ಕರ್ನಾಟಕದ ಒಂದು ಅಡಿಯನ್ನೂ ಬಿಟ್ಟುಕೊಡಲ್ಲ. ಕರ್ನಾಟಕದ ಹನಿ ನೀರನ್ನೂ ಬಿಟ್ಟುಕೊಡಲ್ಲ
ಬೆಳಗಾವಿ: ಸೂಕ್ಷ್ಮ ವಿಚಾರಗಳನ್ನು ಮರೆಸುವ ಪ್ರಯತ್ನ ಮಾಡ್ತಾರೆ. ನಮ್ಮದು ಭಾರತೀಯ ಜನತಾ ಪಕ್ಷ, ಪ್ರಾರಂಭದಲ್ಲೇ ನಾನು ಹೇಳಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನರೇಂದ್ರಮೋದಿಯವರ ನಾಯಕತ್ವದಲ್ಲಿ ಸುಮಾರು ೨೨, ೨೩ ರಾಜ್ಯಗಳಲ್ಲಿ ಬಿಜೆಪಿ ಅಸ್ತಿತ್ವದಲ್ಲಿದೆ. ನಾವು ಜಾತಿ, ಮತ ನೋಡಿ ಬಂದಿಲ್ಲ, ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಜನ ಆಶೀರ್ವಾದ ಮಾಡಿದಾರೆ. ಇಲ್ಲೂ ಅದೆ ಆಗಿದೆ. ಬೆಳಗಾವಿಲಿ ಮಹಾಜನ್ ವರದಿನೇ ಅಂತಿಮ ಎಂದು ಉಪಮುಖ್ಯಮಂತ್ರಿ, ಬೆಳಗಾವಿ ಉಸ್ತುವಾರಿ ಸಚಿವರೂ ಆದ ಗೋವಿಂದ ಕಾರಜೋಳ ಅವರು ಮಾಧ್ಯಮಗಳಿಗೆ ತಿಳಿಸಿದರು.
ಇದೇ ವೇಳೆ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಸಂಘ-ಸಂಸ್ಥೆಗಳು ಯಾವುದೇ ಠರಾವುಗಳನ್ನು ಮಾಡಿದರೆ, ಅದಕ್ಕೆ ಕವಡೆ ಕಿಮ್ಮತ್ತು ಇರೋದಿಲ್ಲ. ಯಾವ ಭಾಗವನ್ನ ಯಾವ ರಾಜ್ಯಕ್ಕೆ ಸೇರಿಸೋದು ಎಂಬ ನಿರ್ಣಯ ಅವರೇ ಮಾಡ್ತಾರೆ. ಬೆಳಗಾಗಿ ವಿಚಾರದಲ್ಲಿ, ಕರ್ನಾಟಕದ ಗಡಿ ವಿಚಾರದಲ್ಲಿ ಮಹಾಜನ್ ವರದಿನೇ ಅಂತಿಮ. ಅದರಲ್ಲಿ ಯಾವುದೇ ಬದಲಾವಣೆ ಒಪ್ಪೋದಿಲ್ಲ ಎಂದು ಹೇಳಿದರು.
ಅದರಲ್ಲಿ ಕೆಲವರು ಇರ್ತಾರೆ, ಶಾಂತಿ ಕದಡುವುದೇ ಅವರ ಕೆಲಸ ಎಂದು ಅವರು ಉಲ್ಲೇಖಿಸಿದರು.
ನಾವು ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ. ಬೆಳಗಾವಿ ವಿಚಾರದಲ್ಲಿ, ಕರ್ನಾಟಕ ಗಡಿ ವಿಚಾರದಲ್ಲಿ ಮಹಾಜನ್ ವರದಿನೇ ಅಂತಿಮ ಎಂದು ಬೆಳಗಾವಿಯಲ್ಲಿ ಆಯೋಜಿಸಿದ ಪತ್ರಕರ್ತರ ಸಮ್ಮೇಳನದಲ್ಲಿ ಕಳಸಾ ಬಂಡೂರಿ ಪ್ರಶ್ನೆಗೆ ಅಟಲ್ ಕಟಾಕ್ಷ ರೀತಿಯ ಉತ್ತರ ಕೊಟ್ಟು ಹಳೆ ಸುದ್ದಿಗೆ ಹೊಸ ರೂಪ ಕೊಟ್ಟರು ಉಸ್ತುವಾರಿ ಸಚಿವರು.
ಇದನ್ನು ಎರಡು ಸಲ ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ೨೦೦೬ರಲ್ಲಿ ಸರ್ವಾನುಮತದಿಂದ ಠರಾವು ಅಂಗೀಕಾರ ಮಾಡಿದ್ದಾರೆ. ಇದರಲ್ಲಿ ಕೆದಕುವಂತ ಪ್ರಯತ್ನ ಮಾಡದು ಬೇಡ.
ಕೆಲವರದ್ದು ಶಾಂತಿ ಕದಡುವುದೇ ಕೆಲವರ ಕೆಲಸ. ಕರ್ನಾಟಕದ ಒಂದು ಅಡಿಯನ್ನೂ ಬಿಟ್ಟುಕೊಡಲ್ಲ. ಕರ್ನಾಟಕದ ಹನಿ ನೀರನ್ನೂ ಬಿಟ್ಟುಕೊಡಲ್ಲ ಇದೇ ವೇಳೆ ಖಡಾಖಂಡಿತವಾಗಿ ಕಾರಜೋಳ ಅವರು ಹೇಳಿದರು.

























Discussion about this post