ಬೆಂಗಳೂರು: ತಮಿಳು ಚಿತ್ರರಂಗದ ಜನಪ್ರಿಯ ನಟ ಸೂರ್ಯ ತಮ್ಮದೇ ಸಂಸ್ಥೆಯಿಂದ ನಿರ್ಮಿಸಿ ನಾಯಕನಾಗಿ ಅಭಿನಯಿಸಿ ಇತ್ತೀಚೆಗೆ ಬಿಡುಗಡೆಯಾಗಿದ್ದ ಜೈ ಭೀಮ್ ಚಿತ್ರ ದಲಿತರ ಮೇಲಿನ ದೌರ್ಜನ್ಯದ ಕಥಾವಸ್ತುವನ್ನು ಹೊಂದಿದೆ. ತುಳಿತಕ್ಕೊಳಗಾದ ಸಮುದಾಯದ ಪರವಾಗಿ ಹೋರಾಟ ಮಾಡಲು ತನ್ನ ಜೀವನವನ್ನೇ ಮುಡಿಪಾಗಿಡುವ ಲಾಯರ್ ಪಾತ್ರದಲ್ಲಿ ಸೂರ್ಯರ ಅಭಿನಯ ಮೆಚ್ಚುಗೆಗೆ ಪಾತ್ರವಾಗಿದ್ದರೂ ವಣ್ಣಿಯಾರ್ ಜನಾಂಗವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದ ಕಾರಣ ಆ ಸಮುದಾಯದ ಕೆಂಗಣ್ಣಿಗೆ ಚಿತ್ರ ಗುರಿಯಾಗಿತ್ತು. ವಣ್ಣಿಯಾರ್ ಸಂಘವು ಚಿತ್ರದಿಂದ ತಮ್ಮ ಸಮುದಾಯದ ಗೌರವಕ್ಕೆ ಧಕ್ಕೆಯಾಗಿದ್ದು ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು ಕ್ಷಮೆಯಾಚಿಸಬೇಕೆಂದು ಆಗ್ರಹಪಡಿಸಿತ್ತು.
ಕಡೆಗೂ ತಮ್ಮ ಮೌನ ಮುರಿದ ಚಿತ್ರದ ನಿರ್ದೇಶಕ ಜ್ಞಾನವೇಲ್ ವಿವಾದದ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದು ವಣ್ಣಿಯಾರ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ ಹಾಗೂ ಇದು ಉದ್ದೇಶಪೂರ್ವಕವಾಗಿ ಆದದ್ದಲ್ಲವೆಂದು ತಿಳಿಸಿದ್ದಾರೆ. ತಮ್ಮ ಟ್ಟಿಟರ್ ಖಾತೆಯಲ್ಲಿ ಬಿಡುಗಡೆ ಮಾಡಿರುವ ಲಿಖಿತ ಹೇಳಿಕೆಯಲ್ಲಿ ತಾವು ಸಂಪೂರ್ಣವಾಗಿ ಇದರ ಹೊಣೆಯನ್ನು ಹೊರುವುದಾಗಿ ತಿಳಿಸಿದ್ದು ಈ ಕಾರಣಕ್ಕಾಗಿ ನಟ ಸೂರ್ಯರನ್ನು ಗುರಿಯಾಗಿಸುವುದು ಸರಿಯಲ್ಲ ಎಂದು ನಿರ್ದೇಶಕ ಜ್ಞಾನವೇಲ್ ತಿಳಿಸಿದ್ದಾರೆ. ಇದಕ್ಕಾಗಿ ನಾನು ಸೂರ್ಯ ಹಾಗೂ ಪ್ರತಿಯೊಬ್ಬರಲ್ಲೂ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ಚಿತ್ರವು ನೈಜ ಘಟನೆಗಳನ್ನಾಧರಿಸಿದ್ದು ಬುಡಕಟ್ಟು ಜನಾಂಗದ ಜನರು ಅನುಭವಿಸಿದ ನೋವನ್ನು ಚಿತ್ರಿಸುವುದು ಮಾತ್ರವೇ ತಮ್ಮ ಉದ್ದೇಶವಾಗಿತ್ತೆಂದು ತಿಳಿಸಿದ ಅವರು ಚಿತ್ರಕ್ಕೆ ದೊರೆತ ಕೆಲ ಪ್ರತಿಕ್ರಿಯೆಗಳನ್ನು ನಿರೀಕ್ಷೆ ಮಾಡಿರಲಿಲ್ಲವೆಂದು ತಿಳಿಸಿದರು. ಚಿತ್ರದಲ್ಲಿ ತೋರಿಸಲಾದ ಕ್ಯಾಲೆಂಡರ್ ಬಗ್ಗೆ ವಿವರಿಸದ ಅವರು ಘಟನೆ ನಡೆದ ಸಮಯವನ್ನು ದಾಖಲಿಸಉವುದು ಮಾತ್ರವೇ ತಮ್ಮ ಉದ್ದೇಶವಾಗಿತ್ತಲ್ಲದೇ ಯಾವುದೇ ಸಮುದಾಯವನ್ನು ಸೂಚಿಸವುದಾಗಿರಲಿಲ್ಲ ಎಂದಿದ್ದಾರೆ.
Jai Bhim Director TJ Gnanavel apologises to Vanniyar Community after the controversy
ಇದನ್ನೂ ಓದಿ: Jai Bhim: ಮತ್ತೊಂದು ವಿವಾದದ ಸುಳಿಯಲ್ಲಿ ಜೈ ಭೀಮ್ ಚಿತ್ರ – ನಟ ಸೂರ್ಯ ಮನೆಗೆ ಪೋಲೀಸ್ ರಕ್ಷಣೆ
ಇದನ್ನೂ ಓದಿ: Jai Bhim Teaser: ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದ ವಕೀಲನ ಪಾತ್ರದಲ್ಲಿ ಸೂರ್ಯ
Discussion about this post