Spiritual: ಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ಈ ವಸ್ತುಗಳನ್ನು ಬಳಸಿ..
Spiritual: ಲಕ್ಷ್ಮೀ ದೇವಿಯ ಆಶೀರ್ವಾದ ಸಿಕ್ಕರೆ, ಜೀವನ ಆರಾಮದಾಯಕವಾಾಗಿರುತ್ತದೆ ಅಂತಾ ಎಲ್ಲರಿಗೂ ತಿಳಿದಿದೆ. ಇದಕ್ಕೆ ಕಾರಣ ದುಡ್ಡು. ಹಣವಿದ್ದರೆ, ಏನೂ ಬೇಕಾದರೂ ಖರೀದಿಸಬಹುದು. ಕೆಲವರು ಹಣದಿಂದ ನೆಮ್ಮದಿ ಖರೀದಿಸಲಾಗುವುದಿಲ್ಲ ಅಂತಾ ಹೇಳುತ್ತಾರೆ. ಆದರೆ ನೆಮ್ಮದಿ ಹಾಳಾಗಲು ಪ್ರಮುಖ ಕಾರಣವೇ ಹಣ. ಹಾಗಾಗಿ ಹಣವಿದ್ದರು, ಅತ್ಯುತ್ತಮ ಜೀವನ ನಡೆಸುತ್ತಾರೆ.
ಹಾಗೆ ಹಣವಿರಬೇಕು ಅಂದ್ರೆ ನಮ್ಮ ಮೇಲೆ ಲಕ್ಷ್ಮೀ ದೇವಿಯ ಕೃಪೆ ಇರಬೇಕು. ಹಾಗೆ ಕೃಪೆ ಇರಬೇಕು ಅಂದ್ರೆ, ನಾವು ಲಕ್ಷ್ಮೀ ದೇವಿಯನ್ನು ಆರಾಧಿಸಬೇಕು. ಪೂಜೆ ಮಾಡಬೇಕು. ಆಕೆಗೆ ಇಷ್ಟವಾಗುವ ವಸ್ತುಗಳನ್ನು ಇರಿಸಿ, ಪೂಜಿಸಬೇಕು. ಹಾಗಾಗಿ ನಾವಿಂದು ಶುಕ್ರವಾರ ಪೂಜೆಗೆ ಲಕ್ಷ್ಮೀ ದೇವಿಗೆ ಏನೇನು ಇರಿಸಿ ಪೂಜಿಸಬೇಕು ಅಂತಾ ಹೇಳಲಿದ್ದೇವೆ.
ಕಮಲದ ಹೂವು: ಕಮಲದ ಹೂವಿನಿಂದ ಲಕ್ಷ್ಮೀ ದೇವಿಯನ್ನು ಪೂಜಿಸಬೇಕು. ಹೀಗೆ ಮಾಡಿದ್ದಲ್ಲಿ, ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆಂಬ ನಂಬಿಕೆ ಇದೆ. ಏಕೆಂದರೆ ಆಕೆ ಕುಳಿತಿರುವುದೇ ಕಲ್ಲಿನ ಮೇಲೆ. ಹಾಗಾಗಿಯೇ ಆಕೆ ಚಂಚಲೆ ಎನ್ನಲಾಗುತ್ತದೆ. ಅಂಥ ಚಂಚಲೆಯ ಕೃಪೆ ಸದಾ ನಿಮ್ಮ ಮೇಲಿರಬೇಕು ಅಂದ್ರೆ ನೀವು ಲಕ್ಷ್ಮೀ ದೇವಿಗೆ ಶುಕ್ರವಾರದಂದು ಕಮಲದ ಹೂವಿನಿಂದ ಪೂಜಿಸಬೇಕು.
ಕಮಲದ ಬೀಜ: ಕಮಲದ ಬೀಜದಿಂದ ಹಾರ ತಯಾರಿಸಲಾಗುತ್ತದೆ. ನೀವು ಶುಕ್ರವಾರದ ದಿನ ಲಕ್ಷ್ಮೀ ದೇವಿಯ ಸ್ತೋತ್ರ ಸ್ಮರಿಸುವಾಗ, ಕಮಲದ ಬೀಜದ ಹಾರವನ್ನು ಹಿಡಿದು ಸ್ತೋತ್ರ ಸ್ಮರಿಸಿದರೆ, ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಿರುತ್ತದೆ.
