Mangaluru News: ಸದ್ಯ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿರುವ ಸುದ್ದಿ ಎಂದರೆ, ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ, ಈ ಮುನ್ನ ನಡೆದಿದ್ದ Praveen Nettaru ಹತ್ಯೆ ಸೇಡಿಗಾಗಿ ಇದೇ ಸುಹಾಸ್ ಮತ್ತು ಸಹಚರರು ಸೇರಿ, ಫಾಜಿಲ್ ಎಂಬಾತನನ್ನು 2022 ಜುಲೈ 28ರಂದು ಹತ್ಯೆ ಮಾಡಿದ್ದರು. ಅದಾದ ಬಳಿಕ ಜೈಲು ಸೇರಿದ್ದ ಸುಹಾಸ್, 1 ವರ್ಷ ಜೈಲಿನಲ್ಲಿದ್ದು, ಬಳಿಕ ಬೇಲ್ ಪಡೆದು ಬಂದು, ಜಾಲಿಯಾಗಿದ್ದ.
ಆದರೆ ಆತನನ್ನು ಮುಗಿಸಬೇಕು ಎಂದು ಸಜ್ಜಾಗಿದ್ದ ಗುಂಪು ನಿನ್ನೆ ಸುರತ್ಕಲ್ ಬಳಿ ಮೀನು ಮಾರುವ ಗಾಡಿಯಲ್ಲಿ ಅವಿತುಕುಳಿತು, ಸುಹಾಸ್ ಚಲಿಸುತ್ತಿದ್ದ ಗಾಡಿಗೆ ಡಿಕ್ಕಿ ಹ“ಡೆದಿದ್ದಾರೆ. ಗಾಡಿ ಡಿಕ್ಕಿಯಾದ ರಭಸಕ್ಕೆ ಸುಹಾಸ್ ಕಾರ್ ಸಲೂನ್ ಶಾಪ್ಗೆ ನುಗ್ಗಿದೆ. ಬಳಿಕ ನಡು ರಸ್ತೆಯಲ್ಲಿ ಸುಹಾಸ್ನನ್ನು ಮಚ್ಚು, ಲಾಂಗ್ಗಳಿಂದ ಹತ್ಯೆ ಮಾಡಲಾಗಿದೆ. ಬಳಿಕ ಸುಹಾಸ್ನನ್ನು ಸ್ಥಳೀಯರು ಮಂಗಳೂರಿನ ಎಜೆ ಆಸ್ಪತ್ರೆಗೆ ಸೇರಿಸಿದರೂ, ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಸುಹಾಸ್ ಹತ್ಯೆಗೆ ಹಲವರು ಸಾಥ್ ನೀಡಿದ್ದಾರೆ: ಹರೀಶ್ ಪೂಂಜಾ
ಈ ಬಗ್ಗೆ ಹಿಂದೂ ಸಂಘ’’ನೆ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು , ಬಿಜೆಪಿ ನಾಯಕರು ತೀವ್ರ ಆಕ್ರೋಶ ಹ“ರಹಾಕಿದ್ದಾರೆ. ಈ ಬಗ್ಗೆ ಮಾತನಾಡಿರುವ ಹರೀಶ್ ಪೂಂಜಾ, ಸುಹಾಸ್ ಬೇಲ್ ಪಡೆದು ಬಂದ ಬಳಿಕ, ಅವನಿಗೆ ಯಾವುದೇ ಶಸ್ತ್ರಾಸ್ತ್ರವನ್ನು ಇರಿಸಿಕ“ಳ್ಳಲು ಅವಕಾಶ ನೀಡಿರಲಿಲ್ಲ. ಪೋಲೀಸರು ಯಾವುದೇ ಶಸ್ತ್ರಾಸ್ತ್ರ ಇರಿಸಿಕ“ಳ್ಳಬಾರದು ಎಂದು ಹೇಳಿದ್ದರು. ಅವನ ಬಳಿ 1 ಕೋಲು ಇದ್ದಿದ್ದರೂ ಆತ ಬದುಕಿ ಉಳಿಯುತ್ತಿದ್ದನೆನೋ, ಇದೆಲ್ಲ ಪ್ಲಾನ್ ಮಾಡಿಯೇ ಮಾಡಿರುವುದು ಎಂದು ಪೂಂಜಾ ಆರೋಪಿಸಿದ್ದಾರೆ.
