ಪುನೀತ್ ರಾಜ್ಕುಮಾರ್ ಅವರು ಇಲ್ಲ ಎಂದರೆ ಈಗಲೂ ನಂಬಲು ಸಾಧ್ಯವೇ ಇಲ್ಲ. ಅವರ ಕುರಿತಾಗಿನ ಅಭಿಮಾನಕ್ಕೆ ಯಾರಿಗೂ ಪಾರವೆ ಇಲ್ಲ. ಅಂದಹಾಗೆ ಪುನೀತ್ ರಾಜ್ಕುಮಾರ್ ಅವರು ಹಾಡಿರುವ ಹಾಡೊಂಡು ಬಿಡುಗಡೆಗೊಂಡಿದೆ.
ವಿಶೇಷ ಅಂದರೆ ಈ ಚಿತ್ರದಲ್ಲಿ ಮುದುಕ ಪಾತ್ರವನ್ನು ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಮಾಡಿದ್ದಾರೆ. ಇದು ನಾಯಕ ನಟನಷ್ಟೇ ಚಿತ್ರಕ್ಕೆ ಪ್ರಮುಖವಾಗಿದೆಯಂತೆ.
ಪ್ರಭುಶ್ರೀನಿವಾಸ್ ಬಾಡಿಗಾಡ್ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ‘ಅಪ್ಪು ಅವರು ಈ ಹಾಡನ್ನು ಹಾಡಿ, ಇದು ಹೈ ಪಿಚ್ ಹಾಡು. ನಿಮಗೆ ಸರಿ ಅನಿಸಿದರೆ, ಚಿತ್ರಕ್ಕೆ ಹೊಂದಿಕೊಂಡರೆ ಮಾತ್ರ ಇಟ್ಟುಕೊಳ್ಳಿ. ಇಲ್ಲವಾದರೆ, ಬೇರೆಯವರಿಂದ ಹಾಡಿಸಿ ಅಂತ ಹೇಳಿದ್ದರು. ನಾವು ಇಲ್ಲ ಸಾರ್, ಚೆನ್ನಾಗಿದೆ. ಚಿತ್ರಕ್ಕೆ ನಿಮ್ಮ ದನಿ ಬೇಕೇ ಬೇಕು ಎಂದು ಹೇಳಿದ್ದೆ’ ಅಂತ ನೆನಪಿಸಿಕೊಳ್ಳುತ್ತಾರೆ ಪ್ರಭು. ಬಾಡಿಗಾಡ್ ಚಿತ್ರದ ನಾಯಕಿಯಾಗಿ ದೀಪಿಕಾ ಆರಾಧ್ಯ ನಟಿಸುತ್ತಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಅವರ ನೆನಪುಗಳು ನಾನಾ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಲಿದೆ. ಅಭಿಮಾನದ ಪರಾಕಾಷ್ಟೆ ಮತ್ತೊಂದು ಉದಾಹರಣೆ ಶಿವಮೊಗ್ಗದ ಸಕ್ರೆಬೈಲಿನ ಆನೆಯ ಮರಿಯೊಂದಕ್ಕೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಟ್ಟಿರುವುದು.
ಆನೆಯ ಮರಿಗೆ ಹೆಸರು ಇಡಲು ಮತ್ತೊಂದು ಕಾರಣ ಏನೆಂದರೆ, ಪುನೀತ್ ನಿಧನರಾಗುವ ಕೆಲ ದಿನಗಳ ಹಿಂದೆ ಅವರು ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದರು. ಆನೆಗಳ ಬಗ್ಗೆ ವಿಶೇಷ ಕಾಳಜಿತೋರಿದ್ದರು. ಹೀಗಾಗಿ, ಪುನೀತ್ ಅವರು ಹೆಸರನ್ನು ಆನೆಗೆ ಇಡಲಾಗಿದೆ.
ಇದನ್ನೂ ಓದಿ: Raghu Dixit: ಭೂಗತ ದೊರೆ ರಘು ದೀಕ್ಷಿತ್ ಮಾತನಾಡಿದಾಗ!
Discussion about this post