ರೋಸ್ ವಾಟರ್: ಅಂದರೆ ಗುಲಾಬಿ ದ್ರವ್ಯ. ಇದರ ಪರಿಮಳ ಮನೆ ತುಂಬ ಇದ್ದರೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿಯೇ ಮದುವೆ- ಇತರೇ ಶುಭ ಕಾರ್ಯಕ್ರಮದಲ್ಲಿ ರೋಸ್ ವಾಟರ್ ಸಿಂಪಡಿಸಲಾಗುತ್ತದೆ. ಅಲ್ಲದೇ ಶುಕ್ರವಾರದಂದಾರೂ ನೀವು ಮನೆಯಲ್ಲಿ ರೋಸ್ ವಾಟರ್ ಸಿಂಪಡಿಸಬೇಕು. ಸ್ವಲ್ಪ ಗುಲಾಬಿ ದ್ರವ್ಯವನ್ನು ನಿಮ್ಮ ಸ್ನಾನದ ನೀರಿಗೆ ಹಾಕಿ ಬಳಸಿದರೆ ಇನ್ನೂ ಉತ್ತಮ.
ಕಲ್ಲು ಸಕ್ಕರೆ: ದೇವಿಗೆ ನೀವು ಮೃಷ್ಟಾನ್ನ ಭೋಜನ ಮಾಡಿ ಬಡಿಸಲು ಸಾಧ್ಯವಾಗದಿದ್ದಲ್ಲಿ, ನೀವು ಕಲ್ಲು ಸಕ್ಕರೆಯನ್ನೇ ನೈವೇದ್ಯವನ್ನಾಗಿ ಇರಿಸಬಹುದು.
ಹಾಲಿನ ಪಾಯಸ: ಇನ್ನು ನೈವೇದ್ಯ ಮಾಡುವುದಿದ್ದರೆ, ಹಾಲು-ಸಕ್ಕರೆಯಿಂದ ಮಾಡಿದ ಪಾಯಸ ಲಕ್ಷ್ಮೀ ದೇವಿಗೆ ಪ್ರಿಯವಾಗಿರುತ್ತದೆ. ಹಾಾಗಾಗಿ ಹಲವರು ಶುಕ್ರವಾರದ ಪೂಜೆಯ ಸಮಯದಲ್ಲಿ ಲಕ್ಷ್ಮೀ ದೇವಿಗೆ ಹಾಲು-ಸಕ್ಕರೆ-ಶ್ಯಾವಿಗೆ-ಅಕ್ಕಿ- ಸಾಬಕ್ಕಿ ಹೀಗೆ ಬೇರೆ ಬೇರೆ ರೀತಿಯ ಪಾಯಸ ಮಾಡಿ ನೈವೇದ್ಯ ಮಾಡುತ್ತಾರೆ.
=================================
ಇಂಥ ವಸ್ತುಗಳು ದೇವರ ಕೋಣೆಯಲ್ಲಿದ್ದರೆ ಇಂದೇ ತೆಗೆದು ಹಾಕಿ..
ನಮ್ಮ ಮನೆಯ ದೇವರ ಕೋಣೆ ಯಾವ ಭಾಗದಲ್ಲಿ, ಯಾವ ದಿಕ್ಕಿನಲ್ಲಿ, ಯಾವ ರೀತಿ ಇರುತ್ತದೆಯೋ, ನಮ್ಮ ಜೀವನವೂ ಅದೇ ರೀತಿ ಇರುತ್ತದೆ. ಹಾಗಾಗಿಯೇ ದೇವರ ಕೋಣೆಯನ್ನು ಕ್ಲೀನ್ ಆಗಿರಿಸಬೇಕು. ಸರಿಯಾದ ದಿಕ್ಕಿನಲ್ಲಿ ಸ್ಥಾಪಿಸಬೇಕು ಅಂತಾ ಹೇಳಲಾಗುತ್ತದೆ. ಅಲ್ಲದೇ ದೇವರ ಕೋಣೆ ಡೈರೆಕ್ಟ್ ಆಗಿ ಬೇರೆಯವರಿಗೆ ಕಾಣಬಾರದು. ಯಾಕಂದ್ರೆ ದೃಷ್ಟಿ ತಾಕಿದರೆ, ಮನೆಯ ನೆಮ್ಮದಿ ಹಾಳಾಗುತ್ತದೆ ಅಂತಾ ಹೇಳಲಾಗುತ್ತದೆ.
