ನಟ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣದ ನಂತರ ಹೃದಯಾಘಾತದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಆದರೆ ಪುನೀತ್ ರಾಜ್ಕುಮಾರ್ ಅವರ ಸಾವಿಗೆ ನಿಜವಾದ ಕಾರಣ ಏನು ಎಂಬುದನ್ನು ವೈದ್ಯರು ಸ್ಪಷ್ಟವಾಗಿ ತಿಳಿಸಿಲ್ಲ. ಅವರದು ಹಠಾತ್ ಮರಣ ಎಂದಷ್ಟೇ ಹೇಳಲಾಗಿದೆ.
ಖ್ಯಾತ ನಟ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನದಿಂದ ಕರುನಾಡು ಶೋಕದ ಕಡಲಲ್ಲಿ ಮುಳುಗಿದೆ. ನಿನ್ನೆ ಅಂದರೆ ಅಕ್ಟೋಬರ್ 29ರಂದು ಬೆಳಿಗ್ಗೆ 11.30ರ ಸಮಯದಲ್ಲಿ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಪುನೀತ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಡಾ.ರಮಣರಾವ್ ಅವರ ಬಳಿಗೆ ಕರೆದೊಯ್ಯಲಾಯಿತು. ಪುನೀತ್ ಅವರ ದೇಹಸ್ಥಿತಿ ಪರಿಶೀಲಿಸಿದ ಡಾ.ರಮಣರಾವ್ ತಕ್ಷಣವೇ ದೊಡ್ಡ ಆಸ್ಪತ್ರೆಗೆ ದಾಖಲಾಗಲು ಸೂಚಿಸಿದ್ದರು. ಅದರಂತೆ ಪುನೀತ್ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು.
ನನ್ನ ಹತ್ತಿರಕ್ಕೆ ಬಂದಾಗಲೇ ಪುನೀತ್ ಅವರು ಬೆವರುತ್ತಿದ್ದರು. ಕೇಳಿದ್ದಕ್ಕೆ ಜಿಮ್ ಮಾಡ್ತಿದ್ದೆ ಎಂದು. ನಾನು ಇಸಿಜಿ ಮಾಡಿಸಿದಾಗ ಹೃದಯದ ಸಮಸ್ಯೆ ಇರುವುದು ತಿಳಿದುಬಂತು. ಅವರ ಸಾವಿಗೆ ಇಂಥದ್ದೇ ಅಂತ ನಿರ್ದಿಷ್ಟ ಕಾರಣ ಏನು ಎಂದು ಹೇಳಲು ಆಗುತ್ತಿಲ್ಲ. ಅವರದು ಹಠಾತ್ ಮರಣ ಎಂದು ಅವರು ಟಿವಿ9 ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ಅವರಿಗೆ ಹೃದಯಾಘಾತ ಆಗಿದೆ ಎಂದು ಕೆಲವರು, ಹೃದಯ ಸ್ತಂಭನವಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಹೃದಯಾಘಾತ ಎಂದರೆ ಹಾರ್ಟ್ ಅಟ್ಯಾಕ್, ಹೃದಯಸ್ತಂಭನ ಎಂದರೆ ಕಾರ್ಡಿಯಾಕ್ ಅರೆಸ್ಟ್. ಇವೆರೆಡೂ ಒಂದೇ ಅಲ್ಲ. ಆದರೆ ಸಾಮಾನ್ಯ ಜನರು ಈ ಎರಡೂ ದೇಹಸ್ಥಿತಿಗಳನ್ನು ಸಮಾನಾರ್ಥಕ ಪದಗಳಾಗಿ ಬಳಸುತ್ತಾರೆ. ಆದರೆ ವಾಸ್ತವವಾಗಿ, ಜೀವವಿಜ್ಞಾನ ಪರಿಭಾಷೆಯಲ್ಲಿ ಇವೆರೆಡೂ ಬೇರೆಬೇರೆ.
