ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪಾವರ್ ಅವರ ಸೋದರನ ಮಗ ಅಜಿತ್ ಪವಾರ್ ಸೋದರಿಗೆ ಸಂಬಂಧಿಸಿದ ಒಂದು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ (ಐಟಿ) ವಶಪಡಿಸಿಕೊಂಡಿದೆ. ಈ ಆಸ್ತಿ ಜತೆಗೆ ಅಜಿತ್ ಪವಾರ್ ಸಂಬಂಧ ಇದೆ ಎನ್ನಲಾಗಿದೆ. ಮುಂಬೈನ ಪ್ರತಿಷ್ಠಿತ ನಾರಿಮನ್ ಪಾಯಿಂಟ್ನಲ್ಲಿನ ಒಂದು ಆಸ್ತಿಯೂ ವಶಪಡಿಸಿಕೊಂಡ ಪಟ್ಟಿಯಲ್ಲಿ ಇದೆ.
ಆದಾಯ ತೆರಿಗೆ ಇಲಾಖೆ ಕಳೆದ ತಿಂಗಳು ಪವಾರ್ ಅವರ ಸೋದರಿ ಮನೆ ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು. ಆದರೆ ತಾವು ಸಂಬಂಧಹೊಂದಿರುವ ಎಲ್ಲ ಉದ್ದಿಮೆಗಳ ಲೆಕ್ಕಪತ್ರ ಸರಿಯಾಗಿದೆ. ಕಾಲಕಾಲಕ್ಕೆ ತೆರಿಗೆ ಪಾವತಿಸಲಾಗುತ್ತಿದೆ. ರಾಜ್ಯ ಹಣಕಾಸು ಮಂತ್ರಿಯಾಗಿರುವುದರಿಂದ ತೆರಿಗೆ ಪಾವತಿಸುವ ಬಗ್ಗೆ ನಾನು ಜಾಗೃತನಾಗಿರುವೆ ಎಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ವೇಳೆ ಪವಾರ್ ಹೇಳಿದ್ದರು.
ನನ್ನ ಸೋದರಿ ಮದುವೆಯಾಗಿಯೇ 35 ವರ್ಷದ ಮೇಲಾಗಿದೆ. ಅವಳದ್ದು ಬೇರೆಯೆ ಕುಟುಂಬ, ಅವರದ್ದೇ ಆದ ಉದ್ದಮಿಗಳಿವೆ. ಈಗ ಅವುಗಳ ಆಸ್ತಿಯ ಮೇಲೆ ದಾಳಿ ನಡೆಸಿ, ಅದಕ್ಕೆ ನನ್ನ ನಂಟು ಕಲ್ಪಿಸಿರುವುದು ಬೇಸರ ತಂದಿದೆ. ರಾಜಕೀಯ ದುರುದ್ದೇಶದಿಂದ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಜಿತ್ ಪಾವರ್ ಆಪಾದಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್, ಸೋದರನ ಮಕ್ಕಳಿಗೆ ಸಂಬಂಧಿಸಿ ಆಸ್ತಿ ಮೇಲೆ ಆದಾಯ ತೆರಿಗೆ ಇಲಾಖೆಯನ್ನು ಬಿಜೆಪಿ ಛೂ ಬಿಟ್ಟಿದೆ. ಆದರೆ, ನಾವು ಇಂತಹ ಅನಪೇಕ್ಷಿತ ಅತಿಥಿಗಳಿಗೆ ಹೆದುರುವುದಿಲ್ಲ. ನನಗೂ 2019ರಲ್ಲಿ ಜಾರಿ ನಿದರ್ದೇಶನಾಲಯದಿಂದ ನೋಟಿಸ್ ಬಂದಿತ್ತು. ಜನರು ಇದನ್ನೆಲ್ಲ ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
Thousand Crore Rupees Worth Assets Allegedly Linked To Maharashtra DCM Seized
ಇದನ್ನು ಓದಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಬಂಧನ
ಇದನ್ನು ಓದಿ: ಉತ್ತರಪ್ರದೇಶದ ರಿಕ್ಷಾ ಎಳೆಯುವವನಿಗೂ ಬಂತು 3 ಕೋಟಿ ರೂಪಾಯಿಗಳ ಆದಾಯ ತೆರಿಗೆ ನೋಟಿಸ್
Discussion about this post