ಇನ್ನು ದೇವರ ಕೋಣೆಯಲ್ಲಿ ನಾವು ಕೆಲ ವಸ್ತುಗಳನ್ನು ಇರಿಸಬಾರದು. ಹಾಗೆ ಇರಿಸುವುದು ಮನೆಗೂ ಉತ್ತಮವಲ್ಲ. ಹಾಗಾದ್ರೆ ಯಾವ ವಸ್ತುವನ್ನು ದೇವರ ಕೋಣೆಯಲ್ಲಿ ಇರಿಸಬಾರದು. ಯಾಕೆ ಇರಿಸಬಾರದು ಅಂತಾ ತಿಳಿಯೋಣ ಬನ್ನಿ..
ಗಂಗಾಜಲವನ್ನು ಈ ರೀತಿ ಇಡಬೇಡಿ: ನೀವು ಗಂಗಾಜಲ ತಂದು ದೇವರ ಕೋಣೆಯಲ್ಲಿರಿಸುವುದು ಉತ್ತಮ ವಿಷಯವೇ. ಆದರೆ ಅದನ್ನು ಇರಿಸುವ ರೀತಿ ಸರಿಯಾಗಿರಬೇಕು. ಗಂಗಾ ಜಲವನ್ನು ತಾಮ್ರದ ಅಥವಾ ಕಂಚಿನ ಗ್ಲಾಸಿನಲ್ಲಿರಿಸಿ. ನೀವು ಪ್ಲಾಸ್ಟಿಕ್ ಅಥವಾ ಬೇರೆ ಯಾವುದೇ ಪಾತ್ರೆಯಲ್ಲಿರಿಸಿದರೂ ಅದು ಪವಿತ್ರವಾಗಿರುವುದಿಲ್ಲ.
ದೇವರ ವಿಗ್ರಹದ ಬಗ್ಗೆ ಗಮನವಿರಲಿ: ದೇವರ ವಿಗ್ರಹಗಳು ಅಗತ್ಯಕ್ಕಿಂತ ಹೆಚ್ಚಿರಬಾರದು. 1 ವಿಗ್ರಹ ಮಾತ್ರ ಇರಬೇಕು. ಗಣಪತಿ ವಿಗ್ರಹವಿದ್ದರೆ, 1 ವಿಗ್ರಹಕ್ಕೆ ಮಾತ್ರ ಪೂಜಿಸಿ. ಹಲವು ಇರಿಸಬೇಡಿ. ಇನ್ನು ನೋಡಲು ಚೆಂದವೆಂದು ಬೃಹದಾಕಾರದ ಮೂರ್ತಿಗಳನ್ನು ದೇವರ ಕೋಣೆಯಲ್ಲಿರಿಸಬೇಡಿ. ಏಕೆಂದರೆ, ಈ ಮೂರ್ತಿಗೆ ಪ್ರತಿದಿನ ಅಭಿಷೇಕ ಪೂಜೆ, ನೈವೇದ್ಯ ಎಲ್ಲವೂ ಆಗಬೇಕು. ಕಾಲ ಕಾಲಕ್ಕೆ ಪೂಜೆ, ನೈವೇದ್ಯ ಮಾಡಲಾಗದಿದ್ದಲ್ಲಿ, ಬೃಹದಾಕಾರದ ವಿಗ್ರಹ ಇರಿಸಬೇಡಿ.
ಪಿತೃಗಳ ಫೋಟೋ: ಮರಣಿಸಿದ ಹಿರಿಯರ ಫೋಟೋವನ್ನು ದೇವರ ಕೋಣೆಯಲ್ಲಿರಿಸಬೇಡಿ. ಇದು ನೀವು ದೇವರಿಗೆ ತೋರುವ ಅಗೌರವವಾಗಿರುತ್ತದೆ. ದೇವರಿಗೆ ಸಮನಾಗಿ ನೀವು ಪಿತೃವನ್ನು ಪೂಜಿಸಲಾಗುವುದಿಲ್ಲ. ಹಾಗಾಗಿ ದೇವರ ಕೋಣೆಯಲ್ಲಿ ಪಿತೃಗಳ ಚಿತ್ರವಿರಬಾರದು.
ತುಂಡಾದ ವಿಗ್ರಹ ಅಥವಾ ಕ್ರ್ಯಾಕ್ ಆಗಿರುವ ಫೋಟೋ: ನೀವು ಪೂಜಿಸುವ ವಿಗ್ರಹವಾಗಲಿ, ಫೋಟೋವಾಗಲಿ ಅಥವಾ ಪೂಜೆಗೆ ಬಳಸುವ ಯಾವುದೇ ಸಾಮಗ್ರಿಯಾಗಲಿ ತುಂಡಾಗಿರಬಾರದು. ಅದು ಸರಿಯಾದ ರೀತಿಯಲ್ಲಿಯೇ ಇರಬೇಕು. ಇಲ್ಲವಾದಲ್ಲಿ, ಅಂಥ ವಿಗ್ರಹ, ಫೋಟೋಗೆ ಪೂಜಿಸಿದ ಪಾಪ ತಾಕುತ್ತದೆ.
