ಕನ್ನಡನಾಡಿ ಸುದ್ದಿಜಾಲ: ನಟ, ನಿರ್ದೇಶಕ ಉಪೇಂದ್ರ ಅವರು ಸಿನೆಮಾ ಜೊತೆಗೆ ಪ್ರಜಾಕೀಯ ಪಕ್ಷ ಚಟುವಟಿಕೆಯಲ್ಲೂ ಫುಲ್ ಬ್ಯುಸಿಯಾಗಿದ್ದಾರೆ. ನಾಳೆ ಅಂದರೆ ಸೆ. ೧೮ ಅವರ ಹುಟ್ಟಿದ ದಿನ, ಆದ್ರೂ ಅವರು ಬೆಂಗಳೂರಿನಲ್ಲಿ ಇರೋದಿಲ್ವಂತೆ ಅನ್ನೋದನ್ನ ಟ್ವಿಟ್ ಮಾಡಿ ಅಭಿಮಾನಿಗಳಿಗೆ ಫುಲ್ ಬೋರ್ ಹೊಡೆಸಿದ್ದಾರೆ.
ಸಿನೆಮಾ ನಟರ ಹುಟ್ಟುಹಬ್ಬ ಅಂದ್ರೆ ಅಭಿಮಾನಿಗಳು ದಂಡುಗಟ್ಟಲೆ ಬಂದು ಕೇಕ್ ತಾವೇ ತಂದು ಖುಷಿ ಕೊಡೋದು ಕಾಮನ್ ಆಗಿದ್ದರೂ ಸಹ ಕೊರೊನ ಹಾವಳಿಯಿಂದ ನಟರು ಸಹ ಗಾಬರಿಯಾಗಿ ಅಭಿಮಾನಿಗಳನ್ನ ದೂರ ಇಡ್ತಾ ಇರೋದು ಸಹ ಈಗೀಗ ಇನ್ನೂ ಕಾಮನ್ ಆಗ್ತಾ ಇದೆ.
ತಾವು ಬೆಂಗಳೂರು ಮನೆಲಿ ಇರಲ್ಲ, ಅದಕ್ಕೆ ಅಭಿಮಾನಿಗಳು ತಾವು ಇರೋ ಜಾಗದಲ್ಲೆ ಜನ್ಮದಿನ ಸರಳವಾಗಿ ಆಚರಿಸಿ ಅಂತ ಉಪ್ಪಿ ಟ್ವಿಟ್ಟರ್ ನಲ್ಲಿ ಕೇಳಿಕೊಂಡಿದ್ದಾರೆ.
ಓಂ, ಶ್ ನಂತಹ ಹಿಟ್ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಚೊಚ್ಚಲ ಹೆಜ್ಜೆ ಹಾಕಿದ ಉಪೇಂದ್ರ ಮತ್ತೆ ತಿರುಪತಿ ನಾಮದೊಂದಿಗೆ ಪ್ರತ್ಯಕ್ಷರಾಗಿದ್ದಾರೆ.
ಸದ್ಯದಲ್ಲೇ ಮತ್ತೊಂದು ಸಿನೆಮಾ ನಿರ್ದೇಶನಕ್ಕೆ ಕೈಹಾಕುವ ತಯಾರಿಯಲ್ಲಿರೋ ನಟ, ನಿರ್ದೇಶಕ ಉಪೇಂದ್ರ ಅವರು ಅಭಿಮಾನಿಗಳಿಗಾಗಿ ಚಂದನವನದಲ್ಲಿ ಹೊಸದಾಗಿ ಯಾವ ರೀತಿ ಚಿತ್ರ ಕೊಡ್ತಾರೆ ಎಂದು ಕಾದು ನೋಡಬೇಕು.
Discussion about this post