ಏನಿದು ಹೃದಯಾಘಾತ
ಹೃದಯಾಘಾತವೆಂದರೆ ರಕ್ತನಾಳಗಳು ಕಟ್ಟಿಕೊಳ್ಳುವುದು. ಅಂದರೆ ಪೈಪ್ನಲ್ಲಿ ಪೇಪರ್ ತುಂಡು ಸಿಲುಕಿದಾಗ ಪೈಕ್ ಬ್ಲಾಕ್ ಆಗುತ್ತೆ ಅಂತೀವಲ್ಲ ಆ ಥರ. ಯಾವ ರಕ್ತನಾಳ ಬ್ಲಾಕ್ ಆಗಿರುತ್ತದೆಯೋ ಅಲ್ಲಿಂದ ದೇಹದ ನಿರ್ದಿಷ್ಟಭಾಗಕ್ಕೆ ಹರಿಯಬೇಕಾದ ರಕ್ತ ಪರಿಚಲನೆ ಸ್ಥಗಿತಗೊಳ್ಳುತ್ತದೆ. ಇದು ಸಾವಿಗೆ ಕಾರಣವಾಗುತ್ತದೆಯಾದರೂ ಚೇತರಿಕೆಗೆ ಅವಕಾಶ ಹೆಚ್ಚು.
ಏನಿದು ಹೃದಯಸ್ತಂಭನ
ಹೃದಯಸ್ತಂಭನವಾದಲ್ಲಿ ಮಿದುಳಿಗೆ ರಕ್ತಪೂರೈಕೆಯೇ ಸ್ಥಗಿತಗೊಳ್ಳುತ್ತದೆ. ಅಂಥ ಸಂದರ್ಭದಲ್ಲಿ ಬ್ರೈನ್ ಡೆಡ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹೃದಯಾಘಾತ ಮತ್ತು ಹೃದಯಸ್ತಂಭನದ ನಡುವೆ ಬಹಳ ಮುಖ್ಯವಾದ ವ್ಯತ್ಯಾಸಗಳಿವು.
ಹೃದಯದ ಆರೋಗ್ಯದ ಬಗ್ಗೆ ಡಾ.ಎನ್.ಸಿ.ಮಂಜುನಾಥ್ ಅವರ ಅಭಿಪ್ರಾಯವನ್ನು ಹಿರಿಯ ಪತ್ರಕರ್ತೆ ಆಶಾ ವಿಶ್ವನಾಥ್ ತಮ್ಮ ಫೇಸ್ಬುಕ್ ವಾಲ್ನಲ್ಲಿ ಹಂಚಿಕೊಂಡಿದ್ದಾರೆ. ವ್ಯಾಯಾಮದ ಒಂದು ಮಿತಿಯನ್ನು ಮೀರಿದರೆ ಹೃದಯಕ್ಕೆ ಆಯಾಸ ಹೆಚ್ಚಾಗುತ್ತದೆ. ಅಂಥ ಸಂದರ್ಭಗಳಲ್ಲಿ ಅದು ಹಿಗ್ಗುವ ಸಾಧ್ಯತೆಯಿದೆ. ಒಮ್ಮೆ ಹಿಗ್ಗಿದ ಹೃದಯ ಮತ್ತೆ ಸರಿಯಾಗಲು ವರ್ಷಗಟ್ಟಲೆ ಬೇಕಾಗುತ್ತದೆ. ವ್ಯಾಯಾಮಗಳನ್ನು ಮಾಡುವವರು ಈ ಅಂಶವನ್ನು ಗಮನದಲ್ಲಿರಿಸಿಕೊಳ್ಳಬೇಕು ಎನ್ನುವುದು ಡಾ.ಎನ್.ಸಿ.ಮಂಜುನಾಥ್ ಅವರ ಅಭಿಪ್ರಾಯ.
Difference between Heart attack and heart Blockage What Happened to Puneeth Rajkumar
ಇದನ್ನೂ ಓದಿ: Puneet passes away: ಪವರ್ ಕಳೆದು ಕೊಂಡ ಕರುನಾಡು: ಪುನೀತ್ ರಾಜ್ಕುಮಾರ್ ನಿಧನ
ಇದನ್ನೂ ಓದಿ: ಅನಿತಾ ಭಟ್ ನಿರ್ಮಾಣದ ಇಂದಿರಾ ಪೋಸ್ಟರ್ ಬಿಡುಗಡೆ ಮಾಡಿದ ಪುನೀತ್ ರಾಜ್ಕುಮಾರ್
Discussion about this post