ಪ್ಲಾಸ್ಟಿಕ್ ಹೂವು: ದೇವರಿಗೆ ಎಂದಿಗೂ ಪ್ಲಾಸ್ಟಿಕ್ ಹೂವಿನ ಬಳಕೆ ಮಾಡಬೇಡಿ. ನಿಜವಾದ ಹೂವನ್ನೇ ಬಳಸಬೇಕು. ಏಕೆಂದರೆ ದೇವರಿಗೆ ಸುಗಂಧವಿಲ್ಲದ ಹೂವು ಬಳಸುವುದು ತಪ್ಪು.
ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಹಳೆ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?
ನಾವು ಭಾರತೀಯ ಮಿಡಲ್ ಕ್ಲಾಸ್ ಜನರು ಹಣ ಖರ್ಚು ಮಾಡದಿರಲು ಎಲ್ಲೆಲ್ಲಿ ಸಾಧ್ಯ ಎಂದು ನೋಡುತ್ತೇವೆ. ಇದೇ ಬುದ್ಧಿ ನಮಗೆ ಜೀವನ ಮಾಡಲೂ ಕಲಿಸಿದೆ ಅನ್ನೋದು ಸತ್ಯ. ಆದರೆ ನೀವೇನಾದರೂ ಬೇರೆ ವಸ್ತ್ರ ತರುವ ಬದಲು, ಇರುವ ಹಳೇ ವಸ್ತ್ರದಲ್ಲೇ ಮನೆ ಕ್ಲೀನ್ ಮಾಡೋಣ ಅಂದ್ರೆ, ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ ಎಂದಿಗೂ ಆಗುವುದಿಲ್ಲ. ಹಾಗಾದ್ರೆ ನಾವು ಹಳೇ ವಸ್ತ್ರವನ್ನು ಬಳಸಲೇ ಬಾರದಾ..? ಬಳಸೋದಾದರೂ ಹೇಗೆ ಬಳಸಬೇಕು..? ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ನಾವು ಹಳೆಯ ವಸ್ತ್ರಗಳನ್ನು ಮನೆ ಕ್ಲೀನ್ ಮಾಡಲು ಬಳಸಿದರೆ, ನಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ. ನೆಮ್ಮದಿಯೂ ಕಡಿಮೆಯಾಗುತ್ತದೆ. ಲಕ್ ಕೂಡ ಕಡಿಮೆಯಾಗುತ್ತದೆ. ಹಾಗಾಗಿ ನಾವು ಹಳೆ ವಸ್ತ್ರಗಳಿಂದ ಮನೆ ಕ್ಲೀನ್ ಮಾಡಬಾರದು.
ಯಾವ ಮನೆಯಲ್ಲಿ ಹಳೆ ವಸ್ತ್ರವನ್ನು ಹೆಚ್ಚು ಬಳಸುತ್ತಾರೋ, ಅಂಥ ಮನೆಯಲ್ಲಿ ಲಕ್ಷ್ಮೀ ದೇವಿ ಹೆಚ್ಚು ಕಾಲ ನೆಲೆಸುವುದಿಲ್ಲ. ಬಂದ ದುಡ್ಡು ಹಾಗೆ ಹೋಗುತ್ತದೆ. ಖರ್ಚು ಹೆಚ್ಚಾಗುತ್ತದೆ. ರಾಹುವಿನ ಆಶೀರ್ವಾದ ಕೂಡ ಸಿಗುವುದಿಲ್ಲ. ಹಾಗಾಗಿ ನೀವು ಮನೆ ಕ್ಲೀನ್ ಮಾಡಲು ಉತ್ತಮವಾದ ವಸ್ತ್ರವನ್ನೇ ಬಳಸಿ.
