ಮೂಡಿಗೆರೆ: ನೇತ್ರ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಪೂರ್ಣಚಂದ್ರ ತೇಜಸ್ವಿ ಪತ್ನಿ ರಾಜೇಶ್ವರಿ ತೇಜಸ್ವಿ ಮೆರದಿದ್ದು ದೇಹ ದಾನಕ್ಕು ಯೋಜಿಸಲಾಗಿದೆ. ಕಳೆದ ಒಂದು ತಿಂಗಳಿಂದ ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದ ರಾಜೇಶ್ವರಿ ತೇಜಸ್ವಿ ಇವರು ಇಂದು ಬೆಳಗ್ಗೆ 6.30 ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಇವರ ಕಣ್ಣುಗಳನ್ನು ದಾನ ಮಾಡಲಾಗಿದ್ದು ದೇಹವನ್ನು ಕೂಡ ವೈದ್ಯಕೀಯ ಕಾಲೇಜಿಗೆ ನೀಡಲು ಯೋಜಿಸುತ್ತಿದ್ದು ಕುಟುಂಬ ಇದನ್ನು ನಿರ್ದರಿಸಲಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಮೂಲಕ ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿಯವರ ವಿಶ್ವಮಾನವ ಸಂದೇಶಕ್ಕೆ ಮುನ್ನುಡಿ ಬರೆದಿದ್ದಾರೆ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರು ಅಪ್ಪನ ನೆರಳಲ್ಲಿ ಇರಬಾರದು. ಮತ್ತು ತನ್ನ ಪರಿಶ್ರಮವನ್ನು ಸಮಾಜಕ್ಕೆ ದಾರೆ ಎರಯಬೇಕೆಂಬ ದೃಷ್ಟಿಯಿಂದ ಮೂಡಿಗೆರೆಯ ಸಮೀಪದ ಹ್ಯಾಂಡ್ ಪೋಸ್ಟ್ ಪಕ್ಕದಲ್ಲಿ ನಿಂಬೆ ಮೂಲೆ ಎಂಬ ಪುಟ್ಟ ಕಾಫಿ ತೋಟವನ್ನು ಪರಿಸರಕ್ಕೆ ಪೂರಕವಾಗಿ ನಿರ್ಮಿಸಿಕೊಂಡಿದ್ದರು.
ಈಗಾಗಲೇ ಇವರ ನೇತ್ರಗಳನ್ನು ದಾನಮಾಡಿ ಇಬ್ಬರ ಬಾಳಿಗೆ ಬೆಳಕಾಗಿದ್ದು . ದೇಹವನ್ನು ಕೂಡ ವೈದ್ಯಕೀಯ ಕಾಲೇಜಿಗೆ ಅರ್ಪಿಸುವ ಚಿಂತನೆಯಲ್ಲಿ ಇವರ ಕುಟುಂಬ ಇದೆ ಎಂದು ಬಲ್ಲ ಮಾಹಿತಿಗಳು ತಿಳಿಸಿವೆ. ತೆಜಸ್ವಿ ಇವರನ್ನು ಅಪ್ಪ ಕುವೆಂಪುರವರ ಕುಪ್ಪಳ್ಳಿಯ ಸಮಾದಿ ಪಕ್ಕದಲ್ಲೆ ಅಂತ್ಯ ಕ್ರಿಯೆ ನಡೆಸಲಾಗಿತ್ತು.
Rajeshwari Tejaswi’s body donated
Discussion about this post