ಚಿಕ್ಕಮಗಳೂರು: ದೇವಸ್ಥಾನಕ್ಕೆ ಭಕ್ತರಾದವರೆಲ್ಲರೂ ಹೋಗುತ್ತಾರೆ. ಉಳ್ಳವರು ದೇಣಿಗೆ ಕೊಟ್ಟು ದೇಗುಲಕ್ಕೆ ಕಳೆಕೊಡುತ್ತಾರೆ. ಸಲ್ಲಿಸಿ ಸಲ್ಲುವವರ ಹೆಸರು ಕಾಣಿಕೆಯ ಬೋರ್ಡ್ನಲ್ಲಿಯು ಕಾಣುತ್ತದೆ. ಆದರೆ ಸಾಮಾನ್ಯ ಭಕ್ತ, ಕಾಪಾಡೋ ದೇವರೆ ಎನ್ನುತ್ತಾ ಕೈ ಮುಗಿದು ನಿಲ್ಲುತ್ತಾನೆ. ಕೈಲಾದುದನ್ನ ಹುಂಡಿಗೆ ಹಾಕಿ, ತಪ್ಪಿಗೆ ಕ್ಷಮಿಸು, ಕರುಣೆ ಸುರಿಸು ಎಂದೆಲ್ಲಾ ಬೇಡಿ ಬರುತ್ತಾರೆ.
ಇದನ್ನೂ ಓದಿ: ಹೆಚ್ಚು ಜನರ ಜೊತೆ ಗೆಳೆತನ ಬೆಳೆಸಿಕೊಳ್ಳಲು 8 ಸೂತ್ರಗಳನ್ನು ಓದಿಬಿಡಿ
ಆದರೆ ಕಡೂರು ತಾಲ್ಲೂಕಿನ ಕೋಟೆ ಪಾತಾಳ ಆಂಜನೇಯ ದೇವಾಲಯದಲ್ಲಿ ಬೇರೆಯದ್ದೇ ಆದ ರೀತಿಯಲ್ಲೊಂದು ಘಟನೆ ನಡೆದಿದೆ. ಅದನ್ನ ನಿಮಗೆ ಹೇಳಲೇ ಬೇಕು. ಇಲ್ಲಿನ ಸಾಯಿಬಾಬಾ ದೇವಾಲಯದ ಬಳಿ ಒಬ್ಬ ಬಿಕ್ಷುಕಿ ನಿತ್ಯ ಬದುಕು ಕೊಟ್ಟ ಅನಿವಾರ್ಯತೆಗಾಗಿ ಅವರಿವರನ್ನ ಬೇಡಿ ಬದುಕುತ್ತಿದ್ದಾಳೆ. ನೆಲೆ, ಸೆಲೆಯಿಲ್ಲದ ಬಡಪಾಯಿ ಕೆಂಪಜ್ಜಿ , ಇದಕ್ಕಿದ್ದಂತೆಕೋಟೆ ಪಾತಾಳ ಆಂಜನೇಯ ದೇವಾಲಯಕ್ಕೆ ಬಂದು, ಅಲ್ಲಿನ ಆಡಳಿತ ಮಂಡಳಿಯ ಅಧ್ಯಕ್ಷರನ್ನ ಹುಡುಕಾಡಿದ್ದಾಳೆ.