ಇನ್ನು ನೀವು ನಿಮ್ಮ ವಸ್ತ್ರವನ್ನು ಮನೆ ಕ್ಲೀನ್ ಮಾಡಲು ಬಳಸಿದರೆ, ಅಥವಾ ದಾನ ಮಾಡಿದರೆ, ನಿಮ್ಮಲ್ಲಿನ ಸಕಾರಾತ್ಮಕ ಶಕ್ತಿ ಕಡಿಮೆಯಾಗಿ, ನಕಾರಾತ್ಮಕ ಗುಣ ಹೆಚ್ಚಾಗುತ್ತದೆ. ಅಲ್ಲದೇ, ನಿಮ್ಮಲ್ಲಿ ಮಾನಸಿಕ ನೆಮ್ಮದಿ ಕಡಿಮೆಯಾಗುತ್ತದೆ. ಹಾಗಾಗಿ ನಿಮ್ಮ ಹಳೆ ಉಡುಪುಗಳನ್ನು ಹಾಗೆ ದಾನ ಮಾಡಬಾರದು.
ಹಳೆ ವಸ್ತ್ರಗಳನ್ನೇ ನಿಮ್ಮ ಮನೆ ಕ್ಲೀನ್ ಮಾಡಲು ಬಳಸಲೇಬೇಕು ಅಥವಾ ದಾನ ಮಾಡಬೇಕು ಎಂದರೆ, ನೀವು ಆ ವಸ್ತ್ರಗಳನ್ನು ಉಪ್ಪು ನೀರಿನಲ್ಲಿ ವಾಶ್ ಮಾಡಬೇಕು. ಆಗ ನಿಮ್ಮಲ್ಲಿನ ಸಕಾರಾತ್ಮಕ ಶಕ್ತಿ ಕಳೆದುಹೋಗುವುದಿಲ್ಲ.
=ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ
ನೀವು ಯಾವುದಾದರೂ ಮುಖ್ಯವಾದ ಕೆಲಸಕ್ಕೆ, ಅಥವಾ ಯಾವುದಾದರೂ ಮೌಲ್ಯವಾದ ವಸ್ತು ಖರೀದಿಗೋ, ಸಂದರ್ಶನಕ್ಕೋ ಹೀಗೆ ಯಾವುದಾದರೂ ಕೆಲಸಕ್ಕೆ ಹೋಗುವಾಗ, ಆ ಕೆಲಸದಲ್ಲಿ ಯಶಸ್ಸು ಸಿಗಬೇಕು ಅಂದ್ರೆ ನೀವು ಕೆಲ ಕೆಲಸಗಳನ್ನು ಮಾಡಬೇಕು. ಅದೇನು ಅಂತಾ ತಿಳಿಯೋಣ ಬನ್ನಿ..
ನೀವು ಮನೆಯಿಂದ ಆಚೆ ಹೋಗುವಾಾಗ, ಮನೆಯಲ್ಲಿ ದೇವರಿಗೆ ದೀಪ ಹಚ್ಚಿ, ಕೈ ಮುಗಿದು ಹೋಗಿ. ಇದರಿಂದ ನಿಮ್ಮ ಕೆಲಸ ಅರ್ಧ ಸುಲಭವಾಗುತ್ತದೆ. ದೇವರ ಆಶೀರ್ವಾದವಿದ್ದರೆ, ಕೆಲಸದಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ. ಇನ್ನು ನಿಮ್ಮ ಮನೆಯಲ್ಲಿರುವ ಹಿರಿಯರ ಆಶೀರ್ವಾದ ಪಡೆದು ಹೋದರೆ ಇನ್ನೂ ಉತ್ತಮ.
ನಮ್ಮ ಹಣೆಬರಹ ಬದಲಾಯಿಸುವಲ್ಲಿ ನಮ್ಮ ದೇಹದ ಪ್ರತೀ ಭಾಗವೂ ಕಾರಣವಾಗುತ್ತದೆ. ಅದರಲ್ಲೂ ನಾವೇ ನಿರ್ಮಿಸಿದ ಮನೆಯಲ್ಲಿ ನಾವು ನೆಮ್ಮದಿಯಾಗಿರಬೇಕು ಅಂದ್ರೆ, ಬಲಗಾಲಿರಿಸಿ, ಹೋಗಬೇಕು. ಎಡಗಾಲಿರಿಸಿ ಹೋದಲ್ಲಿ, ಆ ಮನೆಯಲ್ಲಿ ಕಿಂಚಿತ್ತು ನೆಮ್ಮದಿ ಇರುವುದಿಲ್ಲ. ಅದೇ ರೀತಿ ಮುಖ್ಯವಾದ ಕೆಲಸಕ್ಕೆ ಹೋಗುವಾಗ ನಾವು ಬಲಗಾಲನ್ನು ಆಚೆ ಇರಿಸಿ, ಇದರಿಂದ ಕೆಲಸ ಸುಲಭವಾಗುತ್ತದೆ.