ಮಾರ್ಚ್ 31ರಂದು ನಡೆದಿತ್ತಾ ಸುಹಾಸ್ ಹತ್ಯೆಗೆ ಪ್ಲಾನ್..?
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿರುವ Post, ಹಲವು ಅನುಮಾನಗಳಿಗೆ ಎಡೆ ಮಾಡಿಕ` ಟ್ಟಿದೆ. ಏಕೆಂದರೆ Troll Mayadiaka ಎನ್ನುವ ಪೇಜಿನಲ್ಲಿ ಮಾರ್ಚ್ 31ಕ್ಕೆ ಸುಹಾಸ್ Photo ಹಾಕಿ, ಶೀಘ್ರದಲ್ಲೇ ಸೇಡು ತೀರಿಸಿಕ“ಳ್ಳುತ್ತೇವೆ ಅನ್ನೋ ರೀತಿ ಹೇಳಲಾಗಿತ್ತು. ಅಲ್ಲದೇ, ಸುಹಾಸ್ ಹತ್ಯೆ ನಡೆದ ಕೆಲ ನಿಮಿಷಗಳಲ್ಲೇ ಫಿನಿಶ್ ಎಂದು ಬರೆಯಲಾಗಿತ್ತು. ಹೀಗಾಗಿ ಇದು ತುಂಬ ದಿನಗಳಿಂದ ಪ್ಲಾನ್ ಮಾಡಿ, ಮಾಡಿದ ಹತ್ಯೆ ಅಂತಾ ನಿಖರವಾಗುತ್ತದೆ.
‘’Waiting for next wicket..’’
ಇನ್ನು ಹಲವು Instagram account ನಲ್ಲಿ ಈ ಹತ್ಯೆಯ ವೀಡಿಯೋವನ್ನು ಹಾಕಿ ಸಂಭ್ರಮಿಸಲಾಗಿದೆ. ಅಲ್ಲದೆ, ‘’Waiting for next wicket..’’ ಎಂದು ಬರೆಯಲಾಗಿದೆ.
ಜನಸಾಮಾನ್ಯರನ್ನು ರಕ್ಷಿಸಲು ಆಗದಿದ್ದರೆ ನಿಮ್ಮ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು?
ರಾಜ್ಯದಲ್ಲಿ ತುಷ್ಟೀಕರಣ ಸರ್ಕಾರದಿಂದಾಗಿ ಕಾನೂನು ಸುವ್ಯವಸ್ಥೆ ನಶಿಸುತ್ತಿದೆ. ಮತಾಂಧರಿಂದ ಹಿಂದೂಗಳ ಹತ್ಯೆ, ಹಿಂದೂಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಎಲ್ಲೆ ಮೀರಿದೆ. ಹಿಂದೂಗಳು ರಕ್ಷಣೆ ಪಡೆದು ಓಡಾಡುವಂತಹ ವಿಷಮ ಪರಿಸ್ಥಿತಿ ಎದುರಾಗಿದೆ. ನಿನ್ನೆ ರಾತ್ರಿ ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಭಯಾನಕವಾಗಿದೆ. ಅಮಾನವೀಯ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರೇ, ಭಯೋತ್ಪಾದನಾ ವಿಷಯದಲ್ಲಿ ಶಾಂತಿದೂತರಾಗಲು ಹೊರಟ ತಾವು, ರಾಜ್ಯದಲ್ಲಿ ಏಕೆ ಅದನ್ನು ಅನುಸರಿಸುತ್ತಿಲ್ಲ? ತಮ್ಮ ಆಡಳಿತದಲ್ಲಿ ಶಾಂತಿ ಸುವ್ಯವಸ್ಥೆ ಅನ್ನೋದು ಸಂಪೂರ್ಣ ನೆಲಕಚ್ಚಿದೆ. ಜನಸಾಮಾನ್ಯರನ್ನು ರಕ್ಷಿಸಲು ಆಗದಿದ್ದರೆ ನಿಮ್ಮ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು? ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
ಇದು ಕಾಂಗ್ರೆಸ್ನ ಪ್ರೋತ್ಸಾಹವೇ..? ಅಥವಾ ನಿರ್ಲಕ್ಷ್ಯವೇ..?
