ನವದೆಹಲಿ: ಈ ವೇಗದ ಯುಗದಲ್ಲಿ ದೇಹಾರೋಗ್ಯ ಕ್ಷೀಣಿಸುತ್ತದೆ. ಮಾನವನಿಗೆ ಕೆಲಸ ಕಾರ್ಯದ ವೇಳೆಯಲ್ಲಿ ದೊರೆಯುತ್ತಿದ್ದ ವ್ಯಾಯಮ ಈಗ ಇಲ್ಲವಾಗಿದೆ. ಆದ್ದರಿಂದ ವ್ಯಾಯಮಕ್ಕಾಗಿಯೇ ಸಮಯ ನಿಗದಿ ಮಾಡುವ ಜರೂರತ್ತು ಉದ್ಭವಿಸಿದೆ. ಇಂಥ ವ್ಯಾಯಾಮ ಬೆಳಗ್ಗೆ ಅಥವಾ ಸಂಜೆಯ ಹೊತ್ತಿನಲ್ಲಿ ಹೆಚ್ಚಾಗಿ ಸಾಗುತ್ತದೆ. ಆದರೆ, ತಜ್ಞರು ಊಟವಾದ ಮೇಲೆ ಒಂದಿಷ್ಟು ದೂರ ನಡೆಯುವುದು ಉತ್ತಮ ಎಂಬ ಸಲಹೆಯನ್ನು ನೀಡುತ್ತಾರೆ. ಏಕೆಂದರೆ ಊಟವಾದ ಬಳಿಕ “ದಿಂರಂಗಾ’ ಎಂದು ಕಾಲುಚಾಚಿ ಕುಳಿತುಕೊಳ್ಳುವುದರಿಂದ ಬೊಜ್ಜು ಹೆಚ್ಚುತ್ತದೆ. ಇದರಿಂದ ಹೃದಯಬೇನೆ, ಹೆಚ್ಚಾದ ಕೊಬ್ಬುನಿಂದ ಸಕ್ಕರೆ ಅಂಶ ವೃದ್ಧಿಸಿ ಮಧುಮೇಹಕ್ಕೆ ತುತ್ತಾಗಬೇಕಾಗುತ್ತದೆ ಎಂಬುದು ವೈದ್ಯರ ಕಾಳಜಿ.
ಈಗಾಗಲೇ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಯಿಂದ ಬಳಲುತ್ತಿರುವವರೂ ಊಟ ವಾದ ಮೇಲೆ ಅದರಲ್ಲೂ ರಾತ್ರಿ ಊಟ ವಾದ ಮೇಲೆ ಮನೆ ಮುಂದೆ ಒಂದಿಷ್ಟು ದೂರ ನಡೆದಾಡಬೇಕು. ಇದರಿಂದ ಪಚನ ಶಕ್ತಿ ವೃದ್ಧಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಆಹಾರ ಸೇವಿಸಿದ ನಂತರ ವಿರಮಿಸಿದೆ ಕೆಲಸದಲ್ಲಿ ತೊಗಡಬೇಕು. ಇದು ದೈಹಿಕವಾಗಿ ಶ್ರಮದಾಯವಾಗಿರಬೇಕು. ಇದರಿಂದ ಹೊಟ್ಟೆಯಲ್ಲಿ ಶೇಖರವಾಗುವ ಆಹಾರ ಬೇಗನೆ ಸಣ್ಣ ಕರುಳಿಗೆ ಸಾಗುತ್ತದೆ. ಇದರಿಂದ ಪಚನ ಕ್ರಿಯೆ ವೇಗಗೊಳ್ಳುತ್ತದೆ. ತಿಂದ ಆಹಾರ ಅರಗುವುದರಿಂದ ಬೊಜ್ಜು ಬರುವುದಿಲ್ಲ, ರಕ್ತಕ್ಕೆ ಹೋಗುವ ಇನ್ಸುಲಿನ್ ನಿಯಂತ್ರಣಕ್ಕೆ ಒಳಪಟ್ಟು ಸಕ್ಕರೆ ಕಾಯಿಲೆ ದೂರವಾಗುತ್ತದೆ ಅಥವಾ ನಿಯಂತ್ರಣಕ್ಕೆ ಬರುತ್ತದೆ. ಜತೆಗ ಹೊಟ್ಟೆಯುಬ್ಬರ, ಅಪಾನ ವಾಯು ಪೀಡನೆ, ಪಿತ್ತ ನಿವಾರಣೆ ಆಗುತ್ತದೆ. ಊಟವಾದ ಮೇಲೆ 30 ನಿಮಿಷ ನಡೆದಾಡುವುದರಿಂದ ಮಲಬದ್ಧತೆ ದೂರವಾಗುತ್ತದೆ.
ಆಹಾರ ಸೇವನೆಯ ನಂತರ ವಾಕ್ ಮಾಡುವುದು ಟೈಪ್&2 ಮಧುಮೇಹಿಗಳಿಗೆ ಅಧಿಕ ಲಾಭದಾಯಕ. ಆಹಾರ ಸೇವಿಸಿದಾಗ ಅಧಿಕವಾಗಿ ಸಕ್ಕರೆ ಅಂಶ ಹೊಟ್ಟೆಗೆ ಸೇರುತ್ತದೆ. ಇದನ್ನು ಸಮತೋಲನಗೊಳಿಸಬೇಕಾದರೆ ನಡೆದಾಡಬೇಕು ಎಂದು ಅಧ್ಯಯನ ನಡೆಸಿದ ನ್ಯೂಜಿಲೆಂಡ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.
Walking After Eating Beneficial for Digestion
ಇದನ್ನು ಓದಿ: ಸ್ತನದ ಕ್ಯಾನ್ಸರ್ ಆತಂಕ ನಿವಾರಿಸಲು ಹೀಗಿರಲಿ ದೈನಂದಿನ ಆಹಾರ ಕ್ರಮ
ಇದನ್ನು ಓದಿ: ಆರೋಗ್ಯಕರ ಜೀರ್ಣಕ್ರಿಯೆ ನಿಮ್ಮದಾಗಬೇಕೇ? ಹಾಗಾದೆರೆ ಇಲ್ಲಿವೆ ಆಯುರ್ವೇದದ 9 ಸುಲಭೋಪಾಯಗಳು
Discussion about this post