ಬೆಳಗಾವಿ: ಅತ್ಯಾಚಾರ ಆಗುವಾಗ ತಡೆಯಲು ಸಾಧ್ಯವಾಗದಿದ್ದರೆ ಎಂಜಾಯ್ ಮಾಡಿಬಿಡಬೇಕು ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.
ರೈತರ ಬೆಳೆ ವಿಮೆ ಚರ್ಚೆಯಲ್ಲಿ ವಿಧಾನಸಭಾ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಈ ಹೇಳಿಕೆ ನೀಡಿದ್ದು, ಮಹಿಳೆ ಅತ್ಯಾಚಾರದಿಂದ ಪಾರಾಗಲು ಸಾಧ್ಯವಿಲ್ಲ ಎಂದು ಗೊತ್ತಾದಾಗ ಆ ಪರಿಸ್ಥಿತಿಯನ್ನು ಸಂತಸದಿಂದ ಅನುಭವಿಸಬೇಕು ಎಂದು ಹೇಳಿದರು.
ರೈತರ ಬೆಳೆ ಹಾನಿ ಪರಿಹಾರ ಕುರಿತು ಮಹತ್ವಪೂರ್ಣ ಚರ್ಚೆಯಲ್ಲಿ ಶಾಸಕರು ಮಗ್ನರಾಗಿದ್ದರು. ಅಲ್ಲದೆ, ರೈತರ ಸಂಕಷ್ಟ ಕುರಿತು ಮಾತನಾಡಲು ತಮಗೆ ಅವಕಾಶ ಕೊಡಿ ಎಂದು ಎಲ್ಲ ಶಾಸಕರು ಸಭಾಧ್ಯಕ್ಷರ ಮುಂದೆ ಬೇಡಿಕೆ ಇಡುತ್ತಿದ್ದರು. ರಾಜ್ಯದ ಮಹತ್ವದ ವಿಚಾರದಲ್ಲಿ ಚರ್ಚೆ ನಡೆಯುತ್ತಿದ್ದಾಗ ನಮ್ಗೆ ಮಾತನಾಡಲು ಅವಕಾಶ ಕೊಡಿ ಎಂದು ಶಾಸಕರು ದುಂಬಾಲು ಬಿದ್ದಾಗ ಈಗ ಚರ್ಚೆ ಸಾಕು, ಕಂದಾಯ ಸಚಿವರು ಉತ್ತರಿಸುತ್ತಾರೆ ಎಂದು ಹೇಳಿದರು. ಆದರೆ, ಮಾತನಾಡಲು ಅವಕಾಶ ಸಿಗದ ಶಾಸಕರು ಸುಮ್ಮನಾಗಲಿಲ್ಲ. ಮಾತನಾಡಲು ಅವಕಾಶ ಕೊಡಬೇಕೆಂದು ಪಟ್ಟು ಹಿಡಿದರು. ಈ ವೇಳೆ ಚರ್ಚೆ ಮುಂದುವರಿಸಿ ಎಂದು ಸಭಾಧ್ಯಕ್ಷ ಕಾಗೇರಿ, ವಲ್ಲದ ಮನಸಿನಿಂದ ಒಪ್ಪಿಕೊಂಡರು.
ಆಗ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಹಿಳೆ ಅತ್ಯಾಚಾರದಿಂದ ಪಾರಾಗಲು ಸಾಧ್ಯವಿಲ್ಲ ಎಂದು ಗೊತ್ತಾದಾಗ ಆ ಪರಿಸ್ಥಿತಿಯನ್ನು ಸಂತಸದಿಂದ ಅನುಭವಿಸಬೇಕು (“Actually there is a saying, when rape is inevitable laydown and enjoy it. That’s the exactly the position in to which you are”) ಎಂಬ ಮಾತನ್ನು ಹೇಳಿಬಿಟ್ಟರು. ವಿಧಾನಸೌಧ ಅಂದರೆ ದೇವಾಲಯ ಇದ್ದಂತೆ.. ಇಲ್ಲಿ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮಹಿಳೆಯರು ಪ್ರಶ್ನೆ ಮಾಡುತ್ತಿದ್ದಾರೆ.
Enjoy if you can’t stop being raped

























Discussion about this post