ಮಂಗಳೂರಿನಲ್ಲಿ ನಡೆದ ಕೋಮು ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಕೊಲೆಯ ಘಟನೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಡಿ ಕಾನೂನು ಮತ್ತು ಸುವ್ಯವಸ್ಥೆ ದಿನೇ ದಿನೇ ದುರ್ಬಲಗೊಳ್ಳುತ್ತಿದೆ ಎಂದು ತೋರಿಸುತ್ತದೆ. ರಾಜ್ಯದ ಸುರಕ್ಷತೆ ಅಪಾಯದಲ್ಲಿರುವುದು ತುಂಬಾ ದುರದೃಷ್ಟಕರ. ಕೋಮು ಹಿಂಸಾಚಾರಕ್ಕೆ ಕಾಂಗ್ರೆಸ್ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆಯೇ ಅಥವಾ ಅವರನ್ನು ನಿರ್ಲಕ್ಷಿಸುತ್ತಿದೆಯೇ? ಎಂದು ನಿಖಿಲ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಇಂಥ ಘಟನೆ ನಡೆಯುತ್ತಿದೆ- ಪ್ರೀತಂ
ಕಾಶ್ಮೀರದಲ್ಲಿ ನೆಡೆದ ಹಿಂದೂಗಳ ಹತ್ಯಾಕಾಂಡ ಇನ್ನೂ ಹಸಿಯಾಗಿರುವಾಗಲೇ ನಮ್ಮ ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನೊಬ್ಬನನ್ನು ನಡುರಸ್ತೆಯಲ್ಲೇ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಗೆ ಹಿಡಿದ ಕನ್ನಡಿ. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಾಗಿ ಈ ಮತಾಂಧರು, ಗೂಂಡಾಗಳು ಯಾವುದೇ ಭಯವಿಲ್ಲದೇ ನಿರಂತರ ಕೊಲೆ ಸುಲಿಗೆ, ಅತ್ಯಾಚಾರದಂತಹ ಕುಕೃತ್ಯಗಳನ್ನುನಡೆಸುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದಲ್ಲಿ ಪದೇಪದೇ ಹಿಂದೂಗಳ ಕೊಲೆಗಳು, ಹಲ್ಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ದಾಳಿಯಲ್ಲಿ ಹತ್ಯೆಯಾದ ಮೃತ ಸುಹಾಸ್ ಶೆಟ್ಟಿ ಆತ್ಮಕ್ಕೆ ಶಾಂತಿ ದೊರೆಯಲಿ, ಗಾಯಗೊಂಡ ಮತ್ತೊಬ್ಬ ಹಿಂದೂ ಕಾರ್ಯಕರ್ತ ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರೀತಂ ಗೌಡ ಹೇಳಿದ್ದಾರೆ.
ಹಿಂದುತ್ವ ಪ್ರತಿಪಾದಿಸುವವರಿಗೆ ಕರ್ನಾಟಕ ಅಸುರಕ್ಷಿತವಾಗಿದೆ: ಯತ್ನಾಳ್
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿರುವುದು ಆಘಾತ ಹಾಗೂ ದಿಗ್ಭ್ರಮೆ ತಂದಿದೆ. ಸುಹಾಸ್ ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ಆತನನ ಮೇಲೆ ಹಲ್ಲೆ ಮಾಡಿರುವುದು ಧೃಡಪಟ್ಟಿದೆ. ಹಿಂದೂ ಕಾರ್ಯಕರ್ತರು, ಹಿಂದುತ್ವವನ್ನು ಪ್ರತಿಪಾದಿಸುವವರಿಗೆ ಕರ್ನಾಟಕ ಅಸುರಕ್ಷಿತವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಈ ರೀತಿಯಾದ ದಾರುಣ ಘಟನೆಗಳು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಯತ್ನಾಳ್ ಹೇಳಿದ್ದಾರೆ.
