ನವದೆಹಲಿ: ಕಾರ್ ನಲ್ಲಿ ರಾತ್ರಿ ವೇಳೆ ಚಿಕ್ಕಮ್ಮನ ಮನೆಗೆ ಆಗಮಿಸುತ್ತಿದ್ದ ನಟಿಗೆ ಕಾರ್ ನಲ್ಲಿ ಅಡ್ಡಗಟ್ಟಿದ್ದ ದರೋಡೆಕೋರರು ಆಕೆಯ ಬಳಿ ಇದ್ದ ಉಂಗುರ, ವಜ್ರದ ಪೆಂಡೆಂಟ್ ಹೊಂದಿದ್ದ ಚಿನ್ನದ ಸರ, ಪರ್ಸಿನಲ್ಲಿದ್ದ ಹಣವನ್ನು ದೋಚಿದ ಘಟನೆ ನಡೆದಿದೆ.
ಗರಂ ಮಸಾಲಾ ಸೇರಿದಂತೆ ಹಲವು ಬಾಲಿವುಡ್ ಸಿನೆಮಾಗಳಲ್ಲಿ ನಟಿಸಿದ್ದ ನಟಿ ನಿಖಿಲಾ ರಾವಲ್ ಗೆ ಈ ಸಂಕಷ್ಟ ಎದುರಾಗಿತ್ತು.
ಬಾಲಿವುಡ್ ನಟಿಯ ಮಾತಿನಲ್ಲೇ ಹೇಳಬೇಕೆಂದರೆ ’ಆ ಹತ್ತು ನಿಮಿಶ ವಿಪರೀತ ಭಯವಾಗಿತ್ತು. ಅವರೆಲ್ಲಾ ನನ್ನ ಕೊಂದು ಬಿಡ್ತಾರೆ ಅನಿಸಿತ್ತು. ಹೊತ್ತೊಯ್ದು ಅತ್ಯಾಚಾರ ನಡೆಸಿದರೆ ಎಂಬ ಭಯವೂ ಕಾಡ್ತಿತ್ತು. ಹೀಗಾಗಿ ನನ್ನಲ್ಲಿದ್ದ ಎಲ್ಲಾ ಹಣ ಸಹ ಕೊಟ್ಟುಬಿಟ್ಟೆ. ಒಂದು ಇವೆಂಟ್ ಒಪ್ಪಿಕೊಂಡು ವಾಪಾಸ್ ಬರ್ತಾ ಇದ್ದಿದ್ರಿಂದ ಹೆಚ್ಚಿಗೆ ಹಣ ಇತ್ತು ಎಂದು ನಟಿ ಹೇಳಿಕೊಂಡಿದ್ದಾರೆ.
ಮನೆಗೆ ಬಂದು ಭಯದಿಂದ ವಾಡ್ರೊಬ್ ಸೇರಿದ್ದ ನಟಿ ಸ್ವಲ್ಪ ಕಾಲ ಭಯಗ್ರಸ್ತರಾಗಿ ಬದುಕಿದ್ದಾರೆ. ಆಕೆಯ ಬಳಿ ಇದ್ದ ವಸ್ತುಗಳ ಮೌಲ್ಯ, ಹಣ ಎಲ್ಲಾ ಸೇರಿ ೭ ಲಕ್ಷ ಎಂದು ಆಕೆ ತಿಳಿಸಿದ್ದಾರೆ. ಅಲ್ಲಿರಲಾಗದೆ ಮಾರನೆ ದಿವಸ ಬೆಳಿಗ್ಗೆ ಫ್ಲೈಟ್ ಹಿಡಿದು ಮುಂಬೈಗೆ ಬಂದು ತನ್ನ ವಕೀಲರಿಂದ ದೂರು ನೀಡಿದ್ದಾರೆ ನಿಖಿತಾ ರಾವಲ್.
ರೋಟಿ, ಕಪಡಾ ಔರ್ ರೊಮ್ಯಾನ್ಸ್ ಸಿನೆಮಾದಲ್ಲಿ ನಟಿಸುತ್ತಿರುವ ಅವರು ಈ ಘಟನೆಗೆ ಸಂತ್ರಸ್ತೆಯೇ ಎಫ್ ಐ ಆರ್ ನೀಡಬೇಕಾಗಿರುವುದರಿಂದ ಮತ್ತೊಮ್ಮೆ ದೆಹಲಿಗೆ ತೆರಳುವುದಾಗಿ ಹೇಳಿದ್ದಾರೆ.
Discussion about this post