Spiritual Story: ಜೀವನವೆಂದ ಮೇಲೆ ಜಗಳ, ಸಿಟ್ಟು, ಖುಷಿ, ದುಃಖವೆಲ್ಲ ಸಾಮಾನ್ಯವಾಗಿ ಇರುತ್ತದೆ. ಅದರಲ್ಲೂ ಪತಿ ಪತ್ನಿ ಮಧ್ಯೆ ಜಗಳವಾದಾಗಲೇ, ಪ್ರೀತಿ ಹೆಚ್ಚೋದು. ಇದೇ ರೀತಿ ವಿಷ್ಣು ಮತ್ತು ಲಕ್ಷ್ಮೀ ಮಧ್ಯೆಯೂ ಜಗಳವಾಗಿತ್ತಂತೆ. ಹಾಗಾದ್ರೆ ಪುರಾಣ ಕಥೆಗಳ ಪ್ರಕಾರ, ಯಾಕೆ ವಿಷ್ಣು ಮತ್ತು ಲಕ್ಷ್ಮೀ ಮಧ್ಯೆ ಜಗಳವಾಗಿತ್ತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಮ್ಮೆ ಶ್ರೀವಿಷ್ಣು ಮತ್ತು ಲಕ್ಷ್ಮೀ ದೇವಿ, ವೈಕುಂಠದಲ್ಲಿ ಮಾತನಾಡುತ್ತ ಕುಳಿತಾಗ, ಶ್ರೀವಿಷ್ಣು ಲಕ್ಷ್ಮೀಯನ್ನು ಕುರಿತು, ಭಕ್ತರೆಲ್ಲ ನನ್ನ ಬಗ್ಗೆ ಎಷ್ಟು ಭಕ್ತಿ ಮಾಡುತ್ತಿದ್ದಾರೆ. ಎಲ್ಲರೂ ನಾರಾಯಣ ನಾರಾಯಣ ಎಂದು ಜಪ ಮಾಡುತ್ತಿದ್ದಾರೆಂದು ಹೇಳುತ್ತಾನೆ. ಆಗ ಲಕ್ಷ್ಮೀ ದೇವಿ, ಅವರು ನನಗಾಗಿ ನಿಮ್ಮ ಜಪ ಮಾಡುತ್ತಿದ್ದಾರೆ. ಎಲ್ಲರಿಗೂ ಧನ ಬೇಕು. ಹಾಗಾಗಿ ಅವರು ಜಪ ಮಾಡುತ್ತಾರೆಂದು ಹೇಳುತ್ತಾಳೆ.
ಅದಕ್ಕೆ ವಿಷ್ಣು, ಅವರೆಲ್ಲ ಲಕ್ಷ್ಮೀ ಲಕ್ಷ್ಮೀ ಎಂದ ಜಪ ಮಾಡುವುದಿಲ್ಲ. ಬದಲಾಗಿ ನಾರಾಯಣ ನಾರಾಯಣ ಎಂದು ಜಪ ಮಾಡುತ್ತಿದ್ದಾರೆ. ಹಾಗಾಗಿ ಅವರು ನನ್ನ ಬಗ್ಗೆ ಭಕ್ತಿ ಮಾಡುತ್ತಿದ್ದಾರೆಂದು ಹೇಳುತ್ತಾನೆ. ಆದ್ರೆ ಲಕ್ಷ್ಮೀ, ಇಲ್ಲ ಇಲ್ಲ ಅವರೆಲ್ಲ ದುಡ್ಡಿಗಾಗಿ, ನನ್ನನ್ನು ಒಲಿಸಿಕೊಳ್ಳುವುದಕ್ಕೆ ನಿಮ್ಮ ಜಪ ಮಾಡುತ್ತಿದ್ದಾರೆಂದು ಹೇಳುತ್ತಾಳೆ. ಆಗ ಇಬ್ಬರ ಮಧ್ಯೆ, ಹಾಗಾದ್ರೆ ಭಕ್ತರು ಯಾಕೆ ಭಕ್ತಿ ಮಾಡುತ್ತಿದ್ದಾರೆಂದು ಪರೀಕ್ಷಿಸಿಯೇ ಬಿಡೋಣ ಎಂಬ ಮಾತು ಬರುತ್ತದೆ.
