Sandalwood News: ಪಾರು ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನರಾಗಿದ್ದಾರೆ. ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್, ಮೇ 26ರಂದು ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಶ್ರೀಧರ್ ಫೋಟೋ ವೈರಲ್ ಆಗಿತ್ತು. ಗುರುತು ಸಿಗದಷ್ಟು ಶ್ರೀಧರ್ ಬದಲಾಗಿದ್ದರು. ಸುಂದರವಾಗಿದ್ದ ಶ್ರೀಧರ್, ರೋಗ ಬಾಧಿಸಿ, ಸೋರಗಿ ಹೋಗಿದ್ದರು. ತನಗೆ ಇದ್ದಕ್ಕಿದ್ದ ಹಾಗೆ ಅನಾರೋಗ್ಯ ಬಾಧಿಸಿದ್ದು, ನನ್ನ ಬಳಿ ಇದ್ದ ಸೇವಿಂಗ್ಸ್ ಖಾಲಿಯಾಗಿದೆ. ಯಾರಾದರೂ ಧನ ಸಹಾಯ ಮಾಡಿ ಎಂದು ರಿಕ್ವೆಸ್ಟ್ ಮಾಡಿದ್ದರು.
ಶ್ರೀಧರ್ ಕಳೆದ ಕೆಲ ವರ್ಷಗಳಿಂದ ಒಬ್ಬರೇ ವಾಸಿಸುತ್ತಿದ್ದರು. ಅವರ ಪತ್ನಿ ಮತ್ತು ಅವರ 5 ವರ್ಷದ ಮಗ ಅವರನ್ನು ಬಿಟ್ಟು, ಹೋಗಿದ್ದರಿಂದ ಮನೆಯಲ್ಲಿ ಆರೋಗ್ಯಕರ ಅಡುಗೆ ಮಾಡಿ ಹಾಕಲು ಯಾರೂ ಇರಲಿಲ್ಲ. ಹ“ತ್ತಿಗೆ ಸರಿಯಾಗಿ ಊಟ, ತಿಂಡಿ ಇಲ್ಲದೇ, ತಾನು ಈ ರೀತಿಯಾಗಿ ಅನಾರೋಗ್ಯಕ್ಕೀಡಾಗಬೇಕಾಯಿತು ಎಂದು ಶ್ರೀಧರ್ ಹೇಳಿದ್ದರು.
ಅಲ್ಲದೇ, ತಾನು ಕಲಾವಿದನಾಗುವ ಮುನ್ನ, ಇಡ್ಲಿ, ದೋಸೆ ಮಾಡಿ ಮಾರುತ್ತಿದ್ದೆ. ಆದರೆ ಈಗ ಯಾವ ಕೆಲಸವೂ ಇಲ್ಲ, ಕೆಲಸ ಮಾಡಲು ಶಕ್ತಿಯೂ ಇಲ್ಲ. ಕೂಡಿಟ್ಟ ಸೇವಿಂಗ್ಸ್ ಎಲ್ಲ ಖಾಲಿಯಾಗಿದೆ. ಪತ್ನಿ ನನ್ನ ದುಡ್ಡಿನಿಂದ ಆಸ್ತಿ ಖರೀದಿ ಮಾಡಿ, ಅದನ್ನು ತನ್ನ ಅಪ್ಪನ ಹೆಸರಿಗೆ ಬರೆಸಿಕೊಂಡು, ಮನೆಯಲ್ಲಿರುವ ಪಾತ್ರೆಯನ್ನೂ ಬಿಡದೇ, ಎಲ್ಲವನ್ನೂ ಬಾಚಿ ಕೊಂಡು, ಮಗನನ್ನು ಕರೆದುಕೊಂಡು ಹೋದಲು ಎಂದು ಕಣ್ಣೀರು ಹಾಕಿದ್ದರು.
ಸಂಬಂಧಿಕರೆಲ್ಲರೂ ದೂರಾಗಿದ್ದರು. ನನ್ನ ಜತೆ ಯಾರೂ ಇರಲಿಲ್ಲ. ಇದೀಗ ನನ್ನ ಅನಾರೋಗ್ಯದ ಸುದ್ದಿ ಕೇಳಿ, ನನ್ನ ತಾಯಿ ನನ್ನನ್ನು ನೋಡಿಕೊಳ್ಳಲು ನನ್ನ ಬಳಿ ಬಂದಿದ್ದಾರೆ ಎಂದು ಹೇಳಿದ್ದರು. ಅವರ ತಾಯಿಯೇ ಅವರ ಕೊ ದಿನಗಳಲ್ಲಿ ಅವರನ್ನು ನೋಡಿಕೊಂಡಿದ್ದರು.
ಇದೀಗ ಚಿಕಿತ್ಸೆ ಫಲಿಸದೇ, ಶ್ರೀಧರ್ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರ ಮೃತದೇಹವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗಿದೆ.
ನಮ್ಮ ನಡುವಿದ್ದ ಕಲಾವಿದ ಶ್ರೀಧರ ನಾಯಕ್ ಬಹಳ ದಿನಗಳ ಅನಾರೋಗ್ಯದಿಂದ ಮುಕ್ತರಾಗಿ ರಾತ್ರಿ ೧೦ ಗಂಟೆಗೆ ದೇವಸನ್ನಿಧಿ ಸೇರಿದ್ದಾರೆ. ಅವರ ಪಾರ್ಥೀವ ಶರೀರವು ಹೆಬ್ಬಾಳದಲ್ಲಿರುವ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 11 ಘಂಟೆಯವರೆಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಿರುತ್ತಾರೆ… ಅವರ ದೇಹದ ಕ್ರಿಯಾಕರ್ಮದ ವಿವರಗಳಿಗೆ ಅವರ ತಮ್ಮನವರ ಈ +91 96867 11336 ಗೆ ಸಂಪರ್ಕಿಸಿ ಎಂದು ಸಹಕಲಾಾವಿದರಾಾದ ನಾಗೇಂದ್ರ ಶಾನ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ಶ್ರೀಧರ್ ಅವರು, ಪಾರು, ವಧು, ಮಂಗಳಗೌರಿ ಸೇರಿ ಕನ್ನಡದ 40ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದರು. ಮ್ಯಾಕ್ಸ್ ಚಿತ್ರದಲ್ಲೂ ಸಹ ಶ್ರೀಧರ್ ನಟಿಸಿದ್ದರು. ಇದೀಗ ಅವರ ಸಾವು ಅವರ ಅಭಿಮಾನಿಗಳಲ್ಲಿ ಅಪಾರ ನೋವುಂಟು ಮಾಡಿದೆ. ಕನ್ನಡ ಚಿತ್ರರಂಗ, ಶ್ರೀಧರ್ ಸಾಾವಿಗೆ ಕಂಬನಿ ಮಿಡಿದಿದೆ.
Discussion about this post