ಚಿಕ್ಕಮಗಳೂರು: ಹಿಂದೂಗಳ ರಕ್ಷಣೆಗೆ ತ್ರಿಶೂಲ ಧಾರಣೆ ಮಾಡಿದರಷ್ಟೇ ಸಾಲದು, ದೇಶದ ಪ್ರತಿ ಮನೆಮನೆಯಲ್ಲಿಯೂ ಶೌರ್ಯ ಪ್ರಶಿಕ್ಷಣವರ್ಗ ನಡೆಸುವ ಅಗತ್ಯವಿದೆ ಎಂದು ವಿಶ್ವ ಹಿಂದೂ ಪರಿಷತ್ ಅಖಿಲ ಭಾರತೀಯ ಸಹ ಪ್ರಧಾನ ಕಾರ್ಯದರ್ಶಿಸ್ಥಾಣು ಮಾಲನ್ ಹೇಳಿದರು.
ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ದತ್ತ ಜಯಂತಿ ಹಾಗೂ ದತ್ತಮಾಲಾ ಅಭಿಯಾನದ ಭಾಗವಾಗಿ ಇಂದು ನಗರದ ಆಜಾದ್ ವೃತ್ತದಲ್ಲಿ ನಡೆದ ಶೋಭಾ ಯಾತ್ರೆಯ ಸಮಾಪನ ಕಾರ್ಯಕ್ರಮದ ಬಹಿರಂಗ ಸಭೆಯನ್ನುದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು.
ಮತಾಂತರ ನಿಷೇಧ ಕಾಯ್ದೆ ದೇಶದ ೧೦ ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿದ್ದರು ಸಮರ್ಥವಾಗಿ ತಡೆಯಲು ಸಾಧ್ಯವಾಗಿಲ್ಲಾ ದೇಶದಲ್ಲಿ ನಡೆಯುತ್ತಿರುವ ಮತಾಂತರ ತಡೆಯಲು ಕೇವಲ ಕಾಯ್ದೆಯಿಂದ ಸಾಧ್ಯವಿಲ್ಲ ,ಜಾಗೃತ ಸಮಾಜದಿಂದ ಮತಾಂತರ ತಪ್ಪಿಸಲು ಸಾಧ್ಯ ಎಂದು ಹೇಳಿದರು.
ಬಲಹೀನ ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ನಿರಂತರ ದಾಳಿಗಳನ್ನು ತಪ್ಪಿಸಿ ರಕ್ಷಣೆ ನೀಡಲು ವಿಶ್ವ ಹಿಂದೂ ಪರಿಷತ್ ಸ್ಥಾಪಿಸಲಾಗಿದೆ ಎಂದು ಹೇಳಿದರು. ಸಂಸ್ಕೃತಿ ರಕ್ಷಣೆ, ಸೇವೆ ಸುರಕ್ಷೆ ಸಂಸ್ಕಾರ ಪಾಲಿಸುವ ಪಾಠ ಮನೆಯಿಂದಲೇ ಆರಂಭವಾಗಬೇಕು, ಆಮೂಲಕ ರಾಷ್ಟ್ರ ರಕ್ಷಣೆಗೆ ಯುವಜನತೆಯನ್ನು ಸಜ್ಜುಗೊಳಿಸಬೇಕೆಂದು ಕರೆ ನೀಡಿದರು.
ನಾವೆಲ್ಲ ಹಿಂದು ನಾವೆಲ್ಲ ಒಂದು ಎಂದು ಘೋಷಣೆಗಳನ್ನು ಕೂಗಿದರು ಹಿಂದೂ ಸಮಾಜದೊಳಗೆ ಸಾವಿರಾರು ವರ್ಷಗಳಿಂದ ಅಸ್ಪೃಶ್ಯತೆಯಂತಹ ವೈರುಧ್ಯಗಳು ಜೀವಂತವಾಗಿದೆ ಇದನ್ನು ತೊಡೆದು ಹಾಕಬೇಕಾದ ಅಗತ್ಯವಿದೆ ಎಂದು ಹೇಳಿದರು.