ಇನ್ನು ಕೆಲಸಕ್ಕೆ ಹೋಗುವಾಗ ಸಿಹಿ ತಿಂದು ಹೋಗಿ. ಹಾಗಾಗಿಯೇ ಉತ್ತರ ಭಾರತೀಯರು ಕೆಲಸಕ್ಕೆ ಅಥವಾ ಸಂದರ್ಶನಕ್ಕೆ ಹೋಗದುವಾಗ ಸಕ್ಕರೆ- ದಹಿ ತಿಂದು ಹೋಗುತ್ತಿದ್ದರು. ನೀವು ಕೂಡ ಯಾವುದಾದರೂ ಕೆಲಸಕ್ಕೆ ಹೋಗುವಾಗ, ಸ್ವಲ್ಪ ಸಿಹಿ ತಿಂದು ಹೋಗಿ. ಇದರಿಂದ ನಿಮ್ಮ ದೇಹದಲ್ಲಿ ಸ್ವಲ್ಪ ಶಕ್ತಿ ಬರುತ್ತದೆ. ಇದು ನಿಮ್ಮನ್ನು ಆಲಸ್ಯದಿಂದ ಆಚೆ ಇರಿಸುತ್ತದೆ. ಹಾಗಾಗಿಯೇ ಸಕ್ಕರೆ ಸೇವಿಸಿ ಹೋಗಬೇಕು.
=ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಕೆಟ್ಟ ದೃಷ್ಟಿಯಿಂದ ತಪ್ಪಿಸಿಕ“ಳ್ಳಲು ನವವಿವಾಹಿತರು ಹೀಗೆ ಮಾಡಿ
ನವವಿವಾಹಿತರು ಕೆನಸುಗಳನ್ನು ಕಟ್ಟಿಕ“ಂಡು ವಿವಾಹವಾಗುತ್ತಾರೆ. ಆ ಕನಸು ನನಸಾಗಬೇಕು, ಜೀವನ ಚೆಂದವಿರಬೇಕು ಅಂದ್ರೆ ನಿಮ್ಮ ಖುಷಿಗೆ ಯಾರದ್ದೂ ದೃಷ್ಟಿ ಬೀಳಬಾರದು. ಹಾಗಾಗಿ ನೀವು ಕೆಲ ಕೆಲಸಗಳನ್ನು ಮಾಡಬೇಕು. ಏನು ಮಾಡಬೇಕು ತಿಳಿಯೋಣ ಬನ್ನಿ..
ಕುಂಕುಮ ಅಥವಾ ವಿಭೂತಿ ಹಚ್ಚಿ: ಕೆಟ್ಟದೃಷ್ಟಿ ತಾಕಬಾರದು ಅಂದ್ರೆ, ನೀವು ದೇವರ ಕುಂಕುಮ ಅಥವಾ ವಿಭೂತಿ ಹಚ್ಚಿ. ಇದರಿಂದ ನಿಮಗೆ ಯಾರ ಕೆಟ್ಟದೃಷ್ಟಿ ಬೀಳುವುದಿಲ್ಲ.
ಕಪ್ಪು ಅಥವಾ ಕೆಂಪು ದಾರ: ದೇವಸ್ಥಾನದಲ್ಲಿ ದೃಷ್ಟಿ ತಾಕಬಾರದು ಎಂದು ಕೆಂಪು ಅಥವಾ ಕಪ್ಪು ದಾರ ಕಟ್ಟುತ್ತಾರೆ. ನಿಮ್ಮ ಜಾತಕಕ್ಕೆ ಅನುಗುಣವಾಗಿ ನೀವು ಈ ದಾರಗಳನ್ನು ಕಟ್ಟಿಕ“ಳ್ಳಬಹುದು. ಇದರಿಂದ ಕೂಡ ಕೆಟ್ಟದೃಷ್ಟಿಯಿಂದ ನೀವು ರಕ್ಷಣೆ ಪಡೆಯಬಹುದು.
ಪೂಜೆ-ಹೋಮ ಹವನ: ಮನೆಯಲ್ಲಿ ವರ್ಷಕ್ಕೆ ನಾಲ್ಕು ಬಾರಿಯಾದರೂ ಪೂಜೆ, ಹೋಮ ಹವನ ಮಾಡಬೇಕು. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರುವುದಲ್ಲದೇ, ಯಾರ ದೃಷ್ಟಿಯೂ ನಿಮ್ಮ ಮೇಲೆ ಬೀಳುವುದಿಲ್ಲ. ಅಲ್ಲದೇ, ದೇವಸ್ಥಾನಗಳಲ್ಲಿ ನಡೆಯುವ ಪೂಜೆಯಲ್ಲಿಯೂ ನೀವು ಭಾಗವಹಿಸಬಹುದು.
