Sandalwood News: ಸಾವು ಯಾರಿಗೆ ಯಾವ ರೀತಿ ಬರುತ್ತದೆ ಅಂತಾ ಹೇಳಲು ಸಾಧ್ಯವಿಲ್ಲ. ನಿನ್ನೆ ರಾತ್ರಿ ಖುಷಿ ಖುಷಿಯಿಂದ ಕುಣಿದವರು ಕೂಡ, ಇಂದು ಬೆಳಿಗ್ಗೆ ಇಲ್ಲ ಅಂತಾಗಬಹುದು. ಅಂತಹುದೇ ಘ’’ನೆ ನಡೆದಿದ್ದು, ಕಾಮಿಡಿ ಕಿಲಾಡಿ ಖ್ಯಾತಿಯ, 34 ವರ್ಷ ವಯಸ್ಸಿನ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ವಿಧಿವಶ
ಮೆಹೆಂದಿ ಕಾರ್ಯಕ್ರಮದಲ್ಲಿದ್ದಾಗ ಹೃದಯಾಘಾತ
ನಿನ್ನೆ ರಾತ್ರಿ ಉಡುಪಿಯ ಕಾರ್ಕಳದಲ್ಲಿ ಆಪ್ತರ ಮೆಹೆಂದಿ ಕಾರ್ಯಕ್ರಮದಲ್ಲಿ ರಾಕೇಶ್ ಭಾಗವಹಿಸಿದ್ದು, ಈ ವೇಳೆ ಕಾರ್ಯಕ್ರಮದಲ್ಲೇ ರಾಕೇಶ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಅವರು ಅದಾಗಲೇ ಹೃದಾಘಾತದಿಂದ ಮೃತರಾಗಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ.
ಎಲ್ಲರನ್ನೂ ನಕ್ಕು ನಗಿಸಿದ್ದ ನಟ ಇನ್ನು ನೆನಪು ಮಾತ್ರ
ಟ್ಯಾಲೆಂಟೆಡ್ ಹುಡುಗನ ಜೀವ ತೆಗೆದ ಲೋ ಬಿಪಿ ಸಮಸ್ಯೆ
ರಾಕೇಶ್ಗೆ ಲೋ ಬಿಪಿಯಾಗಿ, ಹೃದಯಾಘಾತವಾಗಿದೆ. ರಾಕೇಶ್ ಮೇ 11ರಂದು ಕಾಂತಾರ-1 shooting ಮುಗಿಸಿ, ಆಪ್ತರ ಜತೆ ಉಡುಪಿಯಲ್ಲಿ ಮೆಹೆಂದಿ ಕಾರ್ಯಕ್ರಮಕ್ಕೆ ಹೋದಾಗ ಹೀಗಾಗಿದೆ. ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕ“ಂಡಿದ್ದು, ಸುದ್ದಿ ಕನ್ಫರ್ಮ್ ಮಾಡಿದ್ದಾರೆ.
ರಾಕೇಶ್ ಸಾವಿಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಚಿಕ್ಕ ವಯಸ್ಸಿಗೆ ರಾಕೇಶ್ ಕಾಮಿಡಿ ಕಿಲಾಡಿಗಳು ವಿನ್ನರ್ ಆಗಿದ್ದರು. ಹೀಗೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದ Talented ಹುಡುಗ ಇನ್ನಿಲ್ಲವೆಂದು ಹಲವರು ಸಂತಾಪ ಸೂಚಿಸಿದ್ದಾರೆ.