ವಿಷ್ಣು ಬ್ರಾಹ್ಮಣನ ವೇಷ ಧರಿಸಿ, ಭೂಲೋಕಕ್ಕೆ ಹೋಗುತ್ತಾನೆ. ಅಲ್ಲಿ ಓರ್ವನ ಮನೆಗೆ ಹೋಗಿ, ತಾನು ಈ ಊರಿನಲ್ಲಿ ಪ್ರವಚನ ಹೇಳಲು ಬಂದಿದ್ದೇನೆ ಎನ್ನುತ್ತಾನೆ. ಆಗ ಆ ಮನೆಯ ಯಜಮಾನ, ಸರಿ ನೀವು ನಿಮ್ಮ ಪ್ರವಚನ ಮುಗಿಸಿ, ಈ ಊರಿನಿಂದ ಹೋಗುವವರೆಗೂ ನನ್ನ ಮನೆಯಲ್ಲಿರಿ ಎಂದು ಹೇಳುತ್ತಾನೆ. ಮೊದಲ ದಿನ ಪ್ರವಚನ ಶುರುವಾಗುತ್ತದೆ. ಹೆಚ್ಚಿನ ಜನ ಬರುತ್ತಾರೆ. ಮರುದಿನ ಇನ್ನೂ ಹೆಚ್ಚು ಜನ ವಿಷ್ಣುವಿನ ಪ್ರವಚನ ಕೇಳಲು ಬರುತ್ತಾರೆ.
ಆಗ ಜನ ನನ್ನಲ್ಲೆಷ್ಟು ಭಕ್ತಿ ಮಾಡುತ್ತಾರೆಂದು ವಿಷ್ಣುವಿಗೆ ಖುಷಿಯಾಗುತ್ತದೆ. ಇದೇ ಸಮಯಕ್ಕೆ ಲಕ್ಷ್ಮೀ ದೇವಿ ವೃದ್ಧೆಯ ವೇಷದಲ್ಲಿ ಭೂಲೋಕಕ್ಕೆ ಬರುತ್ತಾಳೆ. ಓರ್ವ ಹೆಂಗಸು ಮನೆಗೆ ಬೀಗ ಹಾಕಿ, ವಿಷ್ಣುವಿನ ಕೀರ್ತನೆ ಕೇಳಲು ಹೊರಟಿದ್ದಳು. ಅವಳ ಮನೆಗೆ ವೃದ್ಧೆ ಹೋದಳು. ಅವಳಲ್ಲಿ ನೀರು ಕೇಳಿದಳು. ಆದರೆ ಆ ಹೆಂಗಸು, ಹೊತ್ತಾಗಿದೆ ಅಮ್ಮಾ, ನನಗೆ ಪ್ರವಚನ ಕೇಳಲು ಹೋಗಬೇಕು ಎನ್ನುತ್ತಾಳೆ.
ತುಂಬಾ ಬಾಯಾರಿಕೆಯಾಗಿದೆ, ತಡೆಯಲು ಆಗುತ್ತಿಲ್ಲ. ಸ್ವಲ್ಪ ನೀರಷ್ಟೇ ಕೊಟ್ಟು ಹೋಗು ಎನ್ನುತ್ತಾಳೆ. ಹೆಂಗಸಿಗೆ ಕರುಣೆ ಬರುತ್ತದೆ. ಆಕೆ ವೃದ್ಧೆಗೆ ನೀರು ಕೊಡುತ್ತಾಳೆ. ವೃದ್ಧೆ ನೀರು ಕುಡಿದು, ಲೋಟ ವಾಪಸ್ ಕೊಡುವಾಗ, ಅದು ಚಿನ್ನದ ಲೋಟೆಯಾಗಿ ಬದಲಾಗುತ್ತದೆ.
ತಾನು ತಾಮ್ರದ ಲೋಟೆಯಲ್ಲಿ ನೀರು ಕೊಟ್ಟರೆ, ಅದು ಚಿನ್ನದ್ದಾಗಿ ವಾಪಾಸ್ ಆಗಿದೆ. ಹಾಗಾದ್ರೆ ಈಕೆಗೆ ಊಟವೂ ಕೊಡೋಣ, ಪಾತ್ರೆಯೂ ಚಿನ್ನದ್ದಾಗಿ ಬದಲಾಗಬಹುದು ಎಂದು ಹೆಂಗಸು, ದುರಾಲೋಚನೆ ಮಾಡುತ್ತಾಳೆ. ಹಾಗಾಗಿ ವೃದ್ಧೆಗೆ ಊಟ ಮಾಡಿಕೊಂಡು ಹೋಗುವಂತೆ ಹೇಳುತ್ತಾಳೆ. ಅದಕ್ಕೆ ವೃದ್ಧೆ ಬೇಡ ನನಗೆ ಹಸಿವಿಲ್ಲ. ನೀನು ಪ್ರವಚನಕ್ಕೆ ಹೋಗು ಎನ್ನುತ್ತಾಳೆ.