ಅಲ್ಲದೇ, ಈ ಬಗ್ಗೆ Tweet ಮಾಡಿರುವ ಯತ್ನಾಳ್, ಕಳೆದ 24 ಗಂಟೆಗಳಲ್ಲಿ: 1] ಗದಗದಲ್ಲಿ ಸಮೀರ್, ಉಮರ್ ಹಾಗೂ ಜಾಕಿರ್ ಎಂಬುವವರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ 2] ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿದ್ದಾರೆ ಗೃಹ ಇಲಾಖೆ ಬದುಕಿದೆಯೋ, ಸತ್ತಿದೆಯೋ ಎಂದು ಜನರೇ ಹೇಳಬೇಕು. ಬ್ಯಾಂಕ್ ದರೋಡೆಕೋರರಿಗೆ, ಅತ್ಯಾಚಾರಿಗಳಿಗೆ, ಕೊಲೆಗಡುಕರು ಸಿಕ್ಕರೆ ಅವರಿಗೆ ಯಾವುದೇ ಮುಲಾಜು ತೋರದೆ ಅಲ್ಲೇ ಎನ್ಕೌಂಟರ್ ಮಾಡಿ ಪ್ರಕರಣವನ್ನು ಮುಗಿಸಬೇಕೇ ಹೊರತು ಅವರಿಗೆ ಯಾವುದೇ ಕನಿಕರ, ಕಾನೂನು ನೆರವು ನೀಡಬಾರದು. ಸರ್ಕಾರ ಕೊಲೆಗಡುಕರು, ಅತ್ಯಾಚಾರಿಗಳಿಗೆ ನಡುಕ ಸೃಷ್ಟಿಸಬೇಕು. ಈಗಿರುವ ಗೃಹ ಮಂತ್ರಿಗಳು ಸಮಜಾಯಿಷಿ ನೀಡುವಲ್ಲಿ, ಮಾಹಿತಿ ತರಿಸಿಕೊಳ್ಳುವಲ್ಲಿ, ಅಸಂಬದ್ಧ ಓತ ಪ್ರೋತ ಹೇಳಿಕೆ ನೀಡುವಲ್ಲಿ ಇರುವುದರಿಂದಲೇ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾರು ಈ ಸುಹಾಸ್ ಶೆಟ್ಟಿ..?
ಸುಹಾಸ್ ಹಿಂದೂ ಸಂಘ’’ನೆ ಕಾರ್ಯಕರ್ತನಾಗಿದ್ದ. ಈ ಹಿಂದೆ ಭಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ. ಸುಹಾಸ್ ವಿರುದ್ಧ 5 ಕೇಸ್ಗಳಿದ್ದವು, ಹತ್ಯೆ ಕೇಸ್ , ಹತ್ಯೆ ಪ್ರಯತ್ನನದ ಕೇಸ್ಗಳಿದ್ದವು. ಫಾಜೀಲ್ ಕೇಸ್ನಲ್ಲಿ ಸುಹಾಸ್ ಎ1 ಆರೋಪಿಯಾಗಿದ್ದ. ಬಂಟ್ವಾಳದ ನಿವಾಸಿಯಾಗಿರುವ ಸುಹಾಸ್ ಅಪ್ಪ ಅಮ್ಮನಿಗೆ ಓಬ್ಬನೇ ಮಗ. ಅಲ್ಲದೇ, ಸುಹಾಸ್ ದುಡಿದರಷ್ಟೇ ಮನೆಗೆ ಅನ್ನ. ಅಪ್ಪ ಅಮ್ಮ ಅನಾರೋಗ್ಯಕ್ಕೀಡಾಗಿದ್ದಾರೆ. ಇದೀಗ ಇರುವ ಓರ್ವ ಮಗನನ್ನು ಕಳೆದುಕ“ಂಡ ಸುಹಾಸ್ ಅಪ್ಪ ಅಮ್ಮ ಅನಾಥವಾಗಿದ್ದಾರೆ.
Discussion about this post