ನೀರಿಗೆ ಕಲ್ಲುಪ್ಪು ಹಾಕಿ ಸ್ನಾನ ಮಾಡಿ: ವಾರಕ್ಕೆ 2 ಬಾರಿ ನೀವು ಸ್ನಾನ ಮಾಡುವ ನೀರಿಗೆ ಕಲ್ಲುಪ್ಪು ಹಾಕಿ ಸ್ನಾನ ಮಾಡಬೇಕು. ಇದರಿಂದ ನಿಮ್ಮ ಮೇಲಿರುವ ನಕಾರಾತ್ಮಕ ಅಂಶಗಳು ದೂರವಾಗುತ್ತದೆ. ಕುದೃಷ್ಟಿಯೂ ನಾಶವಾಗುತ್ತದೆ.
=ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಗುರುವಾರ ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ
ಗುರುವಾರ ಗುರುವಿನ ದಿನ, ಅಂದ್ರೆ ಬೃಹಸ್ಪತಿಯ ದಿನ. ಈ ದಿನ ನಾವು ಹೇಗಿರುತ್ತೇವೋ, ಆ ರೀತಿ ನಮ್ಮ ಜೀವನದಲ್ಲಿ ಗುರು ಬಲ ಹೆಚ್ಚಿಸಲು ಸಹಾಯಕವಾಗಿರುತ್ತದೆ. ಹಾಗಾಗಿ ಇಂದು ನಾವು ಗುರುವಾರ ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಗುರುವಾರದ ದಿನ ಮನೆ ಒರೆಸಬೇಡಿ: ಗುರುವಾರದ ದಿನ ಮನೆ ಗುಡಿಸಬಹುದು. ಆದರೆ ಒರೆಸಬೇಡಿ. ಬುಧವಾರದಂದೇ ಮನೆಯನ್ನು ಕ್ಲೀನ್ ಮಾಡಿಬಿಡಿ. ಗುರುವಾರ ಮನೆ ಒರೆಸಿದರೆ, ಬೃಹಸ್ಪತಿ ಕೃಪೆ ಇರುವುದಿಲ್ಲ ಎನ್ನಲಾಗಿದೆ. ಹಾಗಾಗಿ ಗುರುವಾರದ ದಿನ ಮನೆ ಕ್ಲೀನ್ ಮಾಡುವಂತಿಲ್ಲ.
ತಲೆ ಸ್ನಾನ ಮಾಡಬೇಡಿ: ಇನ್ನು ಗುರುವಾರದ ದಿನ ತಲೆ ಸ್ನಾನ ಮಾಡಿದರೆ, ಪತಿ-ಪತ್ನಿ-ಮಕ್ಕಳು ಎಲ್ಲರಿಗೂ ಗುರುಬಲ ಕಡಿಮೆಯಾಗುತ್ತದೆ. ಜಾಾತಕದಲ್ಲಿ ಗುರು ದುರ್ಬಲನಾಗುತ್ತಾನೆ ಎಂದು ಹೇಳಲಾಗಿದೆ.
ಕೂದಲು, ಉಗುರು ಕತ್ತರಿಸಬೇಡಿ: ಗುರುವಾರದ ದಿನ ಕೂದಲು ಕತ್ತರಿಸಬಾರದು, ಉಗುರು ಕತ್ತರಿಸಬಾರದು. ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ ಮನೆಯಲ್ಲಿಯೂ ನೆಮ್ಮದಿ ಇರುವುದಿಲ್ಲ. ಮಾನಸಿಕ ನೆಮ್ಮದಿ ಹಾಳಾಗುವುದು. ಹೀಗೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಭಾನುವಾರದಂದು ಈ ಕೆಲಸಗಳನ್ನು ಮಾಡಬೇಡಿ..
