ ಪಕ್ಷ ಕಾಂಗ್ರೆಸ್. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವು ದಿಗ್ಗಜರ ಒಡನಾಟ ಜಾಲಪ್ಪನವರಿಗಿತ್ತು. ಜಾಲಪ್ಪನವರು ಇಹಲೋಕ ತ್ಯಜಿಸಿದ್ದರಿಂದ ಹಳೆಯ-ಹಿರಿಯ ಸಾಲಿನ ರಾಜಕಾರಣಿಯೋರ್ವರು ಇನ್ನಿಲ್ಲದಂತಾಗಿದೆ.
ಇದನ್ನೂ ಓದಿ: ಈ ಸಿಂಪಲ್ ಟ್ರಿಕ್ ಬಳಸಿ ಯಾವುದೇ ಥರ್ಡ್ ಪಾರ್ಟಿ ಆಪ್ಗಳಿಲ್ಲದೆ ಜಾಹಿರಾತು ಬ್ಲಾಕ್ ಮಾಡಿ
(Senior Politician Former Central Minister RL Jalappa dies here is his life details)
Discussion about this post