ಕಾಮಿಡಿ ಕಿಲಾಡಿಯಲ್ಲಿ ನಟಿ ರಕ್ಷಿತಾ ಜಡ್ಜ್ ಆಗಿದ್ದು. ಅವರು ಕೂಡ ರಾಕೇಶ್ ಕಾಮಿಡಿಯನ್ನು ಹೆಚ್ಚು ಮೆಚ್ಚಿಕ“ಂಡವರಾಗಿದ್ದರು. ರಕ್ಷಿತಾ ಕೂೠ ರಾಕೇಶ್ ಸಾವಿನ ಬಗ್ಗೆ ಕಂಬನಿ ಮಿಡಿದಿದ್ದು, ರಾಕೇಶ್ ಬಳಿ ಇನ್ಯಾವಾಗಲೂ ಮಾತನಾಡಲು ಸಾಧ್ಯವಿಲ್ಲ ಎನ್ನುವುದು ಒಪ್ಪಿಕ“ಳ್ಳಲು ಸಾಧವಾಗುತ್ತಿಲ್ಲ, ಕಾಮಿಡಿ ಕಿಲಾಡಿಗಳು ನನ್ನ ಮನಸ್ಸಿಗೆ ಹತ್ತಿರವಾದ ಶೋ. ಈ ಶೋನ ಸ್ಪರ್ಧಿ ರಾಕೇಶ್ ಉತ್ತಮ ವ್ಯಕ್ತಿಯಾಗಿದ್ದರು. ರಾಕೇಶ್ ಯಾವಾಗಲೂ ನಮ್ಮ ಮನಸ್ಸಿನಲ್ಲಿ ಇರುತ್ತಾರೆ. ನಿಮ್ಮನ್ನು ಮತ್ತು ನಿಮ್ಮ ನಗುವನ್ನು ನಾವು ಯವಾಗಲೂ ಮಿಸ್ ಮಾಡಿಕ“ಳ್ಳುತ್ತೇವೆ ಎಂದು ರಕ್ಷಿತಾ ಬರೆದುಕxಡಿದ್ದಾರೆ.
ರಾಕೇಶ್ ಕಾಮಿಡಿ ಕಿಲಾಡಿ ವಿನ್ನರ್ ಆದ ಬಳಿಕ, ಅವರಿಗೆ ಕನ್ನಡ ಮತ್ತು ತುಳು ಸಿನಿಮಾಗಳಲ್ಲಿ ಆಫರ್ ಬಂದಿತ್ತು. ಕನ್ನಡದ ಪೈಲ್ವಾನ್. ಎಂಥಾ ಲೋಕವಯ್ಯ ಸಿನಿಮಾದಲ್ಲಿ ಮತ್ತು ತುಳುವಿನ ಅಮ್ಮೇರ್ ಪೋಲೀಸ್, ಪೆಟ್ಕಮ್ಮಿ ಸಿನಿಮಾದಲ್ಲಿ ರಾಕೇಶ್ ನಟಿಸಿದ್ದಾರೆ.
ಆದರೆ ಇದಕ್ಕೂ ಮುನ್ನ ರಾಕೇಶ್ಗೆ ಸಿನಿಮಾ ರಂಗದ ನಂಟಿತ್ತು. ಅವರು ತಮ್ಮ ನಟನಾ ಪಯಣ ಆರಂಭಿಸಿದ್ದು ಚೈತನ್ಯ ಕಲಾವಿದರು ನಾಟಕ ತಂಡದ ಮೂಲಕ. 2014ರಲ್ಲಿ ತುಳುವಿನ ಖಾಸಗಿ ಚಾನೆಲ್ನಲ್ಲಿ ಕಡ್ಲೆ ಬಜಿಲ್ ಎಂಬ ತುಳು ರಿಯಾಲಿಟಿ ಶೋನಲ್ಲಿ ರಾಕೇಶ್ ಭಾಗವಹಿಸಿದ್ದರು. ಬಳಿಕ ಜಿ ಕನ್ನಡದ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಮೂಲಕ ಇಡೀ ಕರ್ನಾಟಕಕ್ಕೆ ರಾಕೇಶ್ ಪರಿಚಯವಾದರು. ಇದೀಗ ಕಾಂತಾರದಲ್ಲೂ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ದುರಾದೃಷ್ಟವಶಾತ್ ರಾಕೇಶ್ ನಿಧನರಾಗಿದ್ದಾರೆ.
ರಾಕೇಶ್ ಈ ಮೂಲಕ ತಾಯಿ ಮತ್ತು ತಂಗಿಯನ್ನು ಅಗಲಿದ್ದಾರೆ. ರಾಕೇಶ್ ತಂದೆ 2 ವರ್ಷದ ಹಿಂದೆ ತೀರಿಹೋಗಿದ್ದರು. ಹಾಗಾಗಿ ಇಡೀ ಮನೆ ಜವಾಬ್ದಾರಿ ರಾಕೇಶ್ ಮೇಲಿತ್ತು. ಆದರೆ ಇದೀಗ ರಾಕೇಶ್ ಕೂಡ ವಿಧಿವಶರಾಗಿದ್ದು, ಮನೆಗಿದ್ದ ಒಬ್ಬ ಮಗನೂ ಇಲ್ಲವಾಗಿದ್ದಾನೆ.
Discussion about this post