ಭಾರತ ದೇಶದಲ್ಲಿ ಹಿಂದೂ ಸನಾತನ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದರೆರೂ ಅದನ್ನು ಬುದ್ದಿ ಪೂರ್ವಕವಾಗಿ ತಿರುಚುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಈ ಬಗ್ಗೆ ಹಿಂದೂ ಸಮಾಜ ಜಾಗೃತರಾಗಬೇಕು ಎಂದು ಕರೆ ನೀಡಿದರು.
ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ಹಿಂದುಗಳು ಮುಗ್ಧರಾಗಿದ್ದರೆ ರಕ್ಷಣೆ ಸಾಧ್ಯವಿಲ್ಲಾ ಶಾಸ್ತ್ರದ ಜೊತೆಗೆ ಶಸ್ತ್ರ ಬಳಕೆಯ ತರಬೇತಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಮತಾಂತರ ಕಾಯ್ದೆಯನ್ನು ವಿರೋಧಿಸುತ್ತಿರುವವರು ಸೋಗಲಾಡಿಗಳಾಗಿದ್ದು, ಬಲವಂvದ ಮತಾಂತರ ಇಲ್ಲ ಎಂದರೆ ಕಾಯ್ದೆಯ ಬಗ್ಗೆ ಭಯವೇಕೆ ಎಂದು ಪ್ರಶ್ನಿಸಿದರು.
ವಿಶ್ವ ಹಿಂದೂ ಪರಿಷತ್ನ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಮಾತನಾಡಿ ಶೋಭಾಯಾತ್ರೆಯಲ್ಲಿ ಯುವಜನತೆಯ ಅಮಿತೋತ್ಸಾಹ ಕುಣಿದು ಕುಪ್ಪಳಿಸಲು ಮಾತ್ರ ಸೀಮಿತವಾಗದೆ ಹಿಂದೂ ಸಮಾಜದ ರಕ್ಷಣೆಗಾಗಿ ಸಂಕಲ್ಪಿಸಿದಾಗ ಮಾತ್ರ ಹಿಂದೂ ಧರ್ಮ ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಿಂದೂ ಧರ್ಮದಿಂದ ನಮ್ಮದೇ ದೇಶದ ಮೂಲ ಧರ್ಮಗಳಾದ ಬೌದ್ಧ,ಜೈನ ಧರ್ಮಗಳಿಗೆ ಮತಾಂತರವಾದರೆ ಸಂಸ್ಕೃತಿಯ ಅವಸಾನವಾಗುವುದಿಲ್ಲ ಎಂದು ಪ್ರತಿಪಾದಿಸಿ ಅವರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಹಿಂದೂ ಧರ್ಮದ ಬಗ್ಗೆ ಬೇಸರಗೊಂಡು ನಮ್ಮದೇ ದೇಶದ ಮೂಲ ಸಂಸ್ಕೃತಿಯನ್ನು ಒಳಗೊಂಡ ಬೌದ್ಧ ಧರ್ಮಕ್ಕೆ ಮತಾಂತರವಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಬೇರು ಗಂಡಿ ಮಠದ ರೇಣುಕಾ ಮಹಾಂತ ಶಿವಾಚಾರ್ಯರು ಮಾತನಾಡಿ ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದು. ರಾಷ್ಟ್ರಸೇವೆಗೆ ಮನೆ ಮನೆಯಿಂದ ಯುವಕರು ತೆರಳಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬಜರಂಗದಳದ ಹಿರಿಯ ಮುಖಂಡ ಸೂರ್ಯನಾರಾಯಣ, ಪ್ರಾಂತ ಸಂಯೋಜಕ ರಘು ಸಕಲೇಶಪುರ ಪ್ರಸ್ತಾವಿಕವಾಗಿ ಮಾತನಾಡಿದರು. ಬಜರಂಗದಳದ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ ಪೈ, ಜಿಲ್ಲಾ ಕಾರ್ಯದರ್ಶಿ ಮಹೇಂದ್ರ,ಬಜರಂಗದಳದ ಜಿಲ್ಲಾ ಕಾರ್ಯದರ್ಶಿ ಶಶಾಂಕ್ ಹೆರೂರು ಸೇರಿದಂತೆ ಹಲವರಿದ್ದರು
There is a need to conduct a gallantry class at home as well.
Discussion about this post