ಪ್ರವಚನಕ್ಕೆ ಹೋದ ಮಹಿಳೆಗೆ ಪ್ರವಚನದಲ್ಲಿ ಧ್ಯಾನವಿರಲಿಲ್ಲ. ಬದಲಾಗಿ ಮನದಲ್ಲಿ ಚಿನ್ನದ ಲೋಟೆಯ ಯೋಚನೆ ಇತ್ತು. ಆಕೆ ಅಲ್ಲಿ ಬಂದಿದ್ದ ಮಹಿಳೆಯರಿಗೂ ಈ ಬಗ್ಗೆ ಹೇಳಿದಳು. ಅವರಿಗೂ ಪ್ರವಚನದಲ್ಲಿ ಮನಸ್ಸಾಗಲಿಲ್ಲ. ಚಿನ್ನದ ಲೋಟೆಯ ಆಲೋಚನೆಯೇ ಬರತೊಡಗಿತ್ತು. ಬರು ಬರುತ್ತ ಪ್ರವಚನ ಕೇಳುವವರ ಸಂಖ್ಯೆ ಕಡಿಮೆಯಾಗಿತ್ತು.
ಇದಕ್ಕೆ ಕಾರಣವೇನೆಂದು ವಿಷ್ಣು, ತಾನುಳಿದ ಮನೆಯ ಯಜಮಾನನಲ್ಲಿ ಕೇಳಿದ. ಅದಕ್ಕೆ ಅವನು, ಗ್ರಾಮಕ್ಕೆ ಓರ್ವ ವೃದ್ಧೆ ಬಂದಿದ್ದಾಳೆ. ಆಕೆ ಯಾರ ಮನೆಯಲ್ಲಿ ನೀರು ಕುಡಿಯುತ್ತಾಳೋ, ಹಾಲು ಕುಡಿಯುತ್ತಾಳೋ, ಆ ಲೋಟೆ ಚಿನ್ನದ್ದಾಗುತ್ತದೆ. ತಟ್ಟೆಯಲ್ಲಿ ಊಟ ಮಾಡಿದ್ರೆ, ತಟ್ಟೆ ಚಿನ್ನದ್ದಾಗುತ್ತದೆ. ಎಲ್ಲರೂ ಆಕೆ ತಮ್ಮ ಮನೆಗೆ ಬರಲಿ ಎಂದು ಕಾಯುತ್ತಿದ್ದಾರೆ. ಹಾಗಾಗಿ ಯಾರೂ ಪ್ರವಚನಕ್ಕೆ ಬರುತ್ತಿಲ್ಲ ಎನ್ನುತ್ತಾನೆ. ಈ ಮಾತು ಕೇಳಿ, ಲಕ್ಷ್ಮೀ ದೇವಿ ಭೂಲೋಕಕ್ಕೆ ಬಂದಿದ್ದಾಳೆಂದು ವಿಷ್ಣುವಿಗೆ ಗೊತ್ತಾಗುತ್ತದೆ.
ಎಲ್ಲರ ಮನೆಗೂ ಹೋದ ಲಕ್ಷ್ಮೀ ದೇವಿ ಮಾತ್ರ ಈ ಯಜಮಾನನ ಮನೆಗೆ ಮಾತ್ರ ಬಂಂದಿರುವುದಿಲ್ಲ. ಹಾಗಾಗಿ ಯಜಮಾನನಿಗೆ ಇಲ್ಲಸಲ್ಲದ ಯೋಚನೆಗಳೆಲ್ಲ ಬರುತ್ತದೆ. ಎಲ್ಲರಿಗೂ ಅದೃಷ್” ತರುತ್ತಿರುವ ಈ ವೃದ್ಧೆ ಎಲ್ಲರ ಮನೆಗೆ ಹೋಗುತ್ತಿದ್ದಾಳೆ. ಆಹಾರ, ನೀರು, ಹಾಲು ಎಲ್ಲವನ್ನೂ ಸೇವಿಸಿ, ಅರಿಗೆಲ್ಲ ಚಿನ್ನದ ಪಾತ್ರೆ ನೀಡಿ ಆಶೀರ್ವದಿಸುತ್ತಿದ್ದಾಳೆ. ಆದರೆ ನನ್ನ ಮನೆಗೆ ಮಾತ್ರ ಬರುತ್ತಿಲ್ಲವಲ್ಲ. ನನ್ನ ಮನೆಗೆ ಜನ ಹುಡುಕಿ ಹುಡುಕಿ ಬರುತ್ತಾರೆ. ನನ್ನ ಮನೆ ಎಲ್ಲರ ಮನೆಗಿಂತ ದೊಡ್ಡದಾಗಿದೆ. ಇಲ್ಲಿ ಸೌಲಭ್ಯಗಳೂ ಚೆನ್ನಾಗಿದೆ. ಹಾಗಾಗಿಯೇ ಈ ಬ್ರಾಹ್ಮಣನೂ ಇಲ್ಲೇ ಬಂದು ಸೇರಿದ್ದಾರೆ. ಆದರೆ ಆ ವೃದ್ಧೆ ಮಾತ್ರ ಇಲ್ಲಿ ಬರುತ್ತಿಲ್ಲವಲ್ಲ. ಏಕಿರಬಹುದು ಎಂದು ಯೋಚಿಸುತ್ತಾನೆ.