ರವಿವಾರ ರಜಾ ದಿನ. ಹಾಗಾಗಿ ಹಲವರು ಎಲ್ಲ ಕೆಲಸಗಳನ್ನು ರವಿವಾರದಂದೇ ಇಟ್ಟುಕ“ಳ್ಳುತ್ತಾರೆ. ಪೂಜೆ, ಹೋಮ-ಹವನ, ಪ್ರವಾಸ, ಅತಿಥಿಗಳನ್ನು ಬರಹೇಳುವುದು, ಅತಿಥಿಗಳ ಮನೆಗೆ ಹೋಗುವುದು ಹೀಗೆ ಹಲವು ವಿಚಾರಗಳು. ಕೆಲವರಂತೂ ಹಿರಿಯರ ಶ್ರಾದ್ಧವನ್ನು ಸಹ ತಮಗೆ ಬಿಡುವಿದ್ದಾಗ ಮಾಡುತ್ತಾರೆ. ಆದರೆ ನಾವು ರವಿವಾರದಂದು ಕೆಲ ಕೆಲಸಗಳನ್ನು ಮಾಡಲೇಬಾರದು. ಹಾಗಾದ್ರೆ ಯಾವ ಕೆಲಸಗಳನ್ನು ರವಿವಾರ ಮಾಡಬಾರದು. ಏಕೆ ಅಂತಾ ತಿಳಿಯೋಣ ಬನ್ನಿ..
ತುಳಸಿಗೆ ನೀರು ಹಾಕಬೇಡಿ: ರವಿವಾರದ ದಿನ ತುಳಸಿಗೆ ನೀರು ಹಾಕಬಾರದು. ಏಕೆಂದರೆ ಅಂದು ತುಳಸಿ ಉಪವಾಸವಿರುತ್ತಾಳೆ ಅನ್ನೋದು ಧಾರ್ಮಿಕ ನಂಬಿಕೆ. ಆದರೆ ವಿಜ್ಞಾನದ ಪ್ರಕಾರ, ರವಿವಾರದ ದಿನ ಎಂದಿನಂತೆ ತಾಪ ಹೆಚ್ಚಾಗಿರುತ್ತದೆ. ಅಲ್ಲದೇ, ತುಳಸಿ ಉಷ್ಣ ವಸ್ತು. ರವಿವಾರದ ದಿನ ನಮ್ಮ ದೇಹದಲ್ಲಿಯೂ ಉಷ್ಣತೆ ಅಧಿಕವಾಗಿರುತ್ತದೆ. ಹೀಗಿರುವಾಗ ನಾವು ತುಳಸಿಯನ್ನು ಸ್ಪರ್ಶ ಮಾಡಿದರೆ, ಅದು ಬಾಡಿ ಹೋಗುವ ಸಾಧ್ಯತೆ ಹೆಚ್ಚು. ಹಾಗಾಗಿ ತುಳಸಿ ಗಿಡಕ್ಕೆ ರವಿವಾರದಂದು ನೀರು ಹಾಕಬಾರದು.
ಚಿನ್ನ-ಬೆಳ್ಳಿ ಖರೀದಿಸಬೇಡಿ: ಧಾರ್ಮಿಕ ನಂಬಿಕೆಯ ಪ್ರಕಾರ ರವಿವಾರದ ದಿನ ಚಿನ್ನ-ಬೆಳ್ಳಿ ಖರೀದಿ ಮಾಡಬಾರದು. ಹೀಗೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ಆ ಚಿನ್ನದಿಂದ ನಮಗೆ ನೆಮ್ಮದಿ ಸಿಗುವುದಿಲ್ಲವೆನ್ನಲಾಗಿದೆ.
ರವಿವಾರದ ದಿನ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಬೇಡಿ. ದೇಹಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದು ಉತ್ತಮ. ಆದರೆ ರವಿವಾರದಂದು ಉಷ್ಣತೆಯ ಪ್ರಮಾಣ ಹೆಚ್ಚಾಗಿದ್ದು, ಈ ದಿನ ಸಾಸಿವೆ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಬಾರದು. ಮತ್ತು ಸಾಸಿವೆ ಎಣ್ಣೆಯ ಪದಾರ್ಥ ಸೇವಿಸಬಾರದು. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ರವಿವಾರದ ದಿನ ಸೂರ್ಯನ ಬಿಸಿಲು ಹೆಚ್ಚಾಗಿರುವುದರಿಂದ ಈ ದಿನ ನಾವು ಕಪ್ಪು, ನೀಲಿ, ಕಂದು ಬಣ್ಣದ ಉಡುಪನ್ನು ಧರಿಸಬಾರದು. ಇದರಿಂದ ನಮ್ಮ ದೇಹದ ಉಷ್ಣತೆ ಇನ್ನೂ ಹೆಚ್ಚಾಗಿ, ಆರೋಗ್ಯ ಸಮಸ್ಯೆ ಶುರುವಾಗುತ್ತದೆ.























Discussion about this post