ಕನ್ನಡನಾಡಿ ಸುದ್ದಿಜಾಲ: ರಾಜ್ಯದಲ್ಲಿ ಅಪರೇಷನ್ ಕಾಂಗ್ರೆಸ್ (Operation Congress) ಸದ್ದಿಲ್ಲದೆ ಸಾಗಿದ್ದು, ಸೊರಬ ಶಾಸಕ ಕುಮಾರ ಬಂಗಾರಪ್ಪ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಹಿರಿಯೂರು ಶಾಸಕಿ ಪೂರ್ಣಿಮಾ, ದೇವದುರ್ಗ ಶಾಸಕ ಶಿವನಗೌಡ ನಾಯಕ, ಗುಬ್ಬಿ ಶಾಸಕ ವಾಸು, ಗ್ರಾಮಾಂತರ ಶಾಸಕ ಗೌರಿ ಶಂಕರ್ ಅವರಿಗೆ ಕಾಂಗ್ರೆಸ್ ಗಾಳ ಹಾಕಿದ್ದು, ಕಾಂಗ್ರೆಸ್ ಬುಟ್ಡಿ ಸೇರೋ ಎಲ್ಲಾ ಸೂಚನೆಗಳು ಲಭಿಸಿದೆ.
ರಾಜ್ಯದಲ್ಲಿ ಮುಂಬರುವ ೨೦೨೩ರ ಚುನಾವಣೆಯನ್ನು ಶತಾಯ ಗತಾಯ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಆಪರೇಶನ್ ಹಸ್ತಕ್ಕೆ ಹೊಸ ಪಟ್ಟಿ ಸಿದ್ಧಪಡಿಸಿದೆ. ಕೈ ಪಾಳಯ ಲಿಸ್ಟ್ ನಲ್ಲಿರೋ MLA ಗಳ ಲಿಸ್ಟ್ ರೆಡಿ ಇದೆ.
ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಕಾಂಗ್ರೆಸ್ ಈಗ ಗೆಲ್ಲಲೇ ಬೇಕೆಂಬ ಹಟದಿಂದ ಚುನಾವಣಾ ತಂತ್ರ ಆರಂಭಿಸಿದೆ.
ರಾಜ್ಯದ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಲು ಪ್ಲ್ಯಾನ್ ಮಾಡಿರುವ ಕೈ ಪಾಳಯ ತನಗಾಗಿ ಗೆಲ್ಲುವ ಜೆಡಿಎಸ್ ಹಾಗೂ ಬಿಜೆಪಿ ಕುದುರೆಗಳನ್ನು ಆಯ್ಕೆ ಮಾಡಿಕೊಂಡಿದೆ, ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲೇ ಪಟ್ಟಿ ಸಿದ್ದ ಮಾಡಿದೆ ಎಂಬುದು ಬಹಿರಂಗ ಸತ್ಯ.
ಕಾಂಗ್ರೆಸ್ ಕೈವಶವಾಗಲಿರುವ ಸಂಭವನೀಯ MLA ಗಳ ಪಟ್ಟಿ ಹೀಗಿದೆ.
೧. ಸೊರಬ ಶಾಸಕ ಕುಮಾರ ಬಂಗಾರಪ್ಪ- ಬಂಗಾರಪ್ಪನವರ ಇಬ್ಬರೂ ಮಕ್ಕಳನ್ನೂ ತಮ್ಮ ಪಾಳೆಯಕ್ಕೆ ಕರೆದುಕೊಳ್ಳುವ ಎಲ್ಲಾ ಲಕ್ಷಣಗಳೂ ಇದ್ದು, ಈಗಾಗಲೇ ಬಂಗಾರಪ್ಪ ಪುತ್ರ ಮಧುವನ್ನು ಕೈಪಾಳಯಕ್ಕೆ ಸೇರಿಸಿಕೊಂಡಿರೋ ಡಿಕೆಶಿ ಈಗ ಕುಮಾರ್ ಬಂಗಾರಪ್ಪನವರಿಗೂ ಗಾಳ ಹಾಕಿದ್ದಾರಂತೆ.
೨. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್- ಬಿಎಸ್ವೈ ಸಚಿವ ಸಂಪುಟ ಹಾಗೂ ಸರ್ಕಾರದ ವಿರುದ್ಧ ಅಸಮಧಾನಗೊಂಡಿರುವ ಶಾಸಕ ಗೂಳಿಹಟ್ಟಿ ಶೇಖರ್ ಸಹ ಲಿಸ್ಟ್ ನಲ್ಲಿದ್ದಾರೆ.
೩. ಹಿರಿಯೂರು ಶಾಸಕಿ ಪೂರ್ಣಿಮಾ: ಬೊಮ್ಮಾಯಿ ಸಚಿವ ಸಂಪುಟ ಸೇರಬೇಕಿದ್ದ ಹಿರಿಯೂರು ಶಾಸಕಿ ಪೂರ್ಣಿಮಾ ಕೊನೆ ಕ್ಷಣದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದರು. ಹೀಗಾಗಿ ಈ ಅಸಮಧಾನದ ಲಾಭ ಪಡೆಯಲು ಹಾಗೂ ಕಾಂಗ್ರೆಸ್ ಹಿರಿಯ ನಾಯಕ ದಿ.ಕೃಷ್ಣಪ್ಪನವರ ಪುತ್ರಿಯಾಗಿರುವ ಇವರನ್ನು ಸಹ ಪಕ್ಷಕ್ಕೆ ಸೆಳೆಯೋದು ಕೈನಾಯಕರ ಮಿಸ್ಟರಿ ಪ್ಲ್ಯಾನ್.
ಇದಲ್ಲದೇ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ, ತುಮಕೂರು ಗುಬ್ಬಿ ಶಾಸಕ ವಾಸು, ಗ್ರಾಮಾಂತರ ಶಾಸಕ ಗೌರಿ ಶಂಕರ್ ರನ್ನು ಪಕ್ಷಕ್ಕೆ ಸೇರಿಸುವುದಕ್ಕಾಗಿ ಸಹ ಈಗಾಗಲೇ ಪ್ರಯತ್ನ ಆರಂಭವಾಗಿದೆ.
ಜೆಡಿಎಸ್ ಶಾಸಕರಿಗೆ ತಾವು ಮೂಲೆಗುಂಪಾಗಿರುವ ಅಸಮಾಧಾನವಿದ್ದರೆ, ಬಿಜೆಪಿಯ ಬಹುತೇಕ ಶಾಸಕರಿಗೆ ಸಚಿವ ಸ್ಥಾನ ಸಿಗದ ಅಸಮಾಧಾನವಿದೆ. ಈ ಎರಡೂ ಸಂದರ್ಭಗಳನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗೈ ಪಡೆ ಶ್ರೀಕೃಷ್ಣ ಸಂಧಾನದ ಮೂಲಕ ಮೆಗಾ ಪ್ಲಾಮ್ ನಡೆಸುವ ಎಲ್ಲಾ ಸೂಚನೆಗಳು ಈಗ ಹೊಳೆಯುತ್ತಿವೆ.

























Discussion about this post