ನಂತರ ಲಕ್ಷ್ಮೀ ದೇವಿ, ಯಜಮಾನನ ಮನೆಯ ಬಳಿ ಬರುತ್ತಾಳೆ. ಆಕೆಯನ್ನು ಕುರಿತು ಯಜಮಾನ, ಮಾತೆ ನೀವು ಎಲ್ಲರ ಮನೆಗೂ ಹೋಗಿದ್ದೀರಿ. ಆದ್ರೆ ನನ್ನ ಮನೆಗೆ ಮಾತ್ರ ಬರಲಿಲ್ಲ ಎನ್ನುತ್ತಾನೆ. ಆಗ ವೃದ್ಧೆ, ನಾನು ಮೊದಲು ನಿಮ್ಮ ಮನೆಗೆ ಬರುವವಳಿದ್ದೆ. ಆದ್ರೆ ನಿಮ್ಮ ಮನೆಯಲ್ಲಿ ಪ್ರವಚನ ಹೇಳುವ ಬ್ರಾಹ್ಮಣನಿದ್ದಾನಲ್ಲಾ. ಹಾಗಾಗಿ ನಾನು ನಿಮ್ಮ ಮನೆಗೆ ಬರಲಿಲ್ಲ. ನೀನು ಅವನನ್ನು ಮನೆಯಿಂದ ಓಡಿಸು, ನಂತರ ನಾನು ಬರುತ್ತೇನೆಂದು ಹೇಳುತ್ತಾಳೆ.
ತಕ್ಷಣ ಮನೆಗೆ ಬಂದ ಯಜಮಾನ, ಬ್ರಾಹ್ಮಣನನ್ನು ಕುರಿತು, ನೀವು ನನ್ನ ಮನೆಯಲ್ಲಿ ಉಳಿದಿದ್ದು ಸಾಕು. ಇನ್ನು ನೀವು ಧರ್ಮಶಾಲೆಗೆ ಹೋಗಿ. ನಾನು ಬೇರೆ ಅತಿಥಿಯನ್ನು ಬರ ಮಾಡಿಕೊಳ್ಳಬೇಕು ಎನ್ನುತ್ತಾನೆ. ಅಷ್ಟೊತ್ತಿಗೆ ಆ ಮನೆಗೆ ಬಂದ ವೃದ್ಧೆ, ಯಜಮಾನರೇ ನೀವು ಕೊಂಚ ಹೊರಗೆ ಹೋಗಿ ಎನ್ನುತ್ತಾಳೆ. ನಂತರ ವಿಷ್ಣುವಿನಲ್ಲಿ ಕುರಿತು, ನೋಡಿದಿರಾ ಪ್ರಭು, ಜನ ನನಗಾಗಿ ಪ್ರಾರ್ಥಿಸುತ್ತಾರೆ ಎಂದು ಹೇಳುತ್ತಾಳೆ. ಇದನ್ನು ನೋಡಿದ ವಿಷ್ಣು, ಹೌದು ದೇವಿ, ನಿನ್ನನ್ನೇ ಜನ ಹೆಚ್ಚು ಪೂಜಿಸುತ್ತಾರೆ ಎಂದು ಹೇಳುತ್ತಾನೆ. ನಂತರ ಲಕ್ಷ್ಮೀ ವಿಷ್ಣು ಸೇರಿ ವೈಕುಂಠಕ್ಕೆ ಹೋಗುತ್ತಾರೆ.
Discussion about this post