ಚಿಕ್ಕಮಗಳೂರು: ರಾಜ್ಯ ವಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದಿದ್ದು, ಜಿಲ್ಲೆಯಲ್ಲಿ ೧೩೩೪೨ ಮತದಾರರಿದ್ದು, ೯೧೫೮ ಮಂದಿ ಮತಚಲಾಯಿಸುವ ಮೂಲಕ ಶೇ.೬೯ ರಷ್ಟು ಮತದಾನವಾಗಿದೆ.
ನಿರ್ದೇಶಕರ ಸ್ಥಾನಕ್ಕೆ ಬಿ.ಎಲ್.ಸಂದೀಪ್, ನಾಗರಾಜ್ ಬ್ಯಾರುವಳ್ಳಿ,ಪೂರ್ಣೇಶ್, ನವೀನ್ ಕಣದಲ್ಲಿದ್ದರು. ಜಿಲ್ಲೆಯಲ್ಲಿ ೧೩,೩೪೨ ಮತದಾರರಿದ್ದು, ಬೆಳಿಗ್ಗೆ ೮ ರಿಂದ ಸಂಜೆ ೫ವರೆಗೆ ೨೭ ಮತಗಟ್ಟೆಯಲ್ಲಿ ಮತಚಲಾಯಿಸಿದರು.
ಚಿಕ್ಕಮಗಳೂರು ತಾಲೂಕಿನಲ್ಲಿ ೧೨ ಮತಗಟ್ಟೆ, ಮೂಡಿಗೆರೆ ತಾಲೂಕಿನಲ್ಲಿ ೬, ತರೀಕೆರೆ ಮತ್ತು ಕಡೂರು ತಾಲೂಕುಗಳಲ್ಲಿ ತಲಾ ೩ ಮತಗಟ್ಟೆ, ಶೃಂಗೇರಿ, ನರಸಿಂಹರಾಜಪುರ, ಕೊಪ್ಪದಲ್ಲಿ ತಲಾ ೧ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು.
ಕಳೆದ ಬಾರಿ ನಡೆದ ಚುನಾವಣೆಯಲ್ಲಿ ನಾಗರಾಜ್ ಬ್ಯಾರುವಳ್ಳಿ ಮತ್ತು ಪೂರ್ಣೇಶ್ ಸ್ಪರ್ಧಿಸಿದ್ದು, ನಾಗರಾಜ್ ಬ್ಯಾರುವಳ್ಳಿ ಗೆಲುವು ಸಾಧಿಸಿದ್ದರು. ಪುನರಾಯ್ಕೆ ಬಯಸಿ ಇವರು ಚುನಾವಣಾ ಕಣದಲ್ಲಿದ್ದು, ಕಳೆದ ಬಾರಿ ಪರಾಭವಗೊಂಡಿದ್ದು, ಪೂರ್ಣೇಶ್ ಚುನಾವಣಾ ಕಣದಲ್ಲಿದ್ದಾರೆ. ಬಿ.ಎಲ್.ಸಂದೀಪ್ ಮತ್ತು ನವೀನ್ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ.
ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪಾಲಿಟೆಕ್ನಿಕ್ ಬ್ಲಾಕ್ನಲ್ಲಿ ಡಿ.೧೫ ರಂದು ಮತ ಎಣಿಕೆ ನಡೆಯುತ್ತಿದ್ದು, ಸ್ಪರ್ಧಾಕಣದಲ್ಲಿರುವ ಐದು ಜನರಲ್ಲಿ ವಿಜಯಲಕ್ಷ್ಮಿಯಾರಿಗೆ ಒಲಿಯಲಿದೆ ಎಂಬುದು ಗೊತ್ತಾಗಲಿದೆ.
State Wakkaliga Association Election
Discussion about this post