ಹೊಸದಿಲ್ಲಿ: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳದ ಹಾಜಬ್ಬ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.
ಮಂಗಳೂರು ನಗರದ ಹಂಪನಕಟ್ಟ ಬಸ್ಸು ನಿಲ್ದಾಣ ಮತ್ತು ಮಿಲಾಗ್ರಿಸ್ ಲೈನ್ ಬಳಿಯಲ್ಲಿ ಕಿತ್ತಳೆಯನ್ನು ಮಾರಿ ತಮ್ಮೂರಿಗೆ ಸರಕಾರಿ ಶಾಲೆಯನ್ನು ತಂದು, ಅದನ್ನು ಕಟ್ಟಿ ಬೆಳೆಸಿದ್ದಾರೆ
ಹಾಜಬ್ಬ. ಕರಾವಳಿಯಲ್ಲಿ ಅವರು ಅಕ್ಷರ ಸಂತ ಎಂದೇ ಖ್ಯಾತಿ ಪಡೆದಿದ್ದಾರೆ. ಅವರಿಗೆ 2020ನೇ ಸಾಲಿನ ಪದ್ಮಶ್ರೀ ಪುರಸ್ಕಾರವನ್ನು ಘೋಷಿಸಲಾಗಿತ್ತು. ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಪ್ರಶಸ್ತಿ ಪ್ರದಾನ ಸಭಾಂಗಣದಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಹರೇಕಳ ಹಾಜಬ್ಬ ಅವರ ಹೆಸರು ಕರೆಯುತ್ತಿದ್ದಂತೆ ಆಗಮಿಸಿದ ಅವರು ಬರೀ ಕಾಲಿನಲ್ಲಿದ್ದರು.
ರಾಷ್ಟ್ರಪತಿ ಅವರ ಬಳಿ ಹೋಗುವಾಗ, ಅವರ ಮುಂದೆ ನಿಂತು ಪ್ರಶಸ್ತಿ ಸ್ವೀಕರಿಸುವ ವೇಳೆ ಹಾಗೂ ಮರಳಿ ಸ್ವಸ್ಥಾನಕ್ಕೆ ಬರುವಾಗಲೂ ಕೈ ಮುಗಿದರು.
Discussion about this post