ಇದನ್ನೂ ಓದಿ: Ka.sa.pa : ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಗೆದ್ದ ಆರ್.ಎಸ್.ಎಸ್. ಶಿವಾನಂದ ಸ್ವಾಮಿ ಲೇವಡಿ
ಇದನ್ನ ನೋಡಿದ ಕೆಲ ಭಕ್ತರು ದೇವಾಲಯದ ಒಳಗೂ ಭಿಕ್ಷೆ ಬೇಡಲು ಶುರುಮಾಡಿದ್ಯಾ ಹೋಗಮ್ಮ ಹೊರಗೆ ಎಂದೇ ಆಡಿಕೊಂಡಿದ್ದರು. ಆದರೂ ಕೆಂಪಜ್ಜಿ ಮುಖ ಕೆಂಪು ಮಾಡಿಕೊಳ್ಳದೇ, ತನ್ನ ಕೆಲಸವನ್ನಲ್ಲದೆ ಮತ್ತೇನು ಆಡಿದ್ದಾರೆ ಎನ್ನುತ್ತಾ ಸೀದಾ ದೇವಾಲಯದ ಒಳಕ್ಕೆ ಹೋಗಿ ಅಲ್ಲಿದ್ದ ದೇವಾಲಯದಲ್ಲಿದ್ದ ಸ್ವಾಮೀಜಿಗೆ ಮುಷ್ಟಿಮುಚ್ಚಿ ಏನೋ ಕೊಟ್ಟಳು.
ಇದನ್ನೂ ಓದಿ: ಮರೆಯದೇ ಓದಿ; ಇಲ್ಲಿದೆ ಜ್ಞಾಪಕ ಶಕ್ತಿ ವೃದ್ಧಿಸಲು 14 ಸಹಜ ಉಪಾಯ
ಅಜ್ಜಿ ಏನೋ ಕೊಟ್ಟಳೆಂದು ನೋಡಿದ ಸ್ವಾಮೀಜಿಯವರು ಅದನ್ನ ನೋಡಿದಾಗ, ಅದರಲ್ಲಿ ಬರೋಬ್ಬರಿ 20 ಸಾವಿರ ರೂಪಾಯಿಯಿತ್ತು. ಐನೂರರ 40 ನೋಟುಗಳು.. ಏನಮ್ಮ ಇದು, ಏತಕ್ಕಾಗಿ ಎಂದು ಕೇಳುವಾಗಲೇ ,ಅಜ್ಜಿ ಇದನ್ನ ಇಟ್ಕೊಂಡು ನಮ್ಮಪ್ಪ ಆಂಜನೇಯ ಸ್ವಾಮಿಗೆ ಬೆಳ್ಳಿ ಮುಖವಾಡ ಮಾಡ್ಸಿ.. ನನ್ನ ಕೈಲಾದ್ದು ಕೊಟ್ಟೀನಿ..ಎಂದು ಕೈ ಮುಗಿದಿದ್ದಳು.
ಇದನ್ನೂ ಓದಿ: ಭಾರೀ ಸದ್ದು ಮಾಡುತ್ತಿದೆ “ಭಾವಚಿತ್ರ”ದ ಟ್ರೇಲರ್!
ನಡೆದಿದ್ದು ಇಷ್ಟೆ, ಅಲ್ಲಿದ್ದ ಭಕ್ತರೆಲ್ಲಾ ಒಮ್ಮೆ ಏನಾಯ್ತು ಅಂತಾ ದೇವಾಲಯದ ಸಿಬ್ಬಂದಿ ಬಳಿಗೆ ಬಂದು ವಿಚಾರಿಸಿದ್ದಾರೆ. ಅಜ್ಜಿಯ ಸೇವೆಯನ್ನ ಕೇಳಿದ ಭಕ್ತರು, ಬರಿಗಾಲ ಭಿಕ್ಷುಕಿಯ ಕಾಣಿಕೆಗೆ ಸಾಕ್ಷಾತ್ ದೇವರೇ ಒಲಿಯಬಹುದು, ಭಕ್ತರಾಗಿ ಆಕೆಗೆ ನಾವು ಮೆಚ್ಚದಿದ್ದರೇ ಹೇಗೆ ಎನ್ನುತ್ತಾ, ಅಜ್ಜಿಯ ಜೊತೆ ಸೆಲ್ಪಿ ತೆಗೆದುಕೊಂಡು ವಾಟ್ಸ್ಯಾಪ್ ಸ್ಟೇಟಸ್ ಹಾಕಿದರು.
Bikshuki donates to Anjaneya